<p><strong>ತುಮಕೂರು: </strong>ನಗರದ ಸೋಮೇಶ್ವರಪುರದ ತೋಟಗಾರಿಕಾ ಇಲಾಖೆ ಕಚೇರಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಗುರುವಾರ ಆರೋಪಿಸಿ, ಜನಪ್ರತಿನಿಧಿಗಳ ಗಮನ ಸೆಳೆದರು.</p>.<p>ಬೆಳಿಗ್ಗೆ ಕಾಮಗಾರಿ ಸ್ಥಳ ಪರಿಶೀಲಿಸಿದ ಮೇಯರ್ ಫರೀದಾ ಬೇಗಂ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮರ್ಪಕವಾಗಿ ಕಾಮಗಾರಿ ನಡೆಸಲು ಸ್ಮಾರ್ಟ್ ಸಿಟಿ ಎಂಜಿನಿಯರ್ಗಳಿಗೆ ಸೂಚಿಸಿದರು.</p>.<p>ಕಾಮಗಾರಿ ನಡೆಯುವ ರಸ್ತೆ ಜನವಸತಿ ಪ್ರದೇಶದಲ್ಲಿದೆ. ಇಲ್ಲಿ ರಾತ್ರಿ ಸಹ ಜೆಸಿಬಿ ಯಿಂದ ಅಗೆಯುವ ಕೆಲಸ ಮಾಡುತ್ತಾರೆ. ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕಾಮಗಾರಿಯಿಂದ ಏಳುತ್ತಿರುವ ದೂಳಿನ ನಿಯಂತ್ರಣಕ್ಕೂ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು.</p>.<p>ಸೋಮೇಶ್ವರಪುರದ 15ನೇ ಅಡ್ಡರಸ್ತೆಯಲ್ಲಿ ಕಾಮಗಾರಿಯಿಂದ ನೀರು ಸರಬರಾಜು, ವಿದ್ಯುತ್ ಪೂರೈಕೆ ಹಾಗೂ ಒಳಚರಂಡಿ ಸಂಪರ್ಕವನ್ನು ಪದೇ ಪದೇ ಕಡಿತಗೊಳಿಸಲಾಗುತ್ತಿದೆ. ಕಾಮಗಾರಿಯಿಂದ ಫಣೀಂದ್ರ ಎಂಬುವವರ ಮನೆಯಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಗಮನ ಸೆಳೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>15ನೇ ವಾರ್ಡ್ ವ್ಯಾಪ್ತಿಯ ವೀರ ಸಾರ್ವಕರ್ ಉದ್ಯಾನ ಹಾಳಾಗಿದೆ. ನಿರ್ವಹಣೆಗೆ ಪಾಲಿಕೆಯಿಂದ ಅನುದಾನ ಬರುತ್ತಿಲ್ಲ. ಉದ್ಯಾನದಲ್ಲಿ ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕ್ರಮ ವಹಿಸಿ ಎಂದು ಒತ್ತಾಯಿಸಿದರು.</p>.<p>*</p>.<p><strong>‘ರಾತ್ರಿ ಹೊತ್ತು ಕರೆ ಮಾಡ್ತಾರೆ’</strong></p>.<p>ರಾತ್ರಿ ವೇಳೆ ನಡೆಯುವ ಕಾಮಗಾರಿಯಿಂದ ನೀರು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ, ಜನರು ರಾತ್ರಿ 2 ಗಂಟೆ ಹೊತ್ತಿಗೂ ಕರೆ ಮಾಡಿ ದೂರುತ್ತಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ಧನಿಯಾಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮೂಲಸೌಕರ್ಯಗಳ ಸೌಲಭ್ಯ ಸಿಗದಿದ್ದಾಗ, ಜನರು ಕಾರ್ಪೊರೇಟರ್ಗಳ ಬಳಿ ಬರುತ್ತಾರೆ. ಅವರಿಗೆ ನಾವು ಉತ್ತರದಾಯಿ ಆಗಬೇಕಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಆಗುವ ಸಮಸ್ಯೆಗಳನ್ನು ನಿಭಾಯಿಸುತ್ತ, ಜನರಿಗೆ ಸಮಜಾಯಿಸಿ ನೀಡಿ ನಾವೂ ಸೋತಿದ್ದೇವೆ ಎಂದು ಹೇಳಿದರು.</p>.<p>ಕಾಮಗಾರಿ ವೇಳೆ ಕೊಳವೆಗಳು ಒಡೆದು ನೀರು ಪೋಲಾಗುತ್ತಿದೆ ಎಂದು ಬೇಸರಿಸಿದರು.</p>.<p>ರಸ್ತೆಯಲ್ಲಿ 25 ಮೀಟರ್ವರೆಗೂ ಕಾಮಗಾರಿ ನಡೆಸಿ, ಸ್ಮಾರ್ಟ್ ಡಕ್ಟ್ ಅಳವಡಿಸಿದ ನಂತರ, ಮುಂದಿನ ಕಾಮಗಾರಿ ನಡೆಸಬೇಕೆಂಬ ನಿಯಮವಿದೆ. ಆದರೆ, ಸ್ಮಾರ್ಟ್ ಸಿಟಿಯವರು ಎಲ್ಲ ರಸ್ತೆಗಳನ್ನು ಒಟ್ಟಿಗೆ ಅಗೆದು ಜನರ ಸಂಚಾರಕ್ಕೂ ಅಡಚಣೆ ಉಂಟು ಮಾಡಿದ್ದಾರೆ ಎಂದು ಗಿರಿಜಾ ದೂರಿದರು.</p>.<p>*</p>.<p><strong>ಎಂಜಿನಿಯರ್ಗೆ ಮೇಯರ್ ತರಾಟೆ</strong></p>.<p>ಮೇಯರ್ ಫರೀದಾಬೇಗಂ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಎಂಜಿನಿಯರ್ಗಳು ಇರಲಿಲ್ಲ. ಅವರಿಗೆ ಕರೆ ಮಾಡಿ ಕರೆಸಲಾಯಿತು. ತಡವಾಗಿ ಬಂದ ಸ್ಮಾರ್ಟ್ ಸಿಟಿ ಎಂಜಿನಿಯರ್ ಅನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.</p>.<p>‘ಜನಪ್ರತಿನಿಧಿಗಳು ಬೇಡ ಎಂದರೂ ರಾತ್ರಿವೇಳೆ ಕಾಮಗಾರಿ ಮಾಡಿದವರು ಯಾರು, ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ನಗರದ ಸೋಮೇಶ್ವರಪುರದ ತೋಟಗಾರಿಕಾ ಇಲಾಖೆ ಕಚೇರಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಗುರುವಾರ ಆರೋಪಿಸಿ, ಜನಪ್ರತಿನಿಧಿಗಳ ಗಮನ ಸೆಳೆದರು.</p>.<p>ಬೆಳಿಗ್ಗೆ ಕಾಮಗಾರಿ ಸ್ಥಳ ಪರಿಶೀಲಿಸಿದ ಮೇಯರ್ ಫರೀದಾ ಬೇಗಂ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮರ್ಪಕವಾಗಿ ಕಾಮಗಾರಿ ನಡೆಸಲು ಸ್ಮಾರ್ಟ್ ಸಿಟಿ ಎಂಜಿನಿಯರ್ಗಳಿಗೆ ಸೂಚಿಸಿದರು.</p>.<p>ಕಾಮಗಾರಿ ನಡೆಯುವ ರಸ್ತೆ ಜನವಸತಿ ಪ್ರದೇಶದಲ್ಲಿದೆ. ಇಲ್ಲಿ ರಾತ್ರಿ ಸಹ ಜೆಸಿಬಿ ಯಿಂದ ಅಗೆಯುವ ಕೆಲಸ ಮಾಡುತ್ತಾರೆ. ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕಾಮಗಾರಿಯಿಂದ ಏಳುತ್ತಿರುವ ದೂಳಿನ ನಿಯಂತ್ರಣಕ್ಕೂ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು.</p>.