<p><strong>ಶಿವಮೊಗ್ಗ:</strong> ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುದ್ಧ ಸನ್ನದ್ಧತೆಯ ಭಾಗವಾಗಿ ಬುಧವಾರ ಇಲ್ಲಿನ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ (ಆರ್ಆರ್ಯು) ಆವರಣದಲ್ಲಿ ನಾಗರಿಕರ ಸ್ವರಕ್ಷಣೆಯ ತಾಲೀಮು ನಡೆಸಲಾಯಿತು.</p>.<p>ಶತ್ರುಗಳ ದಾಳಿಯ ಬಗ್ಗೆ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವರಕ್ಷಣೆಯ ತಾಲೀಮು ನಡೆಸಿದರು. ವೈರಿಗಳ ದಾಳಿಯ ವೇಳೆ ಅಡಗುವಿಕೆ, ಗಾಯಗೊಂಡವರ ತೆರವುಗೊಳಿಸುವುದು, ಹಿರಿಯರು, ಮಕ್ಕಳನ್ನು ರಕ್ಷಿಸುವುದು, ಬಯಲು ಪ್ರದೇಶದಲ್ಲಿ ದಾಳಿಯಿಂದ ರಕ್ಷಣೆಯ ಬಗ್ಗೆ ತಾಲೀಮು ನಡೆಯಿತು.</p>.<p>ದಾಳಿಯ ವೇಳೆ ಗಾಯಗೊಂಡವರನ್ನು ಹೊತ್ತು ತರುವುದು. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವ ತಾಲೀಮಿನ ಜೊತೆಗೆ ರಾತ್ರಿ ವೇಳೆ ಬಾಂಬ್ ದಾಳಿ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.</p>.<p>ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನಿರ್ದೇಶಕಿ ಕಾವೇರಿ ಟಂಡನ್ ನೇತೃತ್ವದಲ್ಲಿ ಈ ಸ್ವರಕ್ಷಣೆಯ ತಾಲೀಮು ನಡೆಯಿತು.</p>.<p><strong>ಸಿವಿಲ್ ಡಿಫೆನ್ಸ್ ಇಸ್ರೇಲ್ ಮಾದರಿ:</strong></p>.<p>‘ಸ್ವರಕ್ಷಣೆಯ ತಾಲೀಮನ್ನು ಇಸ್ರೇಲ್ ದೇಶದಲ್ಲಿ ಶಾಲಾ ಹಂತದಲ್ಲಿಯೇ ಹೇಳಿಕೊಡಲಾಗುತ್ತದೆ. ಸದಾ ಯುದ್ಧ ಭೀತಿಯಲ್ಲಿರುವ ಇಸ್ರೇಲ್ಗೆ ಅದು ಅನಿವಾರ್ಯವೂ ಹೌದು. ವಾಸ್ತವವಾಗಿ ಸ್ವರಕ್ಷಣೆ ತಾಲೀಮು ಮಹಾಭಾರತದಲ್ಲಿನ ಪರಿಕಲ್ಪನೆ. ಯುದ್ಧದ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ಈ ತಾಲೀಮು ಅನಿವಾರ್ಯ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಜೊತೆಯಲ್ಲಿರುವವರನ್ನು ರಕ್ಷಿಸಲು ಇದು ನೆರವಾಗುತ್ತದೆ. ಮಹಾಭಾರತದಲ್ಲಿ ಇದು ನಕುಲ ನೀತಿ ಎಂದು ಬಳಕೆಯಲ್ಲಿತ್ತು’ ಎಂದು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಡಿಫೆನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿದ್ಧಾರ್ಥ ಹೇಳಿದರು.</p>.<p>‘ಸ್ವರಕ್ಷಣೆಯ ತಾಲೀಮಿನ ವೇಳೆ ನಾವು ಇರುವ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವೈರಿಯ ದಾಳಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡು ಕನಿಷ್ಠ ಅವಕಾಶಗಳಲ್ಲಿ ಗರಿಷ್ಠ ಜೀವ ಉಳಿಸುವ ಕಲೆ ಅರಿತುಕೊಳ್ಳಬೇಕಿದೆ’ ಎಂದರು.</p>.<p>ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಲಿಂಗಪ್ಪ ಅಂಗಡಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು.</p>.<p>ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಪರೋಕ್ಷವಾಗಿ ನೆರವಾಗುವುದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ನೆರವಾಗುವುದು, ರಾತ್ರಿ ವೇಳೆ ಬಾಂಬ್ ದಾಳಿಯಿಂದ ರಕ್ಷಣೆಗೆ ಸಾಮೂಹಿಕವಾಗಿ ವಿದ್ಯುತ್ ಬೆಳಕು ಆರಿಸುವ ಬಗ್ಗೆಯೂ ತಿಳಿಸಿಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುದ್ಧ ಸನ್ನದ್ಧತೆಯ ಭಾಗವಾಗಿ ಬುಧವಾರ ಇಲ್ಲಿನ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ (ಆರ್ಆರ್ಯು) ಆವರಣದಲ್ಲಿ ನಾಗರಿಕರ ಸ್ವರಕ್ಷಣೆಯ ತಾಲೀಮು ನಡೆಸಲಾಯಿತು.</p>.<p>ಶತ್ರುಗಳ ದಾಳಿಯ ಬಗ್ಗೆ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವರಕ್ಷಣೆಯ ತಾಲೀಮು ನಡೆಸಿದರು. ವೈರಿಗಳ ದಾಳಿಯ ವೇಳೆ ಅಡಗುವಿಕೆ, ಗಾಯಗೊಂಡವರ ತೆರವುಗೊಳಿಸುವುದು, ಹಿರಿಯರು, ಮಕ್ಕಳನ್ನು ರಕ್ಷಿಸುವುದು, ಬಯಲು ಪ್ರದೇಶದಲ್ಲಿ ದಾಳಿಯಿಂದ ರಕ್ಷಣೆಯ ಬಗ್ಗೆ ತಾಲೀಮು ನಡೆಯಿತು.</p>.<p>ದಾಳಿಯ ವೇಳೆ ಗಾಯಗೊಂಡವರನ್ನು ಹೊತ್ತು ತರುವುದು. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವ ತಾಲೀಮಿನ ಜೊತೆಗೆ ರಾತ್ರಿ ವೇಳೆ ಬಾಂಬ್ ದಾಳಿ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.</p>.<p>ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನಿರ್ದೇಶಕಿ ಕಾವೇರಿ ಟಂಡನ್ ನೇತೃತ್ವದಲ್ಲಿ ಈ ಸ್ವರಕ್ಷಣೆಯ ತಾಲೀಮು ನಡೆಯಿತು.</p>.<p><strong>ಸಿವಿಲ್ ಡಿಫೆನ್ಸ್ ಇಸ್ರೇಲ್ ಮಾದರಿ:</strong></p>.<p>‘ಸ್ವರಕ್ಷಣೆಯ ತಾಲೀಮನ್ನು ಇಸ್ರೇಲ್ ದೇಶದಲ್ಲಿ ಶಾಲಾ ಹಂತದಲ್ಲಿಯೇ ಹೇಳಿಕೊಡಲಾಗುತ್ತದೆ. ಸದಾ ಯುದ್ಧ ಭೀತಿಯಲ್ಲಿರುವ ಇಸ್ರೇಲ್ಗೆ ಅದು ಅನಿವಾರ್ಯವೂ ಹೌದು. ವಾಸ್ತವವಾಗಿ ಸ್ವರಕ್ಷಣೆ ತಾಲೀಮು ಮಹಾಭಾರತದಲ್ಲಿನ ಪರಿಕಲ್ಪನೆ. ಯುದ್ಧದ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ಈ ತಾಲೀಮು ಅನಿವಾರ್ಯ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಜೊತೆಯಲ್ಲಿರುವವರನ್ನು ರಕ್ಷಿಸಲು ಇದು ನೆರವಾಗುತ್ತದೆ. ಮಹಾಭಾರತದಲ್ಲಿ ಇದು ನಕುಲ ನೀತಿ ಎಂದು ಬಳಕೆಯಲ್ಲಿತ್ತು’ ಎಂದು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಡಿಫೆನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿದ್ಧಾರ್ಥ ಹೇಳಿದರು.</p>.<p>‘ಸ್ವರಕ್ಷಣೆಯ ತಾಲೀಮಿನ ವೇಳೆ ನಾವು ಇರುವ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವೈರಿಯ ದಾಳಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡು ಕನಿಷ್ಠ ಅವಕಾಶಗಳಲ್ಲಿ ಗರಿಷ್ಠ ಜೀವ ಉಳಿಸುವ ಕಲೆ ಅರಿತುಕೊಳ್ಳಬೇಕಿದೆ’ ಎಂದರು.</p>.<p>ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಲಿಂಗಪ್ಪ ಅಂಗಡಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು.</p>.<p>ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಪರೋಕ್ಷವಾಗಿ ನೆರವಾಗುವುದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ನೆರವಾಗುವುದು, ರಾತ್ರಿ ವೇಳೆ ಬಾಂಬ್ ದಾಳಿಯಿಂದ ರಕ್ಷಣೆಗೆ ಸಾಮೂಹಿಕವಾಗಿ ವಿದ್ಯುತ್ ಬೆಳಕು ಆರಿಸುವ ಬಗ್ಗೆಯೂ ತಿಳಿಸಿಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>