<p><strong>ಉಡುಪಿ</strong>: ಲಾಕ್ಡೌನ್ ಸಂದರ್ಭ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ವೈದ್ಯಕೀಯ ತುರ್ತು ಅಗತ್ಯವಿದ್ದವರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ಉಡುಪಿಯ ಹಲವು ಆಟೋ ಸಂಘಟನೆಗಳು ಮುಂದಾಗಿದ್ದು, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಉಚಿತವಾಗಿ ಆಟೋ ಸೇವೆ ನೀಡುತ್ತಿವೆ.</p>.<p>ಉಡುಪಿಯ ಆಶ್ರಯದಾತ ಆಟೋ ಯೂನಿಯನ್ ಕೂಡ ಸಾರ್ವಜನಿಕರಿಗೆ ಉಚಿತ ಆಟೊ ಸೇವೆ ನೀಡಲು ಮುಂದಾಗಿದ್ದು, ಬುಧವಾರ ಯೂನಿಯನ್ ಆಟೋಗಳು ಲಾಕ್ಡೌನ್ ಅವಧಿಯಲ್ಲಿ ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಪ್ರಾಧಿಕಾರದಿಂದ ಗುರುತಿನ ಪತ್ರಗಳನ್ನು ನೀಡಲಾಯಿತು.</p>.<p>ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್ ಅವರು ಆಶ್ರಯದಾತ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರಿಗೆ ಅನುಮತಿ ಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.</p>.<p>ವೈದ್ಯಕೀಯ ತುರ್ತು ಇದ್ದರೆ ಸಾರ್ವಜನಿಕರು ಈ ಕೆಳಗಿನ ನಂಬರ್ಗಳನ್ನು ಸಂಪರ್ಕಿಸಿ ಉಚಿತ ಆಟೋ ಸೇವೆ ಪಡೆಯಬಹುದು. ಉಡುಪಿ ತಾಲ್ಲೂಕು: ಶಿವಾನಂದ ಮೂಡುಬೆಟ್ಟು 9343012627, ಸಾಧಿಕ್– 9880184746), ಉಮೇಶ್ ಶೆಟ್ಟಿ-9740763680.</p>.<p>ಕಾರ್ಕಳ ತಾಲ್ಲೂಕು: ಶಿವಪ್ರಸಾದ್ ಶೆಟ್ಟಿ-9844674296), ಪದ್ಮಕುಮಾರ್-9449964332, ಕುಂದಾಪುರ ತಾಲ್ಲೂಕು: ಎಂ. ರಾಜುಶೆಟ್ಟಿ -9448621541, ಕಾಪು ತಾಲ್ಲೂಕು: ಎಂ.ಹುಸೈನಾರ್-9945934767, ಬ್ರಹ್ಮಾವರ: ಕೆ.ರವೀಂದ್ರ ಬೈಕಾಡಿ–9880935194, ಹೇರೂರು: ಕೆ. ಶೇಖರ್ ಜತ್ತನ್ನ-8971466490.</p>.<p>‘ಉಚಿತ ಅರೋಗ್ಯ ಸೇವೆ-ಸ್ವಯಂ ಸೇವಕ ಚಾಲಕ’ ಎಂಬ ಘೋಷಣೆಯೊಂದಿಗೆ ಉಡುಪಿ ಜಿಲ್ಲೆಯ ಹಲವೆಡೆ ಆಟೋಗಳು ಸಂಚರಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಲಾಕ್ಡೌನ್ ಸಂದರ್ಭ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ವೈದ್ಯಕೀಯ ತುರ್ತು ಅಗತ್ಯವಿದ್ದವರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ಉಡುಪಿಯ ಹಲವು ಆಟೋ ಸಂಘಟನೆಗಳು ಮುಂದಾಗಿದ್ದು, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಉಚಿತವಾಗಿ ಆಟೋ ಸೇವೆ ನೀಡುತ್ತಿವೆ.</p>.<p>ಉಡುಪಿಯ ಆಶ್ರಯದಾತ ಆಟೋ ಯೂನಿಯನ್ ಕೂಡ ಸಾರ್ವಜನಿಕರಿಗೆ ಉಚಿತ ಆಟೊ ಸೇವೆ ನೀಡಲು ಮುಂದಾಗಿದ್ದು, ಬುಧವಾರ ಯೂನಿಯನ್ ಆಟೋಗಳು ಲಾಕ್ಡೌನ್ ಅವಧಿಯಲ್ಲಿ ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಪ್ರಾಧಿಕಾರದಿಂದ ಗುರುತಿನ ಪತ್ರಗಳನ್ನು ನೀಡಲಾಯಿತು.</p>.<p>ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್ ಅವರು ಆಶ್ರಯದಾತ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರಿಗೆ ಅನುಮತಿ ಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.</p>.<p>ವೈದ್ಯಕೀಯ ತುರ್ತು ಇದ್ದರೆ ಸಾರ್ವಜನಿಕರು ಈ ಕೆಳಗಿನ ನಂಬರ್ಗಳನ್ನು ಸಂಪರ್ಕಿಸಿ ಉಚಿತ ಆಟೋ ಸೇವೆ ಪಡೆಯಬಹುದು. ಉಡುಪಿ ತಾಲ್ಲೂಕು: ಶಿವಾನಂದ ಮೂಡುಬೆಟ್ಟು 9343012627, ಸಾಧಿಕ್– 9880184746), ಉಮೇಶ್ ಶೆಟ್ಟಿ-9740763680.</p>.<p>ಕಾರ್ಕಳ ತಾಲ್ಲೂಕು: ಶಿವಪ್ರಸಾದ್ ಶೆಟ್ಟಿ-9844674296), ಪದ್ಮಕುಮಾರ್-9449964332, ಕುಂದಾಪುರ ತಾಲ್ಲೂಕು: ಎಂ. ರಾಜುಶೆಟ್ಟಿ -9448621541, ಕಾಪು ತಾಲ್ಲೂಕು: ಎಂ.ಹುಸೈನಾರ್-9945934767, ಬ್ರಹ್ಮಾವರ: ಕೆ.ರವೀಂದ್ರ ಬೈಕಾಡಿ–9880935194, ಹೇರೂರು: ಕೆ. ಶೇಖರ್ ಜತ್ತನ್ನ-8971466490.</p>.<p>‘ಉಚಿತ ಅರೋಗ್ಯ ಸೇವೆ-ಸ್ವಯಂ ಸೇವಕ ಚಾಲಕ’ ಎಂಬ ಘೋಷಣೆಯೊಂದಿಗೆ ಉಡುಪಿ ಜಿಲ್ಲೆಯ ಹಲವೆಡೆ ಆಟೋಗಳು ಸಂಚರಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>