<p><strong>ಭದ್ರಾವತಿ:</strong> ತಾಲ್ಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಪಾಲಕರು ಬೈಯ್ಯುತ್ತಾರೆ ಎಂದು ಹೆದರಿ ತೋಟದಲ್ಲಿ ಅಡಗಿ ಕುಳಿತಿದ್ದು, ಗ್ರಾಮಸ್ಥರು ನಾಪತ್ತೆ ಶಂಕೆಯಿಂದ ಇಡೀರಾತ್ರಿ ಹುಡುಕಾಟ ನಡೆಸಿದರು.</p>.<p>ಧನುಷ್ (14), ಕಿರಣ್ (10), ಲೋಹಿತ್ (12), ಭುವನ್ (8) ಮತ್ತು ಲಕ್ಷ್ಮೀಶ (12) ಪಾಲಕರಿಗೆ ಹೇಳದೇ ಮೀನು ಹಿಡಿಯಲು ಹೋಗಿದ್ದರು. ಬರುವುದು ತಡವಾಗಿತ್ತು. ಮನೆಗೆ ಹೋದರೆ ಪಾಲಕರು ಬೈಯ್ಯುತ್ತಾರೆ ಎಂದು ಹೆದರಿದ ಮಕ್ಕಳು ಊರಿನ ತೋಟವೊಂದರಲ್ಲಿ ಅಡಗಿ ಕುಳಿತಿದ್ದರು.</p>.<p>ಇದನ್ನು ತಿಳಿಯದ ಪಾಲಕರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಹುಡುಕಾಟ ನಡೆಸಿದರು. ಅವರೊಂದಿಗೆ ಗ್ರಾಮಸ್ಥರೂ ಸೇರಿಕೊಂಡರು. ಸಂಜೆಯಾದರೂ ಮಕ್ಕಳು ಸಿಗದ ಕಾರಣ ಪೊಲೀಸರಿಗೂ ದೂರು ನೀಡಿದರು.</p>.<p>ಪಾಲಕರೊಂದಿಗೆ ಪೊಲೀಸರೂ ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸಿದರು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಬಾಲಕರು ಪತ್ತೆಯಾಗಲಿಲ್ಲ.</p>.<p>ಕೊನೆಗೆ ಸೋಮವಾರ ಬೆಳಗಿನ ಜಾವ ಊರಿನಿಂದ 1 ಕಿ.ಮೀ. ದೂರದಲ್ಲಿರುವ ತೋಟದಲ್ಲಿ ಬಾಲಕರು ಪತ್ತೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ತಾಲ್ಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಪಾಲಕರು ಬೈಯ್ಯುತ್ತಾರೆ ಎಂದು ಹೆದರಿ ತೋಟದಲ್ಲಿ ಅಡಗಿ ಕುಳಿತಿದ್ದು, ಗ್ರಾಮಸ್ಥರು ನಾಪತ್ತೆ ಶಂಕೆಯಿಂದ ಇಡೀರಾತ್ರಿ ಹುಡುಕಾಟ ನಡೆಸಿದರು.</p>.<p>ಧನುಷ್ (14), ಕಿರಣ್ (10), ಲೋಹಿತ್ (12), ಭುವನ್ (8) ಮತ್ತು ಲಕ್ಷ್ಮೀಶ (12) ಪಾಲಕರಿಗೆ ಹೇಳದೇ ಮೀನು ಹಿಡಿಯಲು ಹೋಗಿದ್ದರು. ಬರುವುದು ತಡವಾಗಿತ್ತು. ಮನೆಗೆ ಹೋದರೆ ಪಾಲಕರು ಬೈಯ್ಯುತ್ತಾರೆ ಎಂದು ಹೆದರಿದ ಮಕ್ಕಳು ಊರಿನ ತೋಟವೊಂದರಲ್ಲಿ ಅಡಗಿ ಕುಳಿತಿದ್ದರು.</p>.<p>ಇದನ್ನು ತಿಳಿಯದ ಪಾಲಕರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಹುಡುಕಾಟ ನಡೆಸಿದರು. ಅವರೊಂದಿಗೆ ಗ್ರಾಮಸ್ಥರೂ ಸೇರಿಕೊಂಡರು. ಸಂಜೆಯಾದರೂ ಮಕ್ಕಳು ಸಿಗದ ಕಾರಣ ಪೊಲೀಸರಿಗೂ ದೂರು ನೀಡಿದರು.</p>.<p>ಪಾಲಕರೊಂದಿಗೆ ಪೊಲೀಸರೂ ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸಿದರು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಬಾಲಕರು ಪತ್ತೆಯಾಗಲಿಲ್ಲ.</p>.<p>ಕೊನೆಗೆ ಸೋಮವಾರ ಬೆಳಗಿನ ಜಾವ ಊರಿನಿಂದ 1 ಕಿ.ಮೀ. ದೂರದಲ್ಲಿರುವ ತೋಟದಲ್ಲಿ ಬಾಲಕರು ಪತ್ತೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>