ಸಂಸ್ಥಾಪಕ ಗಂಗರಾಜು ಸ್ವಾಮಿ ನಿಧನದ ನಂತರ ಮಗ ಆನಂದ್ ಸ್ವಾಮಿ ಪ್ರತಿವರ್ಷವೂ ಮಹಾಶಿವರಾತ್ರಿ, ಶನೇಶ್ವರ ಜಯಂತಿ, ಗಂಗರಾಜು ಸ್ವಾಮಿ ಆರಾಧನಾ ಮತ್ತು ಲಕ್ಷದೀಪೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ರಂಗಭೂಮಿ ಕಲಾವಿದರಿಗೆ ಕ್ಷೇತ್ರದಲ್ಲಿ ನಡೆಯುವ ಶಿವರಾತ್ರಿ ಜಾತ್ರೆ, ಶನೇಶ್ಚರ ಜಯಂತಿ ಮತ್ತು ಲಕ್ಷದಿಪೋತ್ಸವ ಕಾರ್ಯಕ್ರಮದಲ್ಲಿ ನಾಟಕ ಮತ್ತು ನಾದಸ್ವರಗಳ ಪ್ರದರ್ಶನಕ್ಕೆ ಮತ್ತು ಹರಿಕಥೆಗಳಿಗೆ ಅವಕಾಶ ನೀಡಲಾಗುತ್ತಿದೆ.