ಜೋಡುಕಟ್ಟೆಯಿಂದ ರಥಬೀದಿ ತಲುಪಿದೆ ಹೊರೆ ಕಾಣಿಕೆ ಮೆರವಣಿಗೆ ಸಮಾಪನಗೊಂಡಿತು. ದೈವಜ್ಞ ಬ್ರಾಹ್ಮಣ ಸಂಘ, ವಿಶ್ವ ಬ್ರಾಹ್ಮಣ ಯುವ ಸಂಘಟನೆ, ರಥಬೀದಿ ವ್ಯಾಪಾರಿಗಳ ಸಂಘ, ರಿಕ್ಷಾ ಚಾಲಕರ ಚಂಘ, ವಿಷ್ಣುಮೂರ್ತಿ ದೇವಸ್ಥಾನ ಸಮಿತಿ, ಕಡಿಯಾಳಿ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನ, ಕನ್ನಾರ್ಪಾಡಿ ಜಯದುರ್ಗೆ ದೇವಸ್ಥಾನ ಸೇರಿದಂತೆ ಜಿಲ್ಲೆಯ ಹಲವು ದೇವಸ್ಥಾನಗಳಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.