‘ಆಗ ನನ್ನೊಂದಿಗೆ ರಾಧಾರತ್ನಮ್ಮ, ಭೀಮಶೆಟ್ರು, ನರಸಿಂಹಮೂರ್ತಿ ಸೇರಿ ಇನ್ನಿಬ್ಬರು ಇದ್ದರು. ಅವರ ಹೆಸರು ಮರೆತಿದ್ದೇನೆ. ಅವರು ನಿಧನರಾಗಿದ್ದಾರೆ. ಈಗ ತಾಲ್ಲೂಕಿನಲ್ಲಿ ಇರುವ ಏಕೈಕ ಸ್ವತಂತ್ರ್ಯ ಹೋರಾಟಗಾರ ಎಂದು ತಹಶೀಲ್ದಾರ್ ನನ್ನನ್ನು ಗೌರವಿಸಿ ಧ್ವಜ ನೀಡಿದ್ದಾರೆ. ಇದು ಹೆಮ್ಮೆ ಎನಿಸಿದೆ’ ಎಂದು ಹೇಳುವಾಗ ಅವರ ಕಣ್ಣಾಲಿಗಳಲ್ಲಿ ನೀರು ತೇಲಿತು.