<p>ಸಾಗರ: <strong>ಅಧ್ಯಯನಶೀಲ ಸಂಸದೀಯ ಪಟು ಆಗಿದ್ದ ಕೆ.ಎಚ್.ಶ್ರೀನಿವಾಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಮಾಡಿರುವ ಭಾಷಣಗಳಲ್ಲಿ ಸತ್ವಪೂರ್ಣ ಸಂಗತಿಗಳಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. </strong></p>.<p><strong>ಇಲ್ಲಿನ ಎಲ್ಬಿ ಮತ್ತು ಎಸ್ಬಿಎಸ್ ಕಾಲೇಜಿನಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಬುಧವಾರ ಏರ್ಪಡಿಸಿದ್ದ ಕೆ.ಎಚ್.ಶ್ರೀನಿವಾಸ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಕೃತಿ ‘ಮಲೆನಾಡ ಮಾತುಗಾರ’ ಬಿಡುಗಡೆ ಮಾಡಿ ಮಾತನಾಡಿದರು. </strong></p>.<p><strong>ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಸಾಕಷ್ಟು ಸಿದ್ಧತೆಗಳೊಂದಿಗೆ ಶ್ರೀನಿವಾಸ್ ಬರುತ್ತಿದ್ದರು. ಹೀಗಾಗಿ ಅವರ ಮಾತುಗಳಿಗೆ ಅಧಿಕೃತತೆ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಶಾಸಕರಲ್ಲಿ ಅಧ್ಯಯನದ ಕೊರತೆಯ ಕಾರಣ ಸದನದಲ್ಲಿನ ಚರ್ಚೆಗಳ ಗುಣಮಟ್ಟ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.</strong></p>.<p><strong>ಗ್ರಾಮೀಣ ಪರಿಸರದ ಹಿನ್ನೆಲೆಯ ಶ್ರೀನಿವಾಸ್ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದು ಸಾಮಾನ್ಯ ಸಂಗತಿಯಲ್ಲ. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.</strong></p>.<p><strong>ಅಡಿಕೆ ಬೆಳೆಗಾರರು ಬಳಸುವ ನೀರಿನ ಮೇಲೆ ಸರ್ಕಾರ ತೆರಿಗೆ ಹೇರಿದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಎದುರು ಕೆ.ಎಚ್.ಶ್ರೀನಿವಾಸ್ ಸಮರ್ಥವಾಗಿ ವಾದ ಮಂಡಿಸಿ ಅವೈಜ್ಞಾನಿಕ ತೆರಿಗೆ ರದ್ದಾಗುವಂತೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಹಕಾರಿ ಮುಖಂಡ ಎಂ.ಹರನಾಥರಾವ್ ತಿಳಿಸಿದರು.</strong></p>.<p><strong>ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಗುಣವಿರುವ ಕೆ.ಎಚ್.ಶ್ರೀನಿವಾಸ್ ಅವರ ಕಾವ್ಯದಲ್ಲಿ ಭಾರತೀಯ ತತ್ವಶಾಸ್ತ್ರ, ಪುರಾಣ ಕಾವ್ಯ ಪರಂಪರೆಯ ನೆನಪುಗಳನ್ನು ಜಾಗೃತಗೊಳಿಸುವ ಅಂಶಗಳು ದಟ್ಟವಾಗಿವೆ ಎಂದು ವಿಮರ್ಶಕ ಟಿ.ಪಿ.ಅಶೋಕ್ ವಿಶ್ಲೇಷಿಸಿದರು.</strong></p>.<p><strong>ಮಲೆನಾಡಿನ ಜೀವನಕ್ರಮ ಹೇಗೆ ವಿಘಟಿತವಾಗುತ್ತಿದೆ ಎಂಬುದನ್ನು ತಮ್ಮ ಕಾವ್ಯದಲ್ಲಿ ಕೆ.ಎಚ್.ಕಟ್ಟಿಕೊಟ್ಟಿದ್ದಾರೆ. ರಾಜಕಾರಣವೇ ಅಪ್ರಸ್ತುತವಾಗುತ್ತಿರುವ ವಿದ್ಯಮಾನಗಳಿಗೂ ಅವರ ಕಾವ್ಯ ಕನ್ನಡಿ ಹಿಡಿದಿದೆ ಎಂದು ವಿವರಿಸಿದರು.</strong></p>.<p><strong>ಕೇವಲ ಮಾತುಗಾರ ಮಾತ್ರವಲ್ಲದೆ ಕನಸುಗಾರ ಕೂಡ ಆಗಿದ್ದದ್ದು ಕೆ.ಎಚ್.ಶ್ರೀನಿವಾಸ್ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಈ ಕಾರಣಕ್ಕಾಗಿಯೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಂತಹ ಶಿಕ್ಷಣ ಸಂಸ್ಥೆಯನ್ನು ಅನೇಕರೊಂದಿಗೆ ಕಟ್ಟಲು ಅವರಿಗೆ ಸಾಧ್ಯವಾಯಿತು ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.</strong></p>.<p><strong>ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ಶಿವಕುಮಾರ್ ಸ್ವಾಗತಿಸಿದರು. ಕೆ.ಎಸ್.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.</strong></p>.<p><strong>ಲಂಚ</strong></p><p>- ಪಿಂಚಣಿ ನೀಡಲು ₹25000 ಲಂಚ ಕೇಳಿದ ವಿಧಾನಸಭೆ ಸಿಬ್ಬಂದಿ ಕೆ.ಎಚ್.ಶ್ರೀನಿವಾಸ್ ಅವರ ಪಿಂಚಣಿ ಹಣವನ್ನು ಅವರ ಪತ್ನಿಗೆ ನೀಡಲು ವಿಧಾನಸಭೆಯ ಮಹಿಳಾ ಸಿಬ್ಬಂದಿಯೊಬ್ಬರು ₹25000 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗವನ್ನು ಬಸವರಾಜ ಹೊರಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಮಟ್ಟಿಗೆ ನಮ್ಮ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ ಅವರು ಲಂಚ ಕೇಳಿದ ಸಿಬ್ಬಂದಿಯನ್ನು ಕೂಡಲೆ ಅಮಾನತುಗೊಳಿಸಿ ಒಂದು ದಿನದೊಳಗೆ ಪಿಂಚಣಿ ಕೊಡಿಸುವ ವ್ಯವಸ್ಥೆ ಮಾಡಿದ್ದನ್ನು ಅವರು ಉಲ್ಲೇಖಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: <strong>ಅಧ್ಯಯನಶೀಲ ಸಂಸದೀಯ ಪಟು ಆಗಿದ್ದ ಕೆ.ಎಚ್.ಶ್ರೀನಿವಾಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಮಾಡಿರುವ ಭಾಷಣಗಳಲ್ಲಿ ಸತ್ವಪೂರ್ಣ ಸಂಗತಿಗಳಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. </strong></p>.<p><strong>ಇಲ್ಲಿನ ಎಲ್ಬಿ ಮತ್ತು ಎಸ್ಬಿಎಸ್ ಕಾಲೇಜಿನಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಬುಧವಾರ ಏರ್ಪಡಿಸಿದ್ದ ಕೆ.ಎಚ್.ಶ್ರೀನಿವಾಸ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಕೃತಿ ‘ಮಲೆನಾಡ ಮಾತುಗಾರ’ ಬಿಡುಗಡೆ ಮಾಡಿ ಮಾತನಾಡಿದರು. </strong></p>.<p><strong>ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಸಾಕಷ್ಟು ಸಿದ್ಧತೆಗಳೊಂದಿಗೆ ಶ್ರೀನಿವಾಸ್ ಬರುತ್ತಿದ್ದರು. ಹೀಗಾಗಿ ಅವರ ಮಾತುಗಳಿಗೆ ಅಧಿಕೃತತೆ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಶಾಸಕರಲ್ಲಿ ಅಧ್ಯಯನದ ಕೊರತೆಯ ಕಾರಣ ಸದನದಲ್ಲಿನ ಚರ್ಚೆಗಳ ಗುಣಮಟ್ಟ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.</strong></p>.<p><strong>ಗ್ರಾಮೀಣ ಪರಿಸರದ ಹಿನ್ನೆಲೆಯ ಶ್ರೀನಿವಾಸ್ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದು ಸಾಮಾನ್ಯ ಸಂಗತಿಯಲ್ಲ. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.</strong></p>.<p><strong>ಅಡಿಕೆ ಬೆಳೆಗಾರರು ಬಳಸುವ ನೀರಿನ ಮೇಲೆ ಸರ್ಕಾರ ತೆರಿಗೆ ಹೇರಿದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಎದುರು ಕೆ.ಎಚ್.ಶ್ರೀನಿವಾಸ್ ಸಮರ್ಥವಾಗಿ ವಾದ ಮಂಡಿಸಿ ಅವೈಜ್ಞಾನಿಕ ತೆರಿಗೆ ರದ್ದಾಗುವಂತೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಹಕಾರಿ ಮುಖಂಡ ಎಂ.ಹರನಾಥರಾವ್ ತಿಳಿಸಿದರು.</strong></p>.<p><strong>ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಗುಣವಿರುವ ಕೆ.ಎಚ್.ಶ್ರೀನಿವಾಸ್ ಅವರ ಕಾವ್ಯದಲ್ಲಿ ಭಾರತೀಯ ತತ್ವಶಾಸ್ತ್ರ, ಪುರಾಣ ಕಾವ್ಯ ಪರಂಪರೆಯ ನೆನಪುಗಳನ್ನು ಜಾಗೃತಗೊಳಿಸುವ ಅಂಶಗಳು ದಟ್ಟವಾಗಿವೆ ಎಂದು ವಿಮರ್ಶಕ ಟಿ.ಪಿ.ಅಶೋಕ್ ವಿಶ್ಲೇಷಿಸಿದರು.</strong></p>.<p><strong>ಮಲೆನಾಡಿನ ಜೀವನಕ್ರಮ ಹೇಗೆ ವಿಘಟಿತವಾಗುತ್ತಿದೆ ಎಂಬುದನ್ನು ತಮ್ಮ ಕಾವ್ಯದಲ್ಲಿ ಕೆ.ಎಚ್.ಕಟ್ಟಿಕೊಟ್ಟಿದ್ದಾರೆ. ರಾಜಕಾರಣವೇ ಅಪ್ರಸ್ತುತವಾಗುತ್ತಿರುವ ವಿದ್ಯಮಾನಗಳಿಗೂ ಅವರ ಕಾವ್ಯ ಕನ್ನಡಿ ಹಿಡಿದಿದೆ ಎಂದು ವಿವರಿಸಿದರು.</strong></p>.<p><strong>ಕೇವಲ ಮಾತುಗಾರ ಮಾತ್ರವಲ್ಲದೆ ಕನಸುಗಾರ ಕೂಡ ಆಗಿದ್ದದ್ದು ಕೆ.ಎಚ್.ಶ್ರೀನಿವಾಸ್ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಈ ಕಾರಣಕ್ಕಾಗಿಯೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಂತಹ ಶಿಕ್ಷಣ ಸಂಸ್ಥೆಯನ್ನು ಅನೇಕರೊಂದಿಗೆ ಕಟ್ಟಲು ಅವರಿಗೆ ಸಾಧ್ಯವಾಯಿತು ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.</strong></p>.<p><strong>ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ಶಿವಕುಮಾರ್ ಸ್ವಾಗತಿಸಿದರು. ಕೆ.ಎಸ್.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.</strong></p>.<p><strong>ಲಂಚ</strong></p><p>- ಪಿಂಚಣಿ ನೀಡಲು ₹25000 ಲಂಚ ಕೇಳಿದ ವಿಧಾನಸಭೆ ಸಿಬ್ಬಂದಿ ಕೆ.ಎಚ್.ಶ್ರೀನಿವಾಸ್ ಅವರ ಪಿಂಚಣಿ ಹಣವನ್ನು ಅವರ ಪತ್ನಿಗೆ ನೀಡಲು ವಿಧಾನಸಭೆಯ ಮಹಿಳಾ ಸಿಬ್ಬಂದಿಯೊಬ್ಬರು ₹25000 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗವನ್ನು ಬಸವರಾಜ ಹೊರಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಮಟ್ಟಿಗೆ ನಮ್ಮ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ ಅವರು ಲಂಚ ಕೇಳಿದ ಸಿಬ್ಬಂದಿಯನ್ನು ಕೂಡಲೆ ಅಮಾನತುಗೊಳಿಸಿ ಒಂದು ದಿನದೊಳಗೆ ಪಿಂಚಣಿ ಕೊಡಿಸುವ ವ್ಯವಸ್ಥೆ ಮಾಡಿದ್ದನ್ನು ಅವರು ಉಲ್ಲೇಖಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>