ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣವೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಭತ್ತ ನಾಶ

Last Updated 9 ಜನವರಿ 2022, 14:17 IST
ಅಕ್ಷರ ಗಾತ್ರ

ಕುಂಸಿ:ಸಮೀಪದ ಹೊಸೂರಿನಲ್ಲಿಭಾನುವಾರ ಬೆಳಿಗ್ಗೆ ಜಮೀನಿನಲ್ಲಿದ್ದ ಭತ್ತದ ಬಣವೆಗೆಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ಹಾಗೂ ಹುಲ್ಲು ನಾಶವಾಗಿದೆ.

ಜಮೀನು ಮಾಲೀಕ ಹಾಗೂ ಗ್ರಾಮಸ್ಥರು ಬೆಂಕಿ ಆರಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

‘ಮೂರು ಎಕರೆಯಲ್ಲಿ ಬೆಳೆದಿದ್ದ ಭತ್ತವನ್ನು ಕೊಯ್ಲು ಮಾಡಿ, ಸಂಗ್ರಹಿಸಿದ್ದೆವು. ಬಣವೆಗೆ ಬೆಂಕಿ ಬಿದ್ದು, ಭತ್ತದ ಬೆಳೆ ಮತ್ತು ಹುಲ್ಲು ಸುಟ್ಟಿದೆ. ₹ 3 ಲಕ್ಷ ನಷ್ಟವಾಗಿದೆ’ ಎಂದು ಜಮೀನಿನ ಮಾಲಿಕಗುತ್ಯಮ್ಮ ಮಾಲತೇಶ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಕಂದಾಯ ಅಧಿಕಾರಿ ಹಾಗೂ ಕೃಷಿ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT