‘ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ದಿನಕ್ಕೆ ನೂರಾರು ಲೀಟರ್ ಹಾಲು ನೀಡುವ ರೈತನ ಸ್ಥಿತಿ ಗಂಭೀರವಾಗಿದೆ. ವಿಸ್ತರಣಾಧಿಕಾರಿಗಳ ಮೌಖಿಕ ಆದೇಶವು ಸಂಘಕ್ಕೆ ನುಂಗಲಾರದ ತುತ್ತಾಗಿದ್ದು, ರೈತರು ಹಸುವನ್ನು ಸಾಕಲು ಆಗದೇ ಹಸುವನ್ನು ಮಾರಲೂ ಆಗದೇ ಪರಿತಪಿಸುವಂತಾಗಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.