<p><strong>ಹುಳಿಯಾರು</strong>: ಮೂಲಸೌಕರ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಪಟ್ಟಣದಲ್ಲಿ ತೆರಿಗೆ ನಿರಾಕರಣೆ ಚಳವಳಿ ಹಾಗೂ ಅಹೋರಾತ್ರಿ ಧರಣಿ ಗುರುವಾರ ಆರಂಭವಾಯಿತು.</p>.<p>ತಮ್ಮ ಬೇಡಿಕೆಗಳು ಈಡೇರುವವರೆಗೂ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ಪುನರುಚ್ಚರಿಸಿದರು.</p>.<p>ಪಟ್ಟಣದ ಎಲ್ಲ ವಾರದ ಸಂತೆ, ಸಂತೆ ಬೀದಿ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ಸಂತೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಬೇಕು ಎಂದು ಸಂಘದ ಪದಾಧಿಕಾರಿಗಳು ಸಂತೆಯಲ್ಲಿ ಕರಪತ್ರ ಹಂಚಿದರು.</p>.<p>ರೈತ ಸಂಘದ ಚಂದ್ರಪ್ಪ ಮಾತನಾಡಿ, ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದರೂ ಪಟ್ಟಣ ಪಂಚಾಯಿತಿ ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದರು.</p>.<p>ಮಧ್ಯಾಹ್ನ ಧರಣಿ ಸ್ಥಳದಲ್ಲಿಯೇ ಊಟ ತಯಾರಿಸಿದರು. ಸಂಜೆ ಧರಣಿ ಸ್ಥಳದಲ್ಲಿ ಮುಖ್ಯಾಧಿಕಾರಿಗೂ ರೈತಸಂಘದ ಪದಾಧಿಕಾರಿಗಳಿಗೆ ಮಾತಿನ ಚಕಮಕಿ ನಡೆಯಿತು. ಅಹೋರಾತ್ರಿ ಧರಣಿ ಮುಂದುವರಿಯಲಿದ್ದು ಸಮಸ್ಯೆ ಬಗೆಹರಿಯುವವರೆಗೆ ಹಿಂದೆ ತೆಗೆಯುವ ಮಾತೆ ಇಲ್ಲ ಎಂದು ರೈತಸಂಘ ಸ್ಪಷ್ಟಪಡಿಸಿದೆ.</p>.<p>ಸ್ಥಳಕ್ಕೆ ಬಂದ ಪಿಎಸ್ಐ ಧರ್ಮಾಂಜಿ ಅನುಮತಿ ಪಡೆಯದೆ ಧರಣಿ ನಡೆಸುವಂತಿಲ್ಲ ಎಂದು ಎಚ್ಚರಿಸಿದರು.</p>.<p>‘ನೀವು ಕಾನೂನು ಪ್ರಕಾರ ಏನಿದೆಯೊ ಅದನ್ನು ಮಾಡಿಕೊಳ್ಳಿ, ನಾವಂತೂ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ’ ಎಂದರು. ನಂತರ ಪೊಲೀಸರು ಸ್ಥಳದಿಂದ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಳಿಯಾರು</strong>: ಮೂಲಸೌಕರ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಪಟ್ಟಣದಲ್ಲಿ ತೆರಿಗೆ ನಿರಾಕರಣೆ ಚಳವಳಿ ಹಾಗೂ ಅಹೋರಾತ್ರಿ ಧರಣಿ ಗುರುವಾರ ಆರಂಭವಾಯಿತು.</p>.<p>ತಮ್ಮ ಬೇಡಿಕೆಗಳು ಈಡೇರುವವರೆಗೂ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ಪುನರುಚ್ಚರಿಸಿದರು.</p>.<p>ಪಟ್ಟಣದ ಎಲ್ಲ ವಾರದ ಸಂತೆ, ಸಂತೆ ಬೀದಿ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ಸಂತೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಬೇಕು ಎಂದು ಸಂಘದ ಪದಾಧಿಕಾರಿಗಳು ಸಂತೆಯಲ್ಲಿ ಕರಪತ್ರ ಹಂಚಿದರು.</p>.<p>ರೈತ ಸಂಘದ ಚಂದ್ರಪ್ಪ ಮಾತನಾಡಿ, ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದರೂ ಪಟ್ಟಣ ಪಂಚಾಯಿತಿ ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದರು.</p>.<p>ಮಧ್ಯಾಹ್ನ ಧರಣಿ ಸ್ಥಳದಲ್ಲಿಯೇ ಊಟ ತಯಾರಿಸಿದರು. ಸಂಜೆ ಧರಣಿ ಸ್ಥಳದಲ್ಲಿ ಮುಖ್ಯಾಧಿಕಾರಿಗೂ ರೈತಸಂಘದ ಪದಾಧಿಕಾರಿಗಳಿಗೆ ಮಾತಿನ ಚಕಮಕಿ ನಡೆಯಿತು. ಅಹೋರಾತ್ರಿ ಧರಣಿ ಮುಂದುವರಿಯಲಿದ್ದು ಸಮಸ್ಯೆ ಬಗೆಹರಿಯುವವರೆಗೆ ಹಿಂದೆ ತೆಗೆಯುವ ಮಾತೆ ಇಲ್ಲ ಎಂದು ರೈತಸಂಘ ಸ್ಪಷ್ಟಪಡಿಸಿದೆ.</p>.<p>ಸ್ಥಳಕ್ಕೆ ಬಂದ ಪಿಎಸ್ಐ ಧರ್ಮಾಂಜಿ ಅನುಮತಿ ಪಡೆಯದೆ ಧರಣಿ ನಡೆಸುವಂತಿಲ್ಲ ಎಂದು ಎಚ್ಚರಿಸಿದರು.</p>.<p>‘ನೀವು ಕಾನೂನು ಪ್ರಕಾರ ಏನಿದೆಯೊ ಅದನ್ನು ಮಾಡಿಕೊಳ್ಳಿ, ನಾವಂತೂ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ’ ಎಂದರು. ನಂತರ ಪೊಲೀಸರು ಸ್ಥಳದಿಂದ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>