ನಮ್ಮ ಪೂರ್ವಜರು ಪ್ಲೇಗಿನಮ್ಮನನ್ನು ಪೂಜಿಸಿದಂತೆ ನಮ್ಮ ಕಾಲಘಟ್ಟಕ್ಕೆ ಬಂದಿರುವ ಈ ಕೊರೊನಾವನ್ನು ಓಡಿಸಲು ಕೊರೊನಾ ಮಾರಮ್ಮನನ್ನು ಪೂಜಿಸುತ್ತಿದ್ದೇವೆ. ಬೇವಿನ ಸೊಪ್ಪಿನ ಅಲಂಕಾರದಿಂದ ಮಾಡಿರುವ ಈ ಮಾರಮ್ಮನನ್ನು ಪಟ್ಟಣದ ಹೊಸಬೀದಿಯಲ್ಲಿರುವ ಮಹಾಲಕ್ಷ್ಮಿ ಮತ್ತು ಮದ್ದರಲಕ್ಕಮ್ಮನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕೊರೊನಾ ಮಾರಮ್ಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ತಿಳಿಸಿರುವ ಅವರು, ‘ಇದನ್ನು ಮೂಢನಂಬಿಕೆ ಎನ್ನುವವರಿಗೆ ನಾವೇಳುವುದು ಇಷ್ಟೇ; ಮೂಢ ಅಲ್ಲ, ಮೂಲ ನಂಬಿಕೆ’ ಎಂದು ತಿಳಿಸಿದ್ದಾರೆ.