ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ | ಮಳೆ, ಆನೆ ದಾಳಿಗೆ ಬೆಳೆಹಾನಿ: ಕಂಗೆಟ್ಟ ರೈತರು

ಮಲಿಕಾರ್ಜುನ ಮುಂಬಾಳು/ರಿ. ರಾ. ರವಿಶಂಕರ್
Published : 16 ಡಿಸೆಂಬರ್ 2024, 7:16 IST
Last Updated : 16 ಡಿಸೆಂಬರ್ 2024, 7:16 IST
ಫಾಲೋ ಮಾಡಿ
Comments
ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದಲ್ಲಿ ಭತ್ತದ ಫಸಲು ನೀರಿನಲ್ಲಿ ಒದ್ದೆಯಾಗಿರುವುದು
ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದಲ್ಲಿ ಭತ್ತದ ಫಸಲು ನೀರಿನಲ್ಲಿ ಒದ್ದೆಯಾಗಿರುವುದು
ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮಲಾಪುರದಲ್ಲಿ ಮಳೆಯಿಂದ ಹಾನಿಗೊಳಗಾದ ಅಡಿಕೆಯನ್ನು ರೈತ ಕುಟುಂಬದವರು ಹಸನು ಮಾಡಿದ್ದು ಹೀಗೆ
ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮಲಾಪುರದಲ್ಲಿ ಮಳೆಯಿಂದ ಹಾನಿಗೊಳಗಾದ ಅಡಿಕೆಯನ್ನು ರೈತ ಕುಟುಂಬದವರು ಹಸನು ಮಾಡಿದ್ದು ಹೀಗೆ
ಕಾಡಾನೆಗಳು ಅರಸಾಳು ಅರಣ್ಯ ವಲಯದಿಂದ ಬಂದು ತಂಗಳವಾಡಿ ಕಣ್ಣೂರು ಗ್ರಾಮಗಳಲ್ಲಿ ಬೆಳೆ ಹಾನಿ ಮಾಡಿವೆ. ಆನೆಗಳನ್ನು ಹಿಮ್ಮೆಟ್ಟಿಸಲು 2 ತಂಡ ರಚಿಸಲಾಗಿದೆ. ಪರಿಹಾರಕ್ಕಾಗಿ ರೈತರು ಪಹಣಿ ಪತ್ರ ನೀಡಬೇಕು.
ರವಿಕುಮಾರ್‌ ಆನಂದಪುರ ವಲಯ ಅರಣ್ಯಾಧಿಕಾರಿ
ಕಾಡಾನೆ ಹಾವಳಿಯಿಂದ ಅನೇಕ ರೈತರ ಭತ್ತ ಕಬ್ಬು ಅಡಿಕೆ ಬಾಳೆ ನಷ್ಟವಾಗಿದೆ. ಖಾತೆದಾರರನ್ನಷ್ಟೇ ಪರಿಗಣಿಸದೆ ಕಂದಾಯ ಇಲಾಖೆ ಮೂಲಕ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ಆದಷ್ಟು ಬೇಗ ಓಡಿಸಬೇಕು
ಕನ್ನಪ್ಪ ರೈತ
ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿಗೆ ರೈತರಿಗೆ ಸೂಕ್ತ ಪರಿಹಾರ ನೀಡಲು ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು.
ವಾಟಗೋಡು ಸುರೇಶ್‌ ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್‌ ಅಧ್ಯಕ್ಷ
ಪರಿಹಾರ ಪಡೆಯಲು ಪಹಣಿ ಇಲ್ಲ..!
ಸಾಗರ ತಾಲ್ಲೂಕಿನಲ್ಲಿ ಬಹಳಷ್ಟು ರೈತರು ಬಗರ್‌ ಹುಕುಂ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಕಾಡಾನೆ ದಾಳಿಯಿಂದ ಬೆಳೆ ನಷ್ವವಾದರೆ ಪರಿಹಾರ ಕೊಡಲು ಅರಣ್ಯ ಇಲಾಖೆಯವರು ಪಹಣಿ ಕೇಳುತ್ತಾರೆ. ಪಹಣಿ  ಇಲ್ಲದಿದ್ದರೆ ತಾಂತ್ರಿಕ ತೊಂದರೆಯ ನೆಪವೊಡ್ಡಿ ಪರಿಹಾರ ನಿರಾಕರಿಸುತ್ತಿದ್ದಾರೆ. ಹೀಗಾದರೆ ನಷ್ಟ ತುಂಬಿಕೊಳ್ಳಲು ಏನು ಮಾಡಬೇಕು? ಎಂಬುದು ರೈತರ ಪ್ರಶ್ನೆಯಾಗಿದೆ. ಸರ್ಕಾರವೇ ಇದಕ್ಕೆ ಉತ್ತರ ಕೊಡಲಿ. ಕಂದಾಯ ಇಲಾಖೆ ಮೂಲಕವಾದರೂ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT