ಜಿಲ್ಲೆಯಲ್ಲಿ ಹೆಚ್ಚು ಹಾನಿ ಸಂಭವಿಸಿದ ಹಾಗೂ ಅತಿ ಹೆಚ್ಚು ಮಳೆಯಾದ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳನ್ನು ಈ ಪಟ್ಟಿಯಿಂದ ಕೈ ಬಿಟ್ಟಿರುವುದು ಆಚ್ಚರಿ ಮೂಡಿಸಿದೆ. ಈ ಎರಡೂ ತಾಲ್ಲೂಕಿನಲ್ಲಿ ಗುಡ್ಡ ಕುಸಿತ, ಧರೆ ಕುಸಿತ ಪ್ರಕರಣಗಳು, ಕಾಲು ಸಂಕ ಕೊಚ್ಚಿ ಹೋದ ಪ್ರಕರಣಗಳು ಹೆಚ್ಚಿದ್ದರೂ ಅತಿವೃಷ್ಟಿ ಪೀಡಿತ ಎಂದು ಪರಿಗಣಿಸದೇ ಇರುವುದು ವಿಪರ್ಯಾಸ ಎಂದು ತೀರ್ಥಹಳ್ಳಿಯ ಅಖಿಲೇಶ್ ಪ್ರತಿಕ್ರಿಯಿಸಿದರು.