<p><strong>ಉಡುಪಿ</strong>: ಹಲವು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನಾಡ ದೋಣಿ ಮೀನುಗಾರರ ದುಡಿಮೆಗೆ ಹೊಡೆತ ಬಿದ್ದಿದೆ.</p>.<p>ಜುಲೈ ತಿಂಗಳ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಇದ್ದ ಕಾರಣ ಕೆಲ ದಿನಗಳ ಕಾಲ ಮಲ್ಪೆಯ ನಾಡ ದೋಣಿ ಮೀನುಗಾರರು ಮೀನುಗಾರಿಕೆ ನಡೆಸಿದ್ದರು. ಆದರೆ ಅನಂತರ ಹವಾಮಾನ ವೈಪರೀತ್ಯದಿಂದಾಗಿ ನಾಡ ದೋಣಿಗಳು ದಡ ಸೇರಿವೆ.</p>.<p>ಆರಂಭದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಡಿ ಸಿಕ್ಕಿತು. ಈಗಲೂ ಸಮುದ್ರಕ್ಕೆ ತೆರಳಿದರೆ ಸಿಗಡಿ ಸಿಗುತ್ತದೆ ಆದರೆ ತೆರಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರರು.</p>.<p>ಬೈಂದೂರು ವ್ಯಾಪ್ತಿಯ ನಾಡದೋಣಿ ಮೀನುಗಾರರು ಜುಲೈ ಮಧ್ಯ ಭಾಗದಿಂದ ಮೀನುಗಾರಿಕೆ ಶುರು ಮಾಡಿದ್ದು, ಅವರಿಗೆ ಆರಂಭದಿಂದಲೇ ಹೊಡೆತ ಬಿದ್ದಿದೆ.</p>.<p>ಕಳೆದ ವರ್ಷ ಕೂಡ ಜುಲೈ ತಿಂಗಳಲ್ಲಿ ಪದೇ ಪದೇ ಚಂಡಮಾರುತ ರೂಪಗೊಂಡ ಪರಿಣಾಮವಾಗಿ ನಾಡ ದೋಣಿಗಳು ಕಡಲಿಗಿಳಿಯದೆ ಮೀನುಗಾರರಿಗೆ ನಷ್ಟ ಉಂಟಾಗಿತ್ತು.</p>.<p>‘ಈ ಬಾರಿ ಉತ್ತಮ ಮೀನುಗಾರಿಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ದುಡಿಮೆ ಇಲ್ಲದಂತಾಗಿದೆ. ಟ್ರಾಲಿಂಗ್ ನಿಷೇಧ ತೆರವಾಗಲು ಇನ್ನು ಕೆಲವೇ ದಿನಗಳಿದ್ದು, ನಿರಂತರ ಮಳೆಯಿಂದಾಗಿ ಸಮುದ್ರಕ್ಕಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮಲ್ಪೆಯ ನಾಡದೋಣಿ ಮೀನುಗಾರ ರತನ್ ತಿಳಿಸಿದರು.</p>.<p>‘ಸಮುದ್ರದಲ್ಲಿ ಆಗಾಗ