<p><strong>ಸಾಗರ</strong>: ‘ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸುತ್ತದೆ’ ಎಂದು ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಮೇಸ್ತ್ರಿ ಹೇಳಿದರು. <br></p><p>ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಮಾಸ್ಟರ್ ಶಂಕರ್ ಕಲಾವೃಂದದ 35ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಒಂದು ಊರಿನ ಆರೋಗ್ಯವನ್ನು ಕಾಪಾಡುವ ಪರಿಕರಗಳಾಗಿವೆ ಎಂದರು. <br></p><p>ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 21 ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಮುಖಂಡ ಎಸ್.ಬಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರನ್ನು ದೀಪಕ್ ಸಾಗರ್ ಪರಿಚಯಿಸಿದರು. </p><p>ಪ್ರಮುಖರಾದ ಕಲಸೆ ಚಂದ್ರಪ್ಪ, ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ರಾಜು ಬಿ.ಮಡಿವಾಳ, ಕೆ.ಸತೀಶ್, ವಿ.ಕೆ.ವಿಜಯಕುಮಾರ್, ಜಗದೀಶ್ ಕುರ್ಡೇಕರ್, ಬಣ್ಣದ ಬಾಬು, ನಾಗರಾಜ್, ಶಿವಮೂರ್ತಿ, ವಿ.ಶಂಕರ್ ಇದ್ದರು. </p><p>ಮಾಲತಿ ಪ್ರಾರ್ಥಿಸಿದರು. ಶಿಕ್ಷಕರ ಸಿಆರ್ ಪಿ ಬಳಗದವರು ನಾಡಗೀತೆ ಹಾಡಿದರು. ಅರುಣ್ ಕುಮಾರ್ ವಂದಿಸಿದರು. ಸಿ.ಪಿ.ಗಣೇಶ್ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong>: ‘ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸುತ್ತದೆ’ ಎಂದು ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಮೇಸ್ತ್ರಿ ಹೇಳಿದರು. <br></p><p>ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಮಾಸ್ಟರ್ ಶಂಕರ್ ಕಲಾವೃಂದದ 35ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಒಂದು ಊರಿನ ಆರೋಗ್ಯವನ್ನು ಕಾಪಾಡುವ ಪರಿಕರಗಳಾಗಿವೆ ಎಂದರು. <br></p><p>ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 21 ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಮುಖಂಡ ಎಸ್.ಬಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರನ್ನು ದೀಪಕ್ ಸಾಗರ್ ಪರಿಚಯಿಸಿದರು. </p><p>ಪ್ರಮುಖರಾದ ಕಲಸೆ ಚಂದ್ರಪ್ಪ, ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ರಾಜು ಬಿ.ಮಡಿವಾಳ, ಕೆ.ಸತೀಶ್, ವಿ.ಕೆ.ವಿಜಯಕುಮಾರ್, ಜಗದೀಶ್ ಕುರ್ಡೇಕರ್, ಬಣ್ಣದ ಬಾಬು, ನಾಗರಾಜ್, ಶಿವಮೂರ್ತಿ, ವಿ.ಶಂಕರ್ ಇದ್ದರು. </p><p>ಮಾಲತಿ ಪ್ರಾರ್ಥಿಸಿದರು. ಶಿಕ್ಷಕರ ಸಿಆರ್ ಪಿ ಬಳಗದವರು ನಾಡಗೀತೆ ಹಾಡಿದರು. ಅರುಣ್ ಕುಮಾರ್ ವಂದಿಸಿದರು. ಸಿ.ಪಿ.ಗಣೇಶ್ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>