ಈ ಆರು ಮಂದಿ ಜ.21ರಂದು ಆಟೊದಲ್ಲಿ ರಾಡ್, ಚಾಕು, ದೊಣ್ಣೆಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುವ ಒಬ್ಬಂಟಿಗರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಆರೋಪಿತರಿಂದ ₹ 2.5 ಲಕ್ಷ ಬೆಲೆಬಾಳುವ ಆಭರಣ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೀವನ್, ಮಂಜುನಾಥ್, ರಾಘವೇಂದ್ರ ಮತ್ತು ಪ್ರೀತಂ ಬಸ್ತಿಬೆಟ್ಟದ ಗೊಮ್ಮಟೇಶ್ವರ ದೇವಾಲಯದ ಹುಂಡಿಯ ಕಳ್ಳತನ, ಪಂಡಿತನಹಳ್ಳಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದರು. ಬಸದಿ ಬೆಟ್ಟದಲ್ಲಿ ಪ್ರೇಮಿಗಳನ್ನು ಹೆದರಿಸಿ ಆಭರಣ, ಹಣ ಮತ್ತು ಮೊಬೈಲ್ ದೋಚಿದ್ದರು.
ಸಿಪಿಐ ಶ್ರೀಧರ್, ಪಿಎಸ್ಐ ರಾಮಪ್ರಸಾದ್, ಎಎಸ್ಐ ಗುರುಮಲ್ಲಾರಾಧ್ಯ, ಸಿದ್ದಪ್ಪ ಹಾಗೂ ಸಿಬ್ಬಂದಿ ಮೋಹನ್ ಕುಮಾರ್, ರಮೇಶ, ಮನು, ಸೈಯದ್ ರಿಫತ್ ಅಲಿ, ಮಂಜುನಾಥ ರಮೇಶ್ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.