<p><strong>ಉಡುಪಿ: </strong>ಬ್ರಹ್ಮಾವರ ಹಾಗೂ ಉಡುಪಿ ತಾಲ್ಲೂಕಿನ ಸಿ.ಆರ್.ಝೆಡ್ ವ್ಯಾಪ್ತಿಯ ನದಿ ಪ್ರದೇಶದಲ್ಲಿ 5 ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ನೀಡಲಾಗಿದೆ ಎಂದು ಭೂ ಹಾಗೂ ಗಣಿ ವಿಜ್ಞಾನ ಇಲಾಖೆ ತಿಳಿಸಿದೆ.</p>.<p>ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿನ ಸಿ.ಆರ್.ಝೆಡ್ ವ್ಯಾಪ್ತಿಯ ನದಿ ಪ್ರದೇಶದಲ್ಲಿ 9 ದಿಬ್ಬಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 7 ಮರಳು ದಿಬ್ಬಗಳಿಗೆ ಕೆ.ಎಸ್.ಸಿ.ಝೆಡ್.ಎಂ.ಎ ಯಿಂದ ಅನುಮೋದನೆ ದೊರತಿತ್ತು. ಆದರೆ ಸೀತಾ ನದಿಯ 2 ಮರಳು ದಿಬ್ಬಗಳಿಗೆ ಆಕ್ಷೇಪಣೆ ಬಂದಿರುವುದರಿಂದ ಉಳಿದ 5 ಮರಳು ದಿಬ್ಬಗಳಿಗೆ ಪರವಾನಗಿ ನೀಡುವ ಕುರಿತು 7 ಸದಸ್ಯರ ನೇತೃತ್ವದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.</p>.<p>2011ರ ಪೂರ್ವದಲ್ಲಿ ಪರವಾನಗಿ ಪಡೆದಿರುವ 61 ಸಾಂಪ್ರದಾಯಿಕ ಮರಳು ಪರವಾನಿಗೆದಾರರಲ್ಲಿ 45 ಅರ್ಜಿದಾರರು ಮರಳು ದಿಬ್ಬದ ಸಂಖ್ಯೆಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಐ.ಎಲ್.ಎಂ.ಎಸ್ ತಂತ್ರಾಂಶದಲ್ಲಿ ಆಳವಡಿಸಲಾಗಿದೆ. ಜಿ.ಪಿ.ಎಸ್ ತರಬೇತಿ ನೀಡಲಾಗಿದೆ. ಈಗಾಗಲೇ 5 ಜನರು ಮರಳುಗಾರಿಕೆ ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಉಳಿದ 40 ಅರ್ಜಿದಾರರು ಸಹ ಪರವಾನಿಗೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.</p>.<p>ಸಾರ್ವಜನಿಕರು 45 ಪರವಾನಗಿದಾರರಿಂದ ಮರಳು ಪಡೆಯಬಹುದಾಗಿದೆ. ನಿಗಧಿಪಡಿಸಿದ ಮರಳಿನ ಪ್ರಮಾಣದಲ್ಲಿ ಶೇ 10ರಷ್ಟು ಮರಳನ್ನು ನೇಜಾರಿನಲ್ಲಿರುವ ನಿರ್ಮಿತಿ ಕೇಂದ್ರದ ಸ್ಟಾಕ್ ಯಾರ್ಡ್ಗೆ ಸಾಗಾಟ ಮಾಡುವಂತೆ ಪರವಾನಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಬ್ರಹ್ಮಾವರ ಹಾಗೂ ಉಡುಪಿ ತಾಲ್ಲೂಕಿನ ಸಿ.ಆರ್.ಝೆಡ್ ವ್ಯಾಪ್ತಿಯ ನದಿ ಪ್ರದೇಶದಲ್ಲಿ 5 ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ನೀಡಲಾಗಿದೆ ಎಂದು ಭೂ ಹಾಗೂ ಗಣಿ ವಿಜ್ಞಾನ ಇಲಾಖೆ ತಿಳಿಸಿದೆ.</p>.<p>ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿನ ಸಿ.ಆರ್.ಝೆಡ್ ವ್ಯಾಪ್ತಿಯ ನದಿ ಪ್ರದೇಶದಲ್ಲಿ 9 ದಿಬ್ಬಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 7 ಮರಳು ದಿಬ್ಬಗಳಿಗೆ ಕೆ.ಎಸ್.ಸಿ.ಝೆಡ್.ಎಂ.ಎ ಯಿಂದ ಅನುಮೋದನೆ ದೊರತಿತ್ತು. ಆದರೆ ಸೀತಾ ನದಿಯ 2 ಮರಳು ದಿಬ್ಬಗಳಿಗೆ ಆಕ್ಷೇಪಣೆ ಬಂದಿರುವುದರಿಂದ ಉಳಿದ 5 ಮರಳು ದಿಬ್ಬಗಳಿಗೆ ಪರವಾನಗಿ ನೀಡುವ ಕುರಿತು 7 ಸದಸ್ಯರ ನೇತೃತ್ವದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.</p>.<p>2011ರ ಪೂರ್ವದಲ್ಲಿ ಪರವಾನಗಿ ಪಡೆದಿರುವ 61 ಸಾಂಪ್ರದಾಯಿಕ ಮರಳು ಪರವಾನಿಗೆದಾರರಲ್ಲಿ 45 ಅರ್ಜಿದಾರರು ಮರಳು ದಿಬ್ಬದ ಸಂಖ್ಯೆಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಐ.ಎಲ್.ಎಂ.ಎಸ್ ತಂತ್ರಾಂಶದಲ್ಲಿ ಆಳವಡಿಸಲಾಗಿದೆ. ಜಿ.ಪಿ.ಎಸ್ ತರಬೇತಿ ನೀಡಲಾಗಿದೆ. ಈಗಾಗಲೇ 5 ಜನರು ಮರಳುಗಾರಿಕೆ ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಉಳಿದ 40 ಅರ್ಜಿದಾರರು ಸಹ ಪರವಾನಿಗೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.</p>.<p>ಸಾರ್ವಜನಿಕರು 45 ಪರವಾನಗಿದಾರರಿಂದ ಮರಳು ಪಡೆಯಬಹುದಾಗಿದೆ. ನಿಗಧಿಪಡಿಸಿದ ಮರಳಿನ ಪ್ರಮಾಣದಲ್ಲಿ ಶೇ 10ರಷ್ಟು ಮರಳನ್ನು ನೇಜಾರಿನಲ್ಲಿರುವ ನಿರ್ಮಿತಿ ಕೇಂದ್ರದ ಸ್ಟಾಕ್ ಯಾರ್ಡ್ಗೆ ಸಾಗಾಟ ಮಾಡುವಂತೆ ಪರವಾನಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>