ಮಾರ್ಚ್ 27ರಂದು ನಡೆದ ಶಿಕಾರಿಪುರದ ಗಲಭೆಗೂ, ಬಂಜಾರ ಸಮುದಾಯಕ್ಕೂ ಸಂಬಂಧವಿಲ್ಲ ಎಂದ ಅವರು, ‘ಮೀಸಲಾತಿ ವಿಷಯವಾಗಿ, ಸಮುದಾಯದ ಮುಖಂಡರು ಶಾಂತ ರೀತಿಯಲ್ಲಿಯೇ ಪ್ರತಿಭಟಿಸಿದ್ದರು. ಬಿಜೆಪಿಯವರೇ ಈ ಗಲಭೆಗೆ ಪ್ರತ್ಯಕ್ಷ ರೂವಾರಿಗಳು. ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಿದವರು ಸಮುದಾಯದ ಹೋರಾಟಗಾರರಲ್ಲ. ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಬಂಧಿಸಿದ್ದಾರೆ’ ಎಂದು ಆರೋಪಿಸಿದರು.