ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಸೋಮವಾರ ರಾತ್ರಿ ‘ಅಜ್ಜೇನಹಳ್ಳಿ ಭೂಪಸಂದ್ರ ಮಾಯಸಂದ್ರ ಈ ಭಾಗದವರೆಲ್ಲ ಟ್ಯೂಬ್ ಹಾಕಿಕೊಂಡು ಕೆರೆಗೆ ನೀರು ಬಿಟ್ಟುಕೊಳ್ಳುತ್ತಿರುವುರಿಂದ ಮದಲೂರು ಕೆರೆಗೆ ನೀರು ಸಂಪೂರ್ಣವಾಗಿ ನಿಂತೇ ಹೋಗಿದೆ. ಈ ಮಾಹಿತಿ ಕಾವೇರಿ ನೀರಾವರಿ ನಿಗಮದವರೆಗೆ ತಲುಪಿದೆ. ನೀರು ಮದಲೂರು ಕೆರೆಗೆ ಹೋಗುತ್ತಿಲ್ಲ. ನೀರು ನಿಯೋಜಿತ ಕೆರೆಗೆ ತಲುಪುತ್ತಿಲ್ಲ ಎಂದು ಮದಲೂರು ಕೆರೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತುಮಕೂರು ನಾಲೆಯಿಂದ ಕಳ್ಳಂಬೆಳ್ಳ ಕೆರೆಗೆ ನೀರು ಹರಿಯುತ್ತಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿದೆ. ಕಾವೇರಿ ನಿಗಮದ ಅಧಿಕಾರಿಗಳೊಡನೆ ಮಾತುಕತೆಯ ನಂತರ ಮದಲೂರು ಕೆರೆಗೆ ಮತ್ತೊಮ್ಮೆ ಶೀಘ್ರದಲ್ಲೇ ನೀರು ಹರಿಸುವ ಆಶಾಭಾವನೆ ವ್ಯಕ್ತಪಡಿಸುತ್ತಿದ್ದೇನೆ’ ಬರೆದುಕೊಂಡಿದ್ದಾರೆ. ಜೊತೆಗೆ ರೈತರು ನಾಲೆಗೆ ಹಾಕಿರುವ ಟ್ಯೂಬ್ (ಪೈಪ್) ಚಿತ್ರವನ್ನು ಹಾಕಿದ್ದಾರೆ.