<blockquote>ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ | ವರಮಹಾಲಕ್ಷಿ ಹಬ್ಬಕ್ಕೆ ತರಕಾರಿ ತುಟ್ಟಿ</blockquote>.<p><strong>ಉಡುಪಿ:</strong> ಹಬ್ಬದ ಋತು ಆರಂಭವಾಗುತ್ತಿದ್ದಂತೆ ತರಕಾರಿ ಮತ್ತು ಹಣ್ಣು ಹಂಪಲುಗಳ ದರ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.</p>.<p>ನಾಗರ ಪಂಚಮಿ ಕಳೆದ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ಪ್ರತಿ ವರ್ಷವೂ ತರಕಾರಿ ದರ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ ಈ ಬಾರಿ ವಿಪರೀತ ಮಳೆಯಿಂದಾಗಿ ಕೆಲವೆಡೆ ತರಕಾರಿ ಕೃಷಿ ಹಾನಿಯಾದ ಪರಿಣಾಮ ತರಕಾರಿಗಳ ಲಭ್ಯತೆ ಕಡಿಮೆಯಾಗಿ ಇನ್ನಷ್ಟು ಬೆಲೆ ಏರಿಕೆಯಾಗಿದೆ.</p>.<p>ಶಿವಮೊಗ್ಗ, ಹಾಸನ ಮೊದಲಾದೆಡೆಗಳಿಂದ ಜಿಲ್ಲೆಗೆ ತರಕಾರಿಗಳು ಬರುತ್ತಿದ್ದು, ಈ ಬಾರಿ ಮೇ ತಿಂಗಳಿನಿಂದಲೇ ವಿಪರೀತ ಮಳೆ ಆರಂಭವಾಗಿರುವುದರಿಂದ ಕೆಲವೆಡೆ ತರಕಾರಿಗಳು ತೋಟದಲ್ಲೇ ಕೊಳೆತು ಹೋಗಿವೆ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ತರಕಾರಿ ಮಾರಾಟಗಾರರು.</p>.<p>‘ಸಗಟು ಮಾರುಕಟ್ಟೆಯಲ್ಲಿ ಈಗಾಗಲೇ ಕೆಲವು ತರಕಾರಿಗಳ ಆವಕ ಕಡಿಮೆಯಾಗಿರುವುದರಿಂದ ಬೆಲೆಯಲ್ಲಿ ಏರುಪೇರು ಆಗುತ್ತಿದೆ’ ಎನ್ನುತ್ತಾರೆ ಉಡುಪಿಯ ಸರ್ವೀಸ್ ನಿಲ್ದಾಣ ಬಳಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>‘ನಾಗರ ಪಂಚಮಿ ಹಬ್ಬದ ಬಳಿಕ ತರಕಾರಿಗಳಿಗೆ ವಿಪರೀತ ಬೇಡಿಕೆ ಹೆಚ್ಚಿದೆ. ಬೇಡಿಕೆಗನುಗುಣವಾಗಿ ಕೆಲವು ತರಕಾರಿಗಳು ಲಭ್ಯವಾಗದ ಕಾರಣ ದರ ಏರಿಕೆಯಾಗಿದೆ’ ಎಂದು ಅವರು ತಿಳಿಸಿದರು.</p>.<p>ಕಳೆದ ವಾರ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಟೊಮೆಟೊ ದರ ₹50 ಕ್ಕೇರಿದೆ. ಕೆ.ಜಿಗೆ ₹60 ಇದ್ದ ಬೀನ್ಸ್ ಬೆಲೆ ₹90ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಸುವರ್ಣ ಗಡ್ಡೆ ದರ ₹80ಕ್ಕೇರಿದೆ.</p>.<p>ಕರಾವಳಿ ಭಾಗದಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿವಿಧ ಖಾದ್ಯಗಳಿಗೆ ಮಂಗಳೂರು ಸೌತೆಕಾಯಿಯನ್ನು ಬಳಸಲಾಗುತ್ತಿದೆ. ಈ ಕಾರಣಕ್ಕೆ ಅದಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಕಳೆದ ವಾರ ಕೆ.ಜಿಗೆ ₹40ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆ ದರ ₹80ಕ್ಕೆ ಜಿಗಿದಿದೆ.</p>.<p>ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್, ಪೇರಳೆ ಮತ್ತು ದಾಳಿಂಬೆ ದರವೂ ಗಗನಮುಖಿಯಾಗಿದೆ. ಕೆ.ಜಿಗೆ ₹140 ಇದ್ದ ಡ್ರ್ಯಾಗನ್ ಫ್ರೂಟ್ ದರ ₹180 ದಾಟಿದೆ. ಪೇರಳೆ ದರ ಕೆ.ಜಿಗೆ ₹140 ಹಾಗೂ ದಾಳಿಂಬೆ ಕೆ.ಜಿಗೆ ₹180 ಇದೆ.</p>.<div><blockquote>ಈಗಾಗಲೇ ಕೆಲವು ತರಕಾರಿಗಳ ದರ ಏರಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ</blockquote><span class="attribution">ಜಯಾನಂದ ತರಕಾರಿ ಮಾರಾಟಗಾರ</span></div>.<div><blockquote>ಈ ಬಾರಿ ಜೂನ್ ಜುಲೈ ತಿಂಗಳಲ್ಲಿ ನಿರಂತರ ಮಳೆಯಾಗಿರುವುದರಿಂದ ಕೆಲವು ಹಣ್ಣುಗಳ ಲಭ್ಯತೆ ಕೊರತೆ ಉಂಟಾಗಿ ಹಣ್ಣುಗಳ ದರ ಏರಿಕೆಯಾಗಿದೆ</blockquote><span class="attribution">ಸಾದಿಕ್ ಹಣ್ಣಿನ ಮಾರಾಟಗಾರ </span></div>.<div><blockquote>ದರ ಏರಿಕೆಯಾದರೂ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣು ಅತಿ ಅಗತ್ಯವಾಗಿದೆ. ಈ ಕಾರಣಕ್ಕೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ</blockquote><span class="attribution">ಶ್ರೀನಿವಾಸ ಮೂರ್ತಿ ಗ್ರಾಹಕ</span></div>.<p><strong>ಬಾಳೆಹಣ್ಣಿನ ದರ ಏರಿಕೆ</strong> </p><p>ನಾಗರ ಪಂಚಮಿ ಬಳಿಕ ಏಲಕ್ಕಿ ಬಾಳೆಹಣ್ಣಿಗೆ ವಿಪರೀತ ಬೇಡಿಕೆ ಕುದುರಿದ್ದು ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆ ಹಣ್ಣಿನ ದರವು ₹120ರ ಗಡಿ ದಾಟಿದೆ. ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರ ₹80ಕ್ಕೆ ಏರಿಕೆಯಾಗಿದೆ. ‘ವರಮಹಾಲಕ್ಷ್ಮಿ ಹಬ್ಬ ಬಂದಿರುವುದರಿಂದ ಏಲಕ್ಕಿ ಬಾಳೆಹಣ್ಣಿನ ದರ ವಿಪರೀತ ಏರಿಕೆಯಾಗಿದೆ. ನವರಾತ್ರಿ ಹಬ್ಬ ಕಳೆಯುವವರೆಗೂ ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿಗೆ ₹100ರಿಂದ ಕೆಳಗಿಳಿಯುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಹಣ್ಣಿನ ಮಾರಾಟಗಾರ ಸಾದಿಕ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ | ವರಮಹಾಲಕ್ಷಿ ಹಬ್ಬಕ್ಕೆ ತರಕಾರಿ ತುಟ್ಟಿ</blockquote>.<p><strong>ಉಡುಪಿ:</strong> ಹಬ್ಬದ ಋತು ಆರಂಭವಾಗುತ್ತಿದ್ದಂತೆ ತರಕಾರಿ ಮತ್ತು ಹಣ್ಣು ಹಂಪಲುಗಳ ದರ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.</p>.<p>ನಾಗರ ಪಂಚಮಿ ಕಳೆದ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ಪ್ರತಿ ವರ್ಷವೂ ತರಕಾರಿ ದರ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ ಈ ಬಾರಿ ವಿಪರೀತ ಮಳೆಯಿಂದಾಗಿ ಕೆಲವೆಡೆ ತರಕಾರಿ ಕೃಷಿ ಹಾನಿಯಾದ ಪರಿಣಾಮ ತರಕಾರಿಗಳ ಲಭ್ಯತೆ ಕಡಿಮೆಯಾಗಿ ಇನ್ನಷ್ಟು ಬೆಲೆ ಏರಿಕೆಯಾಗಿದೆ.</p>.<p>ಶಿವಮೊಗ್ಗ, ಹಾಸನ ಮೊದಲಾದೆಡೆಗಳಿಂದ ಜಿಲ್ಲೆಗೆ ತರಕಾರಿಗಳು ಬರುತ್ತಿದ್ದು, ಈ ಬಾರಿ ಮೇ ತಿಂಗಳಿನಿಂದಲೇ ವಿಪರೀತ ಮಳೆ ಆರಂಭವಾಗಿರುವುದರಿಂದ ಕೆಲವೆಡೆ ತರಕಾರಿಗಳು ತೋಟದಲ್ಲೇ ಕೊಳೆತು ಹೋಗಿವೆ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ತರಕಾರಿ ಮಾರಾಟಗಾರರು.</p>.<p>‘ಸಗಟು ಮಾರುಕಟ್ಟೆಯಲ್ಲಿ ಈಗಾಗಲೇ ಕೆಲವು ತರಕಾರಿಗಳ ಆವಕ ಕಡಿಮೆಯಾಗಿರುವುದರಿಂದ ಬೆಲೆಯಲ್ಲಿ ಏರುಪೇರು ಆಗುತ್ತಿದೆ’ ಎನ್ನುತ್ತಾರೆ ಉಡುಪಿಯ ಸರ್ವೀಸ್ ನಿಲ್ದಾಣ ಬಳಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>‘ನಾಗರ ಪಂಚಮಿ ಹಬ್ಬದ ಬಳಿಕ ತರಕಾರಿಗಳಿಗೆ ವಿಪರೀತ ಬೇಡಿಕೆ ಹೆಚ್ಚಿದೆ. ಬೇಡಿಕೆಗನುಗುಣವಾಗಿ ಕೆಲವು ತರಕಾರಿಗಳು ಲಭ್ಯವಾಗದ ಕಾರಣ ದರ ಏರಿಕೆಯಾಗಿದೆ’ ಎಂದು ಅವರು ತಿಳಿಸಿದರು.</p>.<p>ಕಳೆದ ವಾರ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಟೊಮೆಟೊ ದರ ₹50 ಕ್ಕೇರಿದೆ. ಕೆ.ಜಿಗೆ ₹60 ಇದ್ದ ಬೀನ್ಸ್ ಬೆಲೆ ₹90ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಸುವರ್ಣ ಗಡ್ಡೆ ದರ ₹80ಕ್ಕೇರಿದೆ.</p>.<p>ಕರಾವಳಿ ಭಾಗದಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿವಿಧ ಖಾದ್ಯಗಳಿಗೆ ಮಂಗಳೂರು ಸೌತೆಕಾಯಿಯನ್ನು ಬಳಸಲಾಗುತ್ತಿದೆ. ಈ ಕಾರಣಕ್ಕೆ ಅದಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಕಳೆದ ವಾರ ಕೆ.ಜಿಗೆ ₹40ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆ ದರ ₹80ಕ್ಕೆ ಜಿಗಿದಿದೆ.</p>.<p>ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್, ಪೇರಳೆ ಮತ್ತು ದಾಳಿಂಬೆ ದರವೂ ಗಗನಮುಖಿಯಾಗಿದೆ. ಕೆ.ಜಿಗೆ ₹140 ಇದ್ದ ಡ್ರ್ಯಾಗನ್ ಫ್ರೂಟ್ ದರ ₹180 ದಾಟಿದೆ. ಪೇರಳೆ ದರ ಕೆ.ಜಿಗೆ ₹140 ಹಾಗೂ ದಾಳಿಂಬೆ ಕೆ.ಜಿಗೆ ₹180 ಇದೆ.</p>.<div><blockquote>ಈಗಾಗಲೇ ಕೆಲವು ತರಕಾರಿಗಳ ದರ ಏರಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ</blockquote><span class="attribution">ಜಯಾನಂದ ತರಕಾರಿ ಮಾರಾಟಗಾರ</span></div>.<div><blockquote>ಈ ಬಾರಿ ಜೂನ್ ಜುಲೈ ತಿಂಗಳಲ್ಲಿ ನಿರಂತರ ಮಳೆಯಾಗಿರುವುದರಿಂದ ಕೆಲವು ಹಣ್ಣುಗಳ ಲಭ್ಯತೆ ಕೊರತೆ ಉಂಟಾಗಿ ಹಣ್ಣುಗಳ ದರ ಏರಿಕೆಯಾಗಿದೆ</blockquote><span class="attribution">ಸಾದಿಕ್ ಹಣ್ಣಿನ ಮಾರಾಟಗಾರ </span></div>.<div><blockquote>ದರ ಏರಿಕೆಯಾದರೂ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣು ಅತಿ ಅಗತ್ಯವಾಗಿದೆ. ಈ ಕಾರಣಕ್ಕೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ</blockquote><span class="attribution">ಶ್ರೀನಿವಾಸ ಮೂರ್ತಿ ಗ್ರಾಹಕ</span></div>.<p><strong>ಬಾಳೆಹಣ್ಣಿನ ದರ ಏರಿಕೆ</strong> </p><p>ನಾಗರ ಪಂಚಮಿ ಬಳಿಕ ಏಲಕ್ಕಿ ಬಾಳೆಹಣ್ಣಿಗೆ ವಿಪರೀತ ಬೇಡಿಕೆ ಕುದುರಿದ್ದು ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆ ಹಣ್ಣಿನ ದರವು ₹120ರ ಗಡಿ ದಾಟಿದೆ. ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರ ₹80ಕ್ಕೆ ಏರಿಕೆಯಾಗಿದೆ. ‘ವರಮಹಾಲಕ್ಷ್ಮಿ ಹಬ್ಬ ಬಂದಿರುವುದರಿಂದ ಏಲಕ್ಕಿ ಬಾಳೆಹಣ್ಣಿನ ದರ ವಿಪರೀತ ಏರಿಕೆಯಾಗಿದೆ. ನವರಾತ್ರಿ ಹಬ್ಬ ಕಳೆಯುವವರೆಗೂ ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿಗೆ ₹100ರಿಂದ ಕೆಳಗಿಳಿಯುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಹಣ್ಣಿನ ಮಾರಾಟಗಾರ ಸಾದಿಕ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>