ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ತುಮಕೂರು | ಅಮಾನಿಕೆರೆ ಒಡಲಿಗೆ ಪ್ಲಾಸ್ಟಿಕ್‌ ತ್ಯಾಜ್ಯ

ಕಣ್ಮುಚ್ಚಿ ಕುಳಿತ ಆಡಳಿತ ವರ್ಗ; ನೀರು ಕಲುಷಿತ
Published : 18 ಅಕ್ಟೋಬರ್ 2025, 6:49 IST
Last Updated : 18 ಅಕ್ಟೋಬರ್ 2025, 6:49 IST
ಫಾಲೋ ಮಾಡಿ
Comments
ಅಮಾನಿಕೆರೆ ನೀರಿನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ
ಅಮಾನಿಕೆರೆ ನೀರಿನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ
ಎಲ್ಲ ಕೆರೆಗಳು ಕಲುಷಿತ
ನಗರದಲ್ಲಿ ಇರುವ ಎಲ್ಲ ಕೆರೆಗಳಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದೆ. ಮರಳೂರು ಕೆರೆ ಈಗಾಗಲೇ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಉಳಿದ ಕೆರೆಗಳಿಗೆ ಹೋಲಿಸಿದರೆ ಅಮಾನಿಕೆರೆ ಪರವಾಗಿಲ್ಲ ಎಂಬಂತಿದೆ. ತಕ್ಷಣಕ್ಕೆ ಎಚ್ಚೆತ್ತುಕೊಂಡು ರಕ್ಷಣೆಗೆ ಮುಂದಾಗದಿದ್ದರೆ ಇದು ಸಹ ಮತ್ತೊಂದು ಹಾಳಾದ ಕೆರೆಯ ಸಾಲಿಗೆ ಸೇರಲಿದೆ. ‘ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಬೇಸಿಗೆ ಸಮಯದಲ್ಲಷ್ಟೇ ನೀರಿನ ಮೂಲಗಳು ನೆನಪಾಗುತ್ತವೆ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಬಾವಿ ತೋಡಲು ಹೋಗುತ್ತಾರೆ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿ ಇರುವ ಕೆರೆ ಅಧ್ವಾನ ಆಗುತ್ತಿದೆ. ಪ್ಲಾಸ್ಟಿಕ್‌ ಬಾಟಲಿಗಳನ್ನು ಕೆರೆಗೆ ಎಸೆಯಲಾಗುತ್ತಿದೆ. ಜಿಲ್ಲಾಧಿಕಾರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಲು ಆಗದಿದ್ದರೂ ಪರವಾಗಿಲ್ಲ ಕನಿಷ್ಠ ಕಚೇರಿಯಿಂದ ಹೊರ ಬಂದು ಕೆರೆಯ ಪರಿಸ್ಥಿತಿ ನೋಡಲಿ’ ಎಂದು ಅಣೆತೋಟ ಪ್ರದೇಶದ ಪರಶುರಾಮ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT