<p><strong>ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ):</strong> ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿರುವ ಚರ್ಚ್ನಲ್ಲಿ ಹುಂಡಿ ಹಣದ ವಿಚಾರವಾಗಿ ಎರಡು ಟ್ರಸ್ಟ್ಗಳ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ಹಲ್ಲೆಗೆ ಕಾರಣವಾಗಿದೆ.</p>.<p>ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿರುವ ಚರ್ಚ್ ಹಳೆಯ ಮತ್ತು ಹೊಸ ಟ್ರಸ್ಟ್ ಒಳಗೊಂಡಿದೆ. ‘ಭಕ್ತರು ಚರ್ಚ್ನ ಹುಂಡಿಗೆ ಹಾಕುವ ಕಾಣಿಕೆ ಹಣ ನಮಗೇ ಸೇರಬೇಕು’ ಎಂದು ಎರಡೂ ಬಣದವರು ವಾಗ್ವಾದ ನಡೆಸಿದ್ದಾರೆ. ಹಣ ದುರ್ಬಳಕೆಯಾಗಿದೆ ಎಂದು ಪರಸ್ಪರ ಆರೋಪಿಸಿ ಚರ್ಚ್ನಲ್ಲಿ ದಾಂದಲೆ ನಡೆಸಿದ್ದಾರೆ. ಈ ಸಂದರ್ಭ ಹಲ್ಲೆ ನಡೆಸಲಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಎರಡೂ ಬಣದವರು ಪಟ್ಟಣದ ಪೊಲೀಸ್ ಠಾಣೆಗೆ ದೂರು– ಪ್ರತಿದೂರು ನೀಡಿದ್ದಾರೆ. ಚರ್ಚ್ ಹುಂಡಿಯ ಹಣ ಪ್ರಾರ್ಥನಾ ಸಭೆಗೆ ಹಾಗೂ ಚರ್ಚ್ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಕೆಯಾಗಬೇಕೆಂಬುದು ಭಕ್ತರ ಆಗ್ರಹವಾಗಿದೆ. ಶಿವಮೊಗ್ಗದಿಂದ ದುಷ್ಕರ್ಮಿಗಳನ್ನು ಕರೆಸಿ ಹಲ್ಲೆ ನಡೆಸಲಾಗಿದೆ ಎಂದು ಕ್ಯಾಂಪ್ನ ನಿವಾಸಿಗಳು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ):</strong> ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿರುವ ಚರ್ಚ್ನಲ್ಲಿ ಹುಂಡಿ ಹಣದ ವಿಚಾರವಾಗಿ ಎರಡು ಟ್ರಸ್ಟ್ಗಳ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ಹಲ್ಲೆಗೆ ಕಾರಣವಾಗಿದೆ.</p>.<p>ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿರುವ ಚರ್ಚ್ ಹಳೆಯ ಮತ್ತು ಹೊಸ ಟ್ರಸ್ಟ್ ಒಳಗೊಂಡಿದೆ. ‘ಭಕ್ತರು ಚರ್ಚ್ನ ಹುಂಡಿಗೆ ಹಾಕುವ ಕಾಣಿಕೆ ಹಣ ನಮಗೇ ಸೇರಬೇಕು’ ಎಂದು ಎರಡೂ ಬಣದವರು ವಾಗ್ವಾದ ನಡೆಸಿದ್ದಾರೆ. ಹಣ ದುರ್ಬಳಕೆಯಾಗಿದೆ ಎಂದು ಪರಸ್ಪರ ಆರೋಪಿಸಿ ಚರ್ಚ್ನಲ್ಲಿ ದಾಂದಲೆ ನಡೆಸಿದ್ದಾರೆ. ಈ ಸಂದರ್ಭ ಹಲ್ಲೆ ನಡೆಸಲಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಎರಡೂ ಬಣದವರು ಪಟ್ಟಣದ ಪೊಲೀಸ್ ಠಾಣೆಗೆ ದೂರು– ಪ್ರತಿದೂರು ನೀಡಿದ್ದಾರೆ. ಚರ್ಚ್ ಹುಂಡಿಯ ಹಣ ಪ್ರಾರ್ಥನಾ ಸಭೆಗೆ ಹಾಗೂ ಚರ್ಚ್ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಕೆಯಾಗಬೇಕೆಂಬುದು ಭಕ್ತರ ಆಗ್ರಹವಾಗಿದೆ. ಶಿವಮೊಗ್ಗದಿಂದ ದುಷ್ಕರ್ಮಿಗಳನ್ನು ಕರೆಸಿ ಹಲ್ಲೆ ನಡೆಸಲಾಗಿದೆ ಎಂದು ಕ್ಯಾಂಪ್ನ ನಿವಾಸಿಗಳು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>