ಮೃತ ವ್ಯಕ್ತಿ ಭದ್ರಾವತಿಯ ಕೆ.ಎಚ್.ನಗರದ ಆಟೊ ಚಾಲಕ ಶಶಿ (32) ಎಂದು ತಿಳಿದುಬಂದಿದೆ. 2021ರ ಜನವರಿಯಲ್ಲಿ ಹುಣಸೋಡು ಗ್ರಾಮದ ಬಳಿ ಇರುವ ಎಸ್.ಎಸ್.ಕ್ರಷರ್ ಬಳಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಅದರಲ್ಲಿ ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆರನೇ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಈಗ ಆ ವ್ಯಕ್ತಿಯ ಗುರುತು ಪತ್ತೆಯಾಗಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.