ಭದ್ರಾವತಿ: ವಾರಾಂತ್ಯದ ಕರ್ಫ್ಯೂ ಕರೆಗೆ ತಾಲ್ಲೂಕಿನೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಪ್ರಮುಖ ರಸ್ತೆಗಳು, ಆಯಕಟ್ಟಿನ ಪ್ರದೇಶಗಳು ಜನದಟ್ಟಣೆ ಇಲ್ಲದೆ ಬಿಕೊ ಎನ್ನುತ್ತಿದ್ದರೆ, ಪೊಲೀಸರು ಸರ್ಕಾರಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.
‘ಹಿಂದೆಲ್ಲಕ್ಕಿಂತ ಈ ಬಾರಿ ಸಾರ್ವಜನಿಕರು ಒಳ್ಳೆ ರೀತಿಯ ಸಹಕಾರ ನೀಡಿದ್ದಾರೆ. ನಮಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಪರಿಸ್ಥಿತಿ ಅರಿತು ಸಹಕರಿಸಿದ್ದಾರೆ’ ಎಂದು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹೇಳಿದರು.
‘ನಮ್ಮ ಸಿಬ್ಬಂದಿ ಎಲ್ಲೆಡೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದು ಬಿಟ್ಟರೆ ಹಿಂದಿನ ಲಾಕ್ಡೌನ್ ರೀತಿಯ ಹರಸಾಹಸ ಪಡಬೇಕಾದ ಸ್ಥಿತಿ ಇರಲಿಲ್ಲ.ಮಾಸ್ಕ್ ಧರಿಸದೆ ಓಡಾಟ ನಡೆಸಿದ್ದ ಸುಮಾರು 65 ಮಂದಿ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದೇವೆ’ ಎಂದುತಿಳಿಸಿದರು.