<p><strong>ಸಾಗರ:</strong> ಕನ್ನಡಕ್ಕೆ ತನ್ನದೇ ಆದ ವಿವೇಕವಿದೆ. ಈ ವಿವೇಕ ಹೇಗೆ ರೂಪುಗೊಂಡಿದೆ ಎನ್ನುವ ಬಗ್ಗೆ ಹೊಸ ತಲೆಮಾರು ಹುಡುಕಾಟ ನಡೆಸುವಂತೆ ಒತ್ತಡ ಹೇರಿದ್ದು ಕೆ.ವಿ.ಸುಬ್ಬಣ್ಣ ಅವರ ಹೆಗ್ಗಳಿಕೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. </p><p>ಸಮೀಪದ ಭೀಮನಕೋಣೆ ಗ್ರಾಮದ ಕಿನ್ನರಮೇಳ ಸಭಾಂಗಣದಲ್ಲಿ ಕೇಡಲಸರದ ಸಂಸ್ಕೃತಿ ಸಮಾಜ ಟ್ರಸ್ಟ್ ಶುಕ್ರವಾರ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p><p>ಬಂಡವಾಳಶಾಹಿ, ವಸಾಹತುಶಾಹಿ ವ್ಯವಸ್ಥೆಯು ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸುವ ಜೊತೆಗೆ ಸ್ಥಳೀಯರನ್ನು ಹೇಗೆ ಅನಾಥ ಮಾಡಬಲ್ಲದು ಎಂಬುದನ್ನು ಸುಬ್ಬಣ್ಣ 90ರ ದಶಕದಲ್ಲಿ ತಮ್ಮ ಬರಹಗಳಲ್ಲಿ ಗ್ರಹಿಸಿದ್ದಾರೆ. ಮೀಸಲಾತಿಯ ಅಪ್ರಸ್ತುತತೆ ಕುರಿತು ಸುಬ್ಬಣ್ಣ ಈ ಹಿಂದೆ ಹೇಳಿದ್ದು ಈಗ ನಿಜವಾಗುತ್ತಿದೆ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಇಲ್ಲ. ಖಾಸಗಿದಲ್ಲಿ ಮೀಸಲಾತಿ ಇಲ್ಲ. ಭೂ ಸುಧಾರಣೆಯಿಂದ ಕೃಷಿಕರ ಕೈ ಸೇರಿದ್ದ ಭೂಮಿ ಮರಳಿ ಬಂಡವಾಳಶಾಹಿಗಳ ಕೈಗೆ ಸೇರುತ್ತಿದೆ ಎಂದರು.</p><p>‘ಕುವೆಂಪು ಸಾಹಿತ್ಯಿಕವಾಗಿ ಯೋಚಿಸಿದ, ಬರಹಗಳ ಮೂಲಕ ಮಾಡಿದ ಕೆಲಸವನ್ನು ಸಾಂಸ್ಕೃತಿಕವಾಗಿ ಸಾಕಾರಗೊಳಿಸಿದ್ದು ಸುಬ್ಬಣ್ಣ ಅವರ ಸಾಧನೆ. ಪ್ರತಿನಿಧಿ ರಾಜಕಾರಣದ ಸ್ಥಾನದಲ್ಲಿ ಪ್ರಜಾ ರಾಜಕಾರಣ ನೆಲೆಸಬೇಕು ಎಂಬ ಆಶಯ ಸುಬ್ಬಣ್ಣ ಅವರ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ. ರಾಜಕೀಯ-ಸಾಹಿತ್ಯ ಒಟ್ಟೊಟ್ಟಿಗೆ ಸಾಗಿದರೆ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎಂದು ಸುಬ್ಬಣ್ಣ ಪ್ರತಿಪಾದಿಸಿದ್ದರು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಹೇಳಿದರು.</p><p>ರಂಗಕರ್ಮಿ ಚಿದಂಬರರಾವ್ ಜಂಬೆ ಅವರಿಗೆ ಕೆ.ವಿ.ಸುಬ್ಬಣ್ಣ ಗೌರವ ಪುರಸ್ಕಾರ ನೀಡಲಾಯಿತು. ರಂಗಕರ್ಮಿ ಪ್ರಸಾದ್ ರಕ್ಷಿದಿ, ಕೆ.ಜಿ.ಕೃಷ್ಣಮೂರ್ತಿ, ಕೆ.ಜಿ.ಮಹಾಬಲೇಶ್ವರ್, ವಿಮರ್ಶಕ ಟಿ.ಪಿ.ಅಶೋಕ್, ಉಮಾಮಹೇಶ್ವರ ಹೆಗಡೆ ಇದ್ದರು. ‘ಕೃಷ್ಣ ಸಂಧಾನ’ ತಾಳಮದ್ದಲೆ ಪ್ರಸ್ತುತಪಡಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಕನ್ನಡಕ್ಕೆ ತನ್ನದೇ ಆದ ವಿವೇಕವಿದೆ. ಈ ವಿವೇಕ ಹೇಗೆ ರೂಪುಗೊಂಡಿದೆ ಎನ್ನುವ ಬಗ್ಗೆ ಹೊಸ ತಲೆಮಾರು ಹುಡುಕಾಟ ನಡೆಸುವಂತೆ ಒತ್ತಡ ಹೇರಿದ್ದು ಕೆ.ವಿ.ಸುಬ್ಬಣ್ಣ ಅವರ ಹೆಗ್ಗಳಿಕೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. </p><p>ಸಮೀಪದ ಭೀಮನಕೋಣೆ ಗ್ರಾಮದ ಕಿನ್ನರಮೇಳ ಸಭಾಂಗಣದಲ್ಲಿ ಕೇಡಲಸರದ ಸಂಸ್ಕೃತಿ ಸಮಾಜ ಟ್ರಸ್ಟ್ ಶುಕ್ರವಾರ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p><p>ಬಂಡವಾಳಶಾಹಿ, ವಸಾಹತುಶಾಹಿ ವ್ಯವಸ್ಥೆಯು ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸುವ ಜೊತೆಗೆ ಸ್ಥಳೀಯರನ್ನು ಹೇಗೆ ಅನಾಥ ಮಾಡಬಲ್ಲದು ಎಂಬುದನ್ನು ಸುಬ್ಬಣ್ಣ 90ರ ದಶಕದಲ್ಲಿ ತಮ್ಮ ಬರಹಗಳಲ್ಲಿ ಗ್ರಹಿಸಿದ್ದಾರೆ. ಮೀಸಲಾತಿಯ ಅಪ್ರಸ್ತುತತೆ ಕುರಿತು ಸುಬ್ಬಣ್ಣ ಈ ಹಿಂದೆ ಹೇಳಿದ್ದು ಈಗ ನಿಜವಾಗುತ್ತಿದೆ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಇಲ್ಲ. ಖಾಸಗಿದಲ್ಲಿ ಮೀಸಲಾತಿ ಇಲ್ಲ. ಭೂ ಸುಧಾರಣೆಯಿಂದ ಕೃಷಿಕರ ಕೈ ಸೇರಿದ್ದ ಭೂಮಿ ಮರಳಿ ಬಂಡವಾಳಶಾಹಿಗಳ ಕೈಗೆ ಸೇರುತ್ತಿದೆ ಎಂದರು.</p><p>‘ಕುವೆಂಪು ಸಾಹಿತ್ಯಿಕವಾಗಿ ಯೋಚಿಸಿದ, ಬರಹಗಳ ಮೂಲಕ ಮಾಡಿದ ಕೆಲಸವನ್ನು ಸಾಂಸ್ಕೃತಿಕವಾಗಿ ಸಾಕಾರಗೊಳಿಸಿದ್ದು ಸುಬ್ಬಣ್ಣ ಅವರ ಸಾಧನೆ. ಪ್ರತಿನಿಧಿ ರಾಜಕಾರಣದ ಸ್ಥಾನದಲ್ಲಿ ಪ್ರಜಾ ರಾಜಕಾರಣ ನೆಲೆಸಬೇಕು ಎಂಬ ಆಶಯ ಸುಬ್ಬಣ್ಣ ಅವರ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ. ರಾಜಕೀಯ-ಸಾಹಿತ್ಯ ಒಟ್ಟೊಟ್ಟಿಗೆ ಸಾಗಿದರೆ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎಂದು ಸುಬ್ಬಣ್ಣ ಪ್ರತಿಪಾದಿಸಿದ್ದರು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಹೇಳಿದರು.</p><p>ರಂಗಕರ್ಮಿ ಚಿದಂಬರರಾವ್ ಜಂಬೆ ಅವರಿಗೆ ಕೆ.ವಿ.ಸುಬ್ಬಣ್ಣ ಗೌರವ ಪುರಸ್ಕಾರ ನೀಡಲಾಯಿತು. ರಂಗಕರ್ಮಿ ಪ್ರಸಾದ್ ರಕ್ಷಿದಿ, ಕೆ.ಜಿ.ಕೃಷ್ಣಮೂರ್ತಿ, ಕೆ.ಜಿ.ಮಹಾಬಲೇಶ್ವರ್, ವಿಮರ್ಶಕ ಟಿ.ಪಿ.ಅಶೋಕ್, ಉಮಾಮಹೇಶ್ವರ ಹೆಗಡೆ ಇದ್ದರು. ‘ಕೃಷ್ಣ ಸಂಧಾನ’ ತಾಳಮದ್ದಲೆ ಪ್ರಸ್ತುತಪಡಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>