<p>ಸೋಮೇಶ್ವರಪುರದ 15ನೇ ಅಡ್ಡರಸ್ತೆಯಲ್ಲಿ ಕಾಮಗಾರಿಯಿಂದ ನೀರು ಸರಬರಾಜು, ವಿದ್ಯುತ್ ಪೂರೈಕೆ ಹಾಗೂ ಒಳಚರಂಡಿ ಸಂಪರ್ಕವನ್ನು ಪದೇ ಪದೇ ಕಡಿತಗೊಳಿಸಲಾಗುತ್ತಿದೆ. ಕಾಮಗಾರಿಯಿಂದ ಫಣೀಂದ್ರ ಎಂಬುವವರ ಮನೆಯಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಗಮನ ಸೆಳೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>15ನೇ ವಾರ್ಡ್ ವ್ಯಾಪ್ತಿಯ ವೀರ ಸಾರ್ವಕರ್ ಉದ್ಯಾನ ಹಾಳಾಗಿದೆ. ನಿರ್ವಹಣೆಗೆ ಪಾಲಿಕೆಯಿಂದ ಅನುದಾನ ಬರುತ್ತಿಲ್ಲ. ಉದ್ಯಾನದಲ್ಲಿ ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕ್ರಮ ವಹಿಸಿ ಎಂದು ಒತ್ತಾಯಿಸಿದರು.</p>.<p>*</p>.<p><strong>‘ರಾತ್ರಿ ಹೊತ್ತು ಕರೆ ಮಾಡ್ತಾರೆ’</strong></p>.<p>ರಾತ್ರಿ ವೇಳೆ ನಡೆಯುವ ಕಾಮಗಾರಿಯಿಂದ ನೀರು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ, ಜನರು ರಾತ್ರಿ 2 ಗಂಟೆ ಹೊತ್ತಿಗೂ ಕರೆ ಮಾಡಿ ದೂರುತ್ತಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ಧನಿಯಾಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮೂಲಸೌಕರ್ಯಗಳ ಸೌಲಭ್ಯ ಸಿಗದಿದ್ದಾಗ, ಜನರು ಕಾರ್ಪೊರೇಟರ್ಗಳ ಬಳಿ ಬರುತ್ತಾರೆ. ಅವರಿಗೆ ನಾವು ಉತ್ತರದಾಯಿ ಆಗಬೇಕಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಆಗುವ ಸಮಸ್ಯೆಗಳನ್ನು ನಿಭಾಯಿಸುತ್ತ, ಜನರಿಗೆ ಸಮಜಾಯಿಸಿ ನೀಡಿ ನಾವೂ ಸೋತಿದ್ದೇವೆ ಎಂದು ಹೇಳಿದರು.</p>.<p>ಕಾಮಗಾರಿ ವೇಳೆ ಕೊಳವೆಗಳು ಒಡೆದು ನೀರು ಪೋಲಾಗುತ್ತಿದೆ ಎಂದು ಬೇಸರಿಸಿದರು.</p>.<p>ರಸ್ತೆಯಲ್ಲಿ 25 ಮೀಟರ್ವರೆಗೂ ಕಾಮಗಾರಿ ನಡೆಸಿ, ಸ್ಮಾರ್ಟ್ ಡಕ್ಟ್ ಅಳವಡಿಸಿದ ನಂತರ, ಮುಂದಿನ ಕಾಮಗಾರಿ ನಡೆಸಬೇಕೆಂಬ ನಿಯಮವಿದೆ. ಆದರೆ, ಸ್ಮಾರ್ಟ್ ಸಿಟಿಯವರು ಎಲ್ಲ ರಸ್ತೆಗಳನ್ನು ಒಟ್ಟಿಗೆ ಅಗೆದು ಜನರ ಸಂಚಾರಕ್ಕೂ ಅಡಚಣೆ ಉಂಟು ಮಾಡಿದ್ದಾರೆ ಎಂದು ಗಿರಿಜಾ ದೂರಿದರು.</p>.<p>*</p>.<p><strong>ಎಂಜಿನಿಯರ್ಗೆ ಮೇಯರ್ ತರಾಟೆ</strong></p>.<p>ಮೇಯರ್ ಫರೀದಾಬೇಗಂ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಎಂಜಿನಿಯರ್ಗಳು ಇರಲಿಲ್ಲ. ಅವರಿಗೆ ಕರೆ ಮಾಡಿ ಕರೆಸಲಾಯಿತು. ತಡವಾಗಿ ಬಂದ ಸ್ಮಾರ್ಟ್ ಸಿಟಿ ಎಂಜಿನಿಯರ್ ಅನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.</p>.<p>‘ಜನಪ್ರತಿನಿಧಿಗಳು ಬೇಡ ಎಂದರೂ ರಾತ್ರಿವೇಳೆ ಕಾಮಗಾರಿ ಮಾಡಿದವರು ಯಾರು, ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>