ಬಳಿಕ 9813024637 ಹಾಗೂ 9871668167 ನಂಬರ್ನಿಂದ ಕರೆಮಾಡಿದ ವಂಚಕರು ₹ 25 ಲಕ್ಷದವರೆಗೆ ಮುದ್ರಾ ಲೋನ್ ಕೊಡುವುದಾಗಿ ನಂಬಿಸಿ ಡಾ.ಕೃಷ್ಣಮೂರ್ತಿ ಅವರ ದಾಖಲಾತಿಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡಿದ್ದಾರೆ. ನಂತರ ಪ್ರೊಸೆಸಿಂಗ್ ಚಾರ್ಜ್ ಎಂದು ಜುಲೈ 13ರಿಂದ 16ರವರೆಗೆ ಹಲವು ಬಾರಿ ಗೂಗಲ್ ಪೇ ಮೂಲಕ ಹಂತ ಹಂತವಾಗಿ 67,650 ಹಣವನ್ನು ಖಾತೆಗೆ ಹಾಕಿಸಿಕೊಂಡಿದ್ದಾರೆ. ಬಳಿಕ ಕೃಷ್ಣಮೂರ್ತಿ ಅವರಿಗೆ ವಂಚನೆಯ ಅರಿವಾಗಿ ಸೆನ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.