ಬಿಜೆಪಿಯಿಂದ ಕೆ.ಜಿ. ಕುಮಾರಸ್ವಾಮಿ ಹಾಗೂ ವೀರಭದ್ರಪ್ಪ ಪೂಜಾರ್, ಕಾಂಗ್ರೆಸ್ನಿಂದ ಭೀಮಪ್ಪ, ಮಲ್ಲಪ್ಪ ಅವರು ಈಗಾಗಲೇ ಚುನಾವಣಾ ಅಕಾಡಕ್ಕೆ ಇಳಿದಿದ್ದು, ಗ್ರಾಮಾಂತರ ಕ್ಷೇತ್ರದ ಹೊಳಹೊನ್ನೂರು, ಆನವೇರಿ, ಅರಹತೊಳಲು ಕೈಮರ, ಕಲ್ಲಿಹಾಳ್ ಸರ್ಕಲ್, ಅಗರದಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಬ್ಯಾನರ್ಗಳನ್ನು ಹಾಕಿಸಿದ್ದಾರೆ. ಅದರಲ್ಲಿ ಹೊಸ
ವರ್ಷ, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಜನರಿಗೆ ತಿಳಿಸುವ ಜೊತೆಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ‘ನಿಮ್ಮ ಆಶಿರ್ವಾದ ನಮ್ಮ ಮೇಲಿರಲಿ’ ಎಂದು ಕೋರುವ ಜೊತೆಗೆ ‘ಕ್ಷೇತ್ರದ ಆಕಾಂಕ್ಷಿ’ ಎಂದೂ ಬರೆಸಿಕೊಂಡಿದ್ದಾರೆ.