<p><strong>ತುಮಕೂರು: </strong>ರಾಜ್ಯದ ಬಹುತೇಕ ಜಿಲ್ಲೆಗಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹೊಸ ಸಾರಥಿಯ ಪದಗ್ರಹಣವಾಗಿಲ್ಲ. ಇದು ಕಾರ್ಯಕರ್ತರ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದರೆ, ಬಿಜೆಪಿ ಮುಖಂಡರ ಆಂತರಿಕ ವಲಯದಲ್ಲಿ ಅಸಮಾಧಾನದ ಎಲೆ ಎಬ್ಬಿಸಿದೆ.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣವಾಗಿದೆ. ಅವರು ಶಾಸಕರಾಗಿರುವ ಕಾರಣ ಅವರಿಗೆ ತಮ್ಮದೇ ಆದ ಕಾರ್ಯಭಾರದ ಒತ್ತಡಗಳು ಸಹ ಇವೆ.</p>.<p>ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರದಲ್ಲಿದೆ. ಮುಂದಿನ ವರ್ಷ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಜವಾಬ್ದಾರಿಗಳು ಸಹಜವಾಗಿ ಹೆಚ್ಚಿವೆ. ಈ ಎಲ್ಲ ದೃಷ್ಟಿಯಿಂದ ಹೊಸ ಅಧ್ಯಕ್ಷರ ನೇಮಕ ಅನಿವಾರ್ಯ.</p>.<p>ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾ ಮುಖಂಡರ ಅಭಿಪ್ರಾಯವನ್ನು ರಾಜ್ಯ ಮಟ್ಟದ ವರಿಷ್ಠರು ಈಗಾಗಲೇ ಸಂಗ್ರಹಿಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿರುವ ರವಿಶಂಕರ್ ಹೆಬ್ಬಾಕ, ವಿ.ಲಕ್ಷ್ಮಿಶ್ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಈ ಮೂವರ ಹೆಸರುಗಳನ್ನು ಜಿಲ್ಲಾ ಸಮಿತಿ ವರಿಷ್ಠರಿಗೆ ಶಿಫಾರಸು ಮಾಡಿದೆ ಎನ್ನುತ್ತವೆ ಮೂಲಗಳು. ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕರಾಗಿರುವ ಡಾ.ಲಕ್ಷ್ಮಿಕಾಂತ್ ಅವರ ಹೆಸರು ಸಹ ಕೇಳಿ ಬಂದಿದೆ. ಇವರು ಚಿತ್ರದುರ್ಗದ ಸ್ವಾಮೀಜಿ ಒಬ್ಬರ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.</p>.<p>ಜಿಲ್ಲೆಯ ಮಟ್ಟಿಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಅವರೇ ಬಿಜೆಪಿ ಉನ್ನತ ನಾಯಕರು. ಇವರ ಬೆಂಬಲವೇ ಮುಖ್ಯ. ಹಿರಿಯ ಮುಖಂಡ ಸೊಗಡು ಶಿವಣ್ಣ ಸಹ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಗಮನವಿಟ್ಟಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.</p>.<p>ನಾಯಕರಲ್ಲಿ ಒಮ್ಮತ ಮೂಡಿಸುವುದು ಮತ್ತು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ರಾಜ್ಯ ನಾಯಕರಿಗೆ ತಲೆನೋವಾಗಿದೆ. ಜಾತಿ ಸಮೀಕರಣ, ಆರ್ಎಸ್ಎಸ್ ಹಿನ್ನೆಲೆ, ಸಂಘಟನಾ ಚಾತುರ್ಯ ಈ ಎಲ್ಲವನ್ನೂ ಅಳೆದು ತೂಗಿ ಜವಾಬ್ದಾರಿ ವಹಿಸುವುದು ವರಿಷ್ಠರ ಲೆಕ್ಕಾಚಾರ.</p>.<p>ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ವಿಚಾರವಾಗಿಯೇ 10 ಸಭೆಗಳು ಇಲ್ಲಿಯವರೆಗೆ ನಡೆದಿವೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಅವರು ಮೂರು ಬಾರಿ ನಗರಕ್ಕೆ ಬಂದು ವಾಪಸ್ ಆಗಿದ್ದಾರ ಎನ್ನುತ್ತವೆ ಮೂಲಗಳು.</p>.<p>ಹೆಬ್ಬಾಕ ರವಿಶಂಕರ್, ಪಕ್ಷದ ಎಲ್ಲ ಸ್ತರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸದ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಜಿಲ್ಲೆಯಲ್ಲಿ ಹೆಚ್ಚಿನದಾಗಿಯೇ ಪರಿಚಿತರು. ರವಿಶಂಕರ್ಗೆ ಸಂಸದ ಜಿ.ಎಸ್.ಬಸವರಾಜು ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಮುಖ ‘ಬಲ’ವಾಗಿದ್ದಾರೆ. </p>.<p>ಮಂಡಲ ಘಟಕದಿಂದ ವಿಭಾಗ ಸಹ ಪ್ರಭಾರಿವರೆಗೂ ಬೆಳೆದಿರುವ ಲಕ್ಷ್ಮಿಶ್ ಅವರಿಗೆ ಸಂಘ ಪರಿವಾರ ಬೆಂಬಲವಾಗಿದೆ ಎನ್ನುತ್ತವೆ ಮೂಲಗಳು. ಸುರೇಶ್ ಗೌಡ ಈ ಹಿಂದೆ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ‘ಪ್ರಭಾವ’ ಹೊಂದಿದ್ದಾರೆ. ಈ ಮೂವರ ನಡುವೆ ಜಿಲ್ಲಾ ಘಟಕದ ಸಾರಥ್ಯಕ್ಕೆ ಪೈಪೋಟಿ ಇದೆ.</p>.<p>ಜಿಲ್ಲಾ ಬಿಜೆಪಿಯಲ್ಲಿ ಲಿಂಗಾಯತರ ಪಾರಮ್ಯ ಹೆಚ್ಚಿದೆ. ಆ ಕಾರಣದಿಂದ ಲಿಂಗಾಯತೇತರ ವ್ಯಕ್ತಿಗೆ ಅಧ್ಯಕ್ಷ ಹುದ್ದೆ ನೀಡಬೇಕು ಎನ್ನುವುದು ಸಹ ಪಕ್ಷದ ಕೆಲ ಮುಖಂಡರ ಪ್ರತಿಪಾದನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ರಾಜ್ಯದ ಬಹುತೇಕ ಜಿಲ್ಲೆಗಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹೊಸ ಸಾರಥಿಯ ಪದಗ್ರಹಣವಾಗಿಲ್ಲ. ಇದು ಕಾರ್ಯಕರ್ತರ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದರೆ, ಬಿಜೆಪಿ ಮುಖಂಡರ ಆಂತರಿಕ ವಲಯದಲ್ಲಿ ಅಸಮಾಧಾನದ ಎಲೆ ಎಬ್ಬಿಸಿದೆ.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣವಾಗಿದೆ. ಅವರು ಶಾಸಕರಾಗಿರುವ ಕಾರಣ ಅವರಿಗೆ ತಮ್ಮದೇ ಆದ ಕಾರ್ಯಭಾರದ ಒತ್ತಡಗಳು ಸಹ ಇವೆ.</p>.<p>ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರದಲ್ಲಿದೆ. ಮುಂದಿನ ವರ್ಷ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಜವಾಬ್ದಾರಿಗಳು ಸಹಜವಾಗಿ ಹೆಚ್ಚಿವೆ. ಈ ಎಲ್ಲ ದೃಷ್ಟಿಯಿಂದ ಹೊಸ ಅಧ್ಯಕ್ಷರ ನೇಮಕ ಅನಿವಾರ್ಯ.</p>.<p>ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾ ಮುಖಂಡರ ಅಭಿಪ್ರಾಯವನ್ನು ರಾಜ್ಯ ಮಟ್ಟದ ವರಿಷ್ಠರು ಈಗಾಗಲೇ ಸಂಗ್ರಹಿಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿರುವ ರವಿಶಂಕರ್ ಹೆಬ್ಬಾಕ, ವಿ.ಲಕ್ಷ್ಮಿಶ್ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಈ ಮೂವರ ಹೆಸರುಗಳನ್ನು ಜಿಲ್ಲಾ ಸಮಿತಿ ವರಿಷ್ಠರಿಗೆ ಶಿಫಾರಸು ಮಾಡಿದೆ ಎನ್ನುತ್ತವೆ ಮೂಲಗಳು. ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕರಾಗಿರುವ ಡಾ.ಲಕ್ಷ್ಮಿಕಾಂತ್ ಅವರ ಹೆಸರು ಸಹ ಕೇಳಿ ಬಂದಿದೆ. ಇವರು ಚಿತ್ರದುರ್ಗದ ಸ್ವಾಮೀಜಿ ಒಬ್ಬರ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.</p>.<p>ಜಿಲ್ಲೆಯ ಮಟ್ಟಿಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಅವರೇ ಬಿಜೆಪಿ ಉನ್ನತ ನಾಯಕರು. ಇವರ ಬೆಂಬಲವೇ ಮುಖ್ಯ. ಹಿರಿಯ ಮುಖಂಡ ಸೊಗಡು ಶಿವಣ್ಣ ಸಹ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಗಮನವಿಟ್ಟಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.</p>.<p>ನಾಯಕರಲ್ಲಿ ಒಮ್ಮತ ಮೂಡಿಸುವುದು ಮತ್ತು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ರಾಜ್ಯ ನಾಯಕರಿಗೆ ತಲೆನೋವಾಗಿದೆ. ಜಾತಿ ಸಮೀಕರಣ, ಆರ್ಎಸ್ಎಸ್ ಹಿನ್ನೆಲೆ, ಸಂಘಟನಾ ಚಾತುರ್ಯ ಈ ಎಲ್ಲವನ್ನೂ ಅಳೆದು ತೂಗಿ ಜವಾಬ್ದಾರಿ ವಹಿಸುವುದು ವರಿಷ್ಠರ ಲೆಕ್ಕಾಚಾರ.</p>.<p>ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ವಿಚಾರವಾಗಿಯೇ 10 ಸಭೆಗಳು ಇಲ್ಲಿಯವರೆಗೆ ನಡೆದಿವೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಅವರು ಮೂರು ಬಾರಿ ನಗರಕ್ಕೆ ಬಂದು ವಾಪಸ್ ಆಗಿದ್ದಾರ ಎನ್ನುತ್ತವೆ ಮೂಲಗಳು.</p>.<p>ಹೆಬ್ಬಾಕ ರವಿಶಂಕರ್, ಪಕ್ಷದ ಎಲ್ಲ ಸ್ತರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸದ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಜಿಲ್ಲೆಯಲ್ಲಿ ಹೆಚ್ಚಿನದಾಗಿಯೇ ಪರಿಚಿತರು. ರವಿಶಂಕರ್ಗೆ ಸಂಸದ ಜಿ.ಎಸ್.ಬಸವರಾಜು ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಮುಖ ‘ಬಲ’ವಾಗಿದ್ದಾರೆ. </p>.<p>ಮಂಡಲ ಘಟಕದಿಂದ ವಿಭಾಗ ಸಹ ಪ್ರಭಾರಿವರೆಗೂ ಬೆಳೆದಿರುವ ಲಕ್ಷ್ಮಿಶ್ ಅವರಿಗೆ ಸಂಘ ಪರಿವಾರ ಬೆಂಬಲವಾಗಿದೆ ಎನ್ನುತ್ತವೆ ಮೂಲಗಳು. ಸುರೇಶ್ ಗೌಡ ಈ ಹಿಂದೆ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ‘ಪ್ರಭಾವ’ ಹೊಂದಿದ್ದಾರೆ. ಈ ಮೂವರ ನಡುವೆ ಜಿಲ್ಲಾ ಘಟಕದ ಸಾರಥ್ಯಕ್ಕೆ ಪೈಪೋಟಿ ಇದೆ.</p>.<p>ಜಿಲ್ಲಾ ಬಿಜೆಪಿಯಲ್ಲಿ ಲಿಂಗಾಯತರ ಪಾರಮ್ಯ ಹೆಚ್ಚಿದೆ. ಆ ಕಾರಣದಿಂದ ಲಿಂಗಾಯತೇತರ ವ್ಯಕ್ತಿಗೆ ಅಧ್ಯಕ್ಷ ಹುದ್ದೆ ನೀಡಬೇಕು ಎನ್ನುವುದು ಸಹ ಪಕ್ಷದ ಕೆಲ ಮುಖಂಡರ ಪ್ರತಿಪಾದನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>