ಕೆಲ ದಿನಗಳಿಂದ ತಲ್ಲೂರು ಪರಿಸರದಲ್ಲಿ ತಿರುಗಾಡುತ್ತಿದ್ದ ಯುವಕನನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರು ಗಮನಿಸಿ, ಆತನನ್ನು ವಿಚಾರಿಸಿದಾಗ ಆತನಿಗೆ ಮಾತುಬಾರದಿರುವ, ಕಿವಿ ಕೇಳದೆ ಇರುವ ವಿಷಯ ತಿಳಿದು ಬಂತು. ಹೀಗಾಗಿ ಅವರಿಗೆ ಆತನ ಹೆಸರು, ಊರು, ವಿಳಾಸ ತಿಳಿಯಲು ಸಾಧ್ಯವಾಗಲಿಲ್ಲ. ಅಸ್ವಸ್ಥತೆಯಲ್ಲಿ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದ ಆತನಿಗೆ ಆಶ್ರಯ ಕಲ್ಪಿಸಿದ ಸ್ಥಳೀಯರು, ಬಳಿಕ ಈ ಕುರಿತು ಉಡುಪಿಯ ಸಾಮಾಜಿಕ ಕಾರ್ಯಕರ್ತ ನಮ್ಮ ಭೂಮಿಯ ರಾಮಾಂಜಿ ಅವರಿಗೆ ಮಾಹಿತಿ ನೀಡಿದ್ದರು.