<p><strong>ಚಿಕ್ಕನಾಯಕನಹಳ್ಳಿ:</strong> ಹಿಂದಿನ ಕಾಲದಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಿನಮ್ಮ ಎಂದು ಪೂಜಿಸಿದಂತೆ, ಕೊರೊನಾ ಎಂಬ ಮಹಾಮಾರಿ ನಿವಾರಣೆಯಾಗಲು ಕೊರೊನಾ ಮಾರಮ್ಮ ಎಂಬ ಪೂಜೆಯನ್ನು ಮಾಡಿರುವುದಾಗಿ ಪಟ್ಟಣದ ಮಹಾಲಕ್ಷ್ಮಿ ದೇವಾಲಯ ಅರ್ಚಕ ಲಕ್ಷೀಶ್ ತಿಳಿಸಿದ್ದಾರೆ.</p>.<p>ನಮ್ಮ ಪೂರ್ವಜರು ಪ್ಲೇಗಿನಮ್ಮನನ್ನು ಪೂಜಿಸಿದಂತೆ ನಮ್ಮ ಕಾಲಘಟ್ಟಕ್ಕೆ ಬಂದಿರುವ ಈ ಕೊರೊನಾವನ್ನು ಓಡಿಸಲು ಕೊರೊನಾ ಮಾರಮ್ಮನನ್ನು ಪೂಜಿಸುತ್ತಿದ್ದೇವೆ. ಬೇವಿನ ಸೊಪ್ಪಿನ ಅಲಂಕಾರದಿಂದ ಮಾಡಿರುವ ಈ ಮಾರಮ್ಮನನ್ನು ಪಟ್ಟಣದ ಹೊಸಬೀದಿಯಲ್ಲಿರುವ ಮಹಾಲಕ್ಷ್ಮಿ ಮತ್ತು ಮದ್ದರಲಕ್ಕಮ್ಮನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕೊರೊನಾ ಮಾರಮ್ಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ತಿಳಿಸಿರುವ ಅವರು, ‘ಇದನ್ನು ಮೂಢನಂಬಿಕೆ ಎನ್ನುವವರಿಗೆ ನಾವೇಳುವುದು ಇಷ್ಟೇ; ಮೂಢ ಅಲ್ಲ, ಮೂಲ ನಂಬಿಕೆ’ ಎಂದು ತಿಳಿಸಿದ್ದಾರೆ.</p>.<p>ಈ ರೀತಿಯ ಕೊರೊನಾ ಮಾರಮ್ಮನ ಪೂಜೆಗೆ ಮುಂದಾಗಿರುವ ಅರ್ಚಕ ಲಕ್ಷ್ಮೀಶ್ ಎಂಎಸ್ಡಬ್ಲ್ಯು ಪದವೀಧರ. ಕೆಲ ಕಾಲ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಹಾಸನ ಜಿಲ್ಲೆಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಸಮುದಾಯದ ಆರೋಗ್ಯದ ಬಗ್ಗೆ ಪಾಠ ಹೇಳಿಕೊಟ್ಟವರು. ಅವರೇ ಈ ರೀತಿಯ ‘ಮೂಢ’ಕ್ಕೆ ‘ಮೂಲ’ವೆಂಬ ತೇಪೆ ಹಾಕಿ ಜನರನ್ನು ಮರಳು ಮಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಹಿಂದಿನ ಕಾಲದಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಿನಮ್ಮ ಎಂದು ಪೂಜಿಸಿದಂತೆ, ಕೊರೊನಾ ಎಂಬ ಮಹಾಮಾರಿ ನಿವಾರಣೆಯಾಗಲು ಕೊರೊನಾ ಮಾರಮ್ಮ ಎಂಬ ಪೂಜೆಯನ್ನು ಮಾಡಿರುವುದಾಗಿ ಪಟ್ಟಣದ ಮಹಾಲಕ್ಷ್ಮಿ ದೇವಾಲಯ ಅರ್ಚಕ ಲಕ್ಷೀಶ್ ತಿಳಿಸಿದ್ದಾರೆ.</p>.<p>ನಮ್ಮ ಪೂರ್ವಜರು ಪ್ಲೇಗಿನಮ್ಮನನ್ನು ಪೂಜಿಸಿದಂತೆ ನಮ್ಮ ಕಾಲಘಟ್ಟಕ್ಕೆ ಬಂದಿರುವ ಈ ಕೊರೊನಾವನ್ನು ಓಡಿಸಲು ಕೊರೊನಾ ಮಾರಮ್ಮನನ್ನು ಪೂಜಿಸುತ್ತಿದ್ದೇವೆ. ಬೇವಿನ ಸೊಪ್ಪಿನ ಅಲಂಕಾರದಿಂದ ಮಾಡಿರುವ ಈ ಮಾರಮ್ಮನನ್ನು ಪಟ್ಟಣದ ಹೊಸಬೀದಿಯಲ್ಲಿರುವ ಮಹಾಲಕ್ಷ್ಮಿ ಮತ್ತು ಮದ್ದರಲಕ್ಕಮ್ಮನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕೊರೊನಾ ಮಾರಮ್ಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ತಿಳಿಸಿರುವ ಅವರು, ‘ಇದನ್ನು ಮೂಢನಂಬಿಕೆ ಎನ್ನುವವರಿಗೆ ನಾವೇಳುವುದು ಇಷ್ಟೇ; ಮೂಢ ಅಲ್ಲ, ಮೂಲ ನಂಬಿಕೆ’ ಎಂದು ತಿಳಿಸಿದ್ದಾರೆ.</p>.<p>ಈ ರೀತಿಯ ಕೊರೊನಾ ಮಾರಮ್ಮನ ಪೂಜೆಗೆ ಮುಂದಾಗಿರುವ ಅರ್ಚಕ ಲಕ್ಷ್ಮೀಶ್ ಎಂಎಸ್ಡಬ್ಲ್ಯು ಪದವೀಧರ. ಕೆಲ ಕಾಲ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಹಾಸನ ಜಿಲ್ಲೆಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಸಮುದಾಯದ ಆರೋಗ್ಯದ ಬಗ್ಗೆ ಪಾಠ ಹೇಳಿಕೊಟ್ಟವರು. ಅವರೇ ಈ ರೀತಿಯ ‘ಮೂಢ’ಕ್ಕೆ ‘ಮೂಲ’ವೆಂಬ ತೇಪೆ ಹಾಕಿ ಜನರನ್ನು ಮರಳು ಮಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>