<p><strong>ಕೊಡಿಗೇನಹಳ್ಳಿ:</strong> ಕೊಡಿಗೇನಹಳ್ಳಿ ಹೋಬಳಿಗೆ ಹೊಂದಿಕೊಂಡಿರವ ಆಂಧ್ರ ಪ್ರದೇಶದ ಚರ್ಲಾಪಲ್ಲಿ ಮುದ್ದೇನಹಳ್ಳಿ ಗೇಟ್ ಸಮೀಪ ಕಲಬೆರಕೆ ಸೇಂದಿ ಕುಡಿದು ರಾಜ್ಯ ಮತ್ತು ಆಂಧ್ರದ 20 ಮಂದಿ ಅಸ್ವಸ್ಥಗೊಂಡಿದ್ದಾರೆ.</p>.<p>ಮಧುಗಿರಿ ತಾಲ್ಲೂಕಿನ ತೆರಿಯೂರು ಗ್ರಾಮದ 13, ಚಿಕ್ಕದಾಳವಟ್ಟ ಗ್ರಾಮದ ಇಬ್ಬರು ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಆಸ್ಪತ್ರೆಗೆ ದಾಖಲಾದ ಹೆಚ್ಚಿನವರು ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಯಾರೋ ಬಂದಿದ್ದಾರೆ ಎಂದು ಭಯ ಪಡುವುದು, ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸುವುದು, ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.</p>.<p>ಹಿಂದೂಪುರದಲ್ಲಿ ನಾಗರಾಜು ನಿಂಗಕ್ಕ ಚಿಕಿತ್ಸೆ ಪಡೆಯುತ್ತಿದ್ದು, ತೆರಿಯೂರು ಗ್ರಾಮದ ಮಾರಪ್ಪ ದಾಸಪ್ಪ, ಚಿಕ್ಕನರಸಿಂಹಯ್ಯ, ನಾಗರಾಜು, ಟಿ. ನಾಗರಾಜು ಬೆಂಗಳೂರಿನ ನಿಮ್ಹಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>
<p><strong>ಕೊಡಿಗೇನಹಳ್ಳಿ:</strong> ಕೊಡಿಗೇನಹಳ್ಳಿ ಹೋಬಳಿಗೆ ಹೊಂದಿಕೊಂಡಿರವ ಆಂಧ್ರ ಪ್ರದೇಶದ ಚರ್ಲಾಪಲ್ಲಿ ಮುದ್ದೇನಹಳ್ಳಿ ಗೇಟ್ ಸಮೀಪ ಕಲಬೆರಕೆ ಸೇಂದಿ ಕುಡಿದು ರಾಜ್ಯ ಮತ್ತು ಆಂಧ್ರದ 20 ಮಂದಿ ಅಸ್ವಸ್ಥಗೊಂಡಿದ್ದಾರೆ.</p>.<p>ಮಧುಗಿರಿ ತಾಲ್ಲೂಕಿನ ತೆರಿಯೂರು ಗ್ರಾಮದ 13, ಚಿಕ್ಕದಾಳವಟ್ಟ ಗ್ರಾಮದ ಇಬ್ಬರು ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಆಸ್ಪತ್ರೆಗೆ ದಾಖಲಾದ ಹೆಚ್ಚಿನವರು ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಯಾರೋ ಬಂದಿದ್ದಾರೆ ಎಂದು ಭಯ ಪಡುವುದು, ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸುವುದು, ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.</p>.<p>ಹಿಂದೂಪುರದಲ್ಲಿ ನಾಗರಾಜು ನಿಂಗಕ್ಕ ಚಿಕಿತ್ಸೆ ಪಡೆಯುತ್ತಿದ್ದು, ತೆರಿಯೂರು ಗ್ರಾಮದ ಮಾರಪ್ಪ ದಾಸಪ್ಪ, ಚಿಕ್ಕನರಸಿಂಹಯ್ಯ, ನಾಗರಾಜು, ಟಿ. ನಾಗರಾಜು ಬೆಂಗಳೂರಿನ ನಿಮ್ಹಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>