<p><strong>ಸಾಗರ: </strong>ನಗರದ ಸಾಗರ್ ಹೋಟೆಲ್ ವೃತ್ತದಲ್ಲಿ ರಂಗಪಂಚಮಿ ಉತ್ಸವ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಂಗಪಂಚಮಿ ಉತ್ಸವದಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣ ಎರೆಚುವ ಮೂಲಕ ಓಕಳಿಯಾಟದಲ್ಲಿ ಭಾಗಿಯಾಗಿದ್ದರು.</p>.<p>ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಎಲ್ಲಾ ವಯೋಮಾನದವರೂ ಓಕುಳಿಯಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಬ್ಯಾರಿಕೇಡ್ ನಿರ್ಮಿಸುವ ಮೂಲಕ ಉತ್ಸವ ಆಚರಣೆಗೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸಂಗೀತಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.</p><p>ಆರಂಭದಲ್ಲಿ ಉತ್ಸವವನ್ನು ಉದ್ಘಾಟಿಸಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ‘ಇಂತಹ ಉತ್ಸವಗಳು ಮನುಷ್ಯನನ್ನು ಮಾನಸಿಕ ಒತ್ತಡದಿಂದ ಹೊರತರುತ್ತವೆ. ಪರಸ್ಪರ ಬೆರೆತು ಆಚರಿಸುವ ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಮೂಡುತ್ತದೆ’ ಎಂದರು.</p><p>‘ರಂಗಪಂಚಮಿ ಉತ್ಸವ ಆಚರಣೆಗೆ ವಿಶೇಷ ಮಹತ್ವವಿದೆ. ಜಾತಿ, ಪಂಥಗಳನ್ನು ಮೀರಿ ಆಚರಿಸುವ ಹಲವು ಆಚರಣೆಗಳಲ್ಲಿ ಇದು ಕೂಡ ಒಂದಾಗಿದೆ’ ಎಂದು ಎಬಿವಿಪಿ ಮುಖಂಡ ಅಭಿಷೇಕ್ ಹೇಳಿದರು.</p><p>ಪ್ರಮುಖರಾದ ಯಶವಂತ ಫಣಿ, ಕಿರಣ್ ಎಂ.ಶೇಟ್, ಸತೀಶ್ ಗಾಯ್ಕವಾಡ್, ರವಿ, ರಾಜು, ಪ್ರಶಾಂತ್ ರಾಯ್ಕರ್, ಸಂದೇಶ್, ರವಿಚಂದನ್, ಗಣೇಶ್ ವಿ.ಶೇಟ್, ಪವನ್, ಜೀವನ್, ರಾಮು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ನಗರದ ಸಾಗರ್ ಹೋಟೆಲ್ ವೃತ್ತದಲ್ಲಿ ರಂಗಪಂಚಮಿ ಉತ್ಸವ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಂಗಪಂಚಮಿ ಉತ್ಸವದಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣ ಎರೆಚುವ ಮೂಲಕ ಓಕಳಿಯಾಟದಲ್ಲಿ ಭಾಗಿಯಾಗಿದ್ದರು.</p>.<p>ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಎಲ್ಲಾ ವಯೋಮಾನದವರೂ ಓಕುಳಿಯಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಬ್ಯಾರಿಕೇಡ್ ನಿರ್ಮಿಸುವ ಮೂಲಕ ಉತ್ಸವ ಆಚರಣೆಗೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸಂಗೀತಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.</p><p>ಆರಂಭದಲ್ಲಿ ಉತ್ಸವವನ್ನು ಉದ್ಘಾಟಿಸಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ‘ಇಂತಹ ಉತ್ಸವಗಳು ಮನುಷ್ಯನನ್ನು ಮಾನಸಿಕ ಒತ್ತಡದಿಂದ ಹೊರತರುತ್ತವೆ. ಪರಸ್ಪರ ಬೆರೆತು ಆಚರಿಸುವ ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಮೂಡುತ್ತದೆ’ ಎಂದರು.</p><p>‘ರಂಗಪಂಚಮಿ ಉತ್ಸವ ಆಚರಣೆಗೆ ವಿಶೇಷ ಮಹತ್ವವಿದೆ. ಜಾತಿ, ಪಂಥಗಳನ್ನು ಮೀರಿ ಆಚರಿಸುವ ಹಲವು ಆಚರಣೆಗಳಲ್ಲಿ ಇದು ಕೂಡ ಒಂದಾಗಿದೆ’ ಎಂದು ಎಬಿವಿಪಿ ಮುಖಂಡ ಅಭಿಷೇಕ್ ಹೇಳಿದರು.</p><p>ಪ್ರಮುಖರಾದ ಯಶವಂತ ಫಣಿ, ಕಿರಣ್ ಎಂ.ಶೇಟ್, ಸತೀಶ್ ಗಾಯ್ಕವಾಡ್, ರವಿ, ರಾಜು, ಪ್ರಶಾಂತ್ ರಾಯ್ಕರ್, ಸಂದೇಶ್, ರವಿಚಂದನ್, ಗಣೇಶ್ ವಿ.ಶೇಟ್, ಪವನ್, ಜೀವನ್, ರಾಮು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>