ಬೆಳಿಗ್ಗೆ 10ಕ್ಕೆ ಹೊರಟ ಪಾದಯಾತ್ರೆಯಲ್ಲಿ ಸಾವಿರಾರು ಅರಣ್ಯವಾಸಿಗಳು ಜೊತೆಗೂಡಿದರು. ನೂರಾರು ಮಹಿಳೆಯರು ಮಕ್ಕಳು ಭಾಗಿಯಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇರಾತ್ರಿ 12ರವರೆಗೂ ಪ್ರತಿಭಟನೆ ನಡೆಸಿ
ದರು. ಯಾವುದೇ ಅಧಿಕಾರಿಗಳು ಅಹವಾಲು ಕೇಳಲು ಬರದಿದ್ದಾಗ ಆಕ್ರೋಶಗೊಂಡ ರೈತರು ಅರಣ್ಯಾಧಿಕಾರಿ ಕಚೇರಿಯ ಮೇಲ್ಭಾಗಕ್ಕೆ ಹತ್ತಲು ಪ್ರಯತ್ನಿಸಿದರು. ಪ್ರತಿಭಟನಕಾರರ ತಾಳ್ಮೆ ಕಟ್ಟೆಯೊಡೆಯುತ್ತಿದ್ದುದನ್ನು ಗಮನಿಸಿದ ಸಿಪಿಐ ಕೃಷ್ಣಪ್ಪ ಮತ್ತು ಕಾರ್ಗಲ್ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ಮನವೊಲಿಸಿ ಕಚೇರಿ ಏರುವುದನ್ನು ತಡೆದರು.