<p><strong>ತುಮಕೂರು:</strong> ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಾಂತಿನಗರದ ಉಪನ್ಯಾಸಕ ಬಿ.ಆರ್.ಶ್ರೀನಿವಾಸಪ್ರಭು ₹17.93 ಲಕ್ಷ ಕಳೆದುಕೊಂಡಿದ್ದಾರೆ.</p>.<p>ಶ್ರೀನಿವಾಸಪ್ರಭು ಅವರು ಫೇಸ್ಬುಕ್ನಲ್ಲಿ ‘Up-Stok 19 th Investment Plan’ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ಅವರ ನಂಬರ್ ‘Visionary Leaders Forum–223’ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಲಾಗಿದೆ. ಸದರಿ ಗ್ರೂಪ್ನಲ್ಲಿ ವನ್ಷಿಕಾ ಎಂಬುವರು ‘Upstoxpro’ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.</p>.<p>ಮೊದಲಿಗೆ ₹15 ಸಾವಿರ ವರ್ಗಾಯಿಸಿದ್ದು, ಹೆಚ್ಚಿನ ಆದಾಯ ಗಳಿಸಲು ಮತ್ತಷ್ಟು ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಆಗ ಮತ್ತೆ ₹2.40 ಲಕ್ಷ ಹೂಡಿಕೆ ಮಾಡಿದ್ದಾರೆ. ಶ್ರೀನಿವಾಸ ಆ್ಯಪ್ನಲ್ಲಿ ಪರಿಶೀಲಿಸಿದ್ದು, ಅವರಿಗೆ ₹10 ಲಕ್ಷ ಲಾಭ ಬಂದಿರುವುದಾಗಿ ತೋರಿಸಿದೆ. ಇದನ್ನು ನಂಬಿ ಮತ್ತೆ ₹4,80,500 ವರ್ಗಾವಣೆ ಮಾಡಿದ್ದು, ₹49 ಲಕ್ಷ ಲಾಭ ತೋರಿಸಿದೆ. ಸೈಬರ್ ವಂಚಕರು ‘ಹಣ ವಿತ್ ಡ್ರಾ ಮಾಡಿಕೊಳ್ಳಲು ಶೇ 20ರಷ್ಟು ತೆರಿಗೆ ಪಾವತಿಸಬೇಕು’ ಎಂದಿದ್ದಾರೆ.</p>.<p>ಶ್ರೀನಿವಾಸ ಹಂತ ಹಂತವಾಗಿ ಒಟ್ಟು ₹17,93,040 ವರ್ಗಾವಣೆ ಮಾಡಿದ್ದಾರೆ. ಹಣ ಪಡೆದುಕೊಳ್ಳಲು ಹೋದಾಗ ‘ಭದ್ರತಾ ಠೇವಣಿ’ ಎಂದು ₹4.50 ಲಕ್ಷ ಕಟ್ಟುವಂತೆ ಹೇಳಿದ್ದಾರೆ. ಮೋಸ ಹೋಗಿರುವ ವಿಚಾರ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಾಂತಿನಗರದ ಉಪನ್ಯಾಸಕ ಬಿ.ಆರ್.ಶ್ರೀನಿವಾಸಪ್ರಭು ₹17.93 ಲಕ್ಷ ಕಳೆದುಕೊಂಡಿದ್ದಾರೆ.</p>.<p>ಶ್ರೀನಿವಾಸಪ್ರಭು ಅವರು ಫೇಸ್ಬುಕ್ನಲ್ಲಿ ‘Up-Stok 19 th Investment Plan’ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ಅವರ ನಂಬರ್ ‘Visionary Leaders Forum–223’ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಲಾಗಿದೆ. ಸದರಿ ಗ್ರೂಪ್ನಲ್ಲಿ ವನ್ಷಿಕಾ ಎಂಬುವರು ‘Upstoxpro’ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.</p>.<p>ಮೊದಲಿಗೆ ₹15 ಸಾವಿರ ವರ್ಗಾಯಿಸಿದ್ದು, ಹೆಚ್ಚಿನ ಆದಾಯ ಗಳಿಸಲು ಮತ್ತಷ್ಟು ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಆಗ ಮತ್ತೆ ₹2.40 ಲಕ್ಷ ಹೂಡಿಕೆ ಮಾಡಿದ್ದಾರೆ. ಶ್ರೀನಿವಾಸ ಆ್ಯಪ್ನಲ್ಲಿ ಪರಿಶೀಲಿಸಿದ್ದು, ಅವರಿಗೆ ₹10 ಲಕ್ಷ ಲಾಭ ಬಂದಿರುವುದಾಗಿ ತೋರಿಸಿದೆ. ಇದನ್ನು ನಂಬಿ ಮತ್ತೆ ₹4,80,500 ವರ್ಗಾವಣೆ ಮಾಡಿದ್ದು, ₹49 ಲಕ್ಷ ಲಾಭ ತೋರಿಸಿದೆ. ಸೈಬರ್ ವಂಚಕರು ‘ಹಣ ವಿತ್ ಡ್ರಾ ಮಾಡಿಕೊಳ್ಳಲು ಶೇ 20ರಷ್ಟು ತೆರಿಗೆ ಪಾವತಿಸಬೇಕು’ ಎಂದಿದ್ದಾರೆ.</p>.<p>ಶ್ರೀನಿವಾಸ ಹಂತ ಹಂತವಾಗಿ ಒಟ್ಟು ₹17,93,040 ವರ್ಗಾವಣೆ ಮಾಡಿದ್ದಾರೆ. ಹಣ ಪಡೆದುಕೊಳ್ಳಲು ಹೋದಾಗ ‘ಭದ್ರತಾ ಠೇವಣಿ’ ಎಂದು ₹4.50 ಲಕ್ಷ ಕಟ್ಟುವಂತೆ ಹೇಳಿದ್ದಾರೆ. ಮೋಸ ಹೋಗಿರುವ ವಿಚಾರ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>