ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, 9 ಸದಸ್ಯರನ್ನು ಒಳಗೊಂಡಿರುವ ಈ ಸಮಿತಿಯ ಶರಾವತಿ ಸಂತ್ರಸ್ತರ ಸಮೀಕ್ಷೆ ನಡೆಸಿ, ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಕಾರ್ಯೋನ್ಮುಖವಾಗಲಿದೆ. ಜಿಲ್ಲೆಯ ಹೊಸನಗರ, ಸಾಗರ, ಸೊರಬ, ಶಿಕಾರಿಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂತ್ರಸ್ತರಿದ್ದು, ದಾಖಲಾತಿಗಳನ್ನು ಕಲೆಹಾಕಲಾಗುವುದು. ವಿಶೇಷ ಜಿಲ್ಲಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸರ್ವೆ ಸೂಪರ್ವೈಸರ್ ಸೇರಿ ಸಿಬ್ಬಂದಿ ಒಳಗೊಂಡ ತಂಡ ನಿರಂತರವಾಗಿ ಕಾರ್ಯನಿರ್ವಸಹಿಲಿದೆ ಎಂದರು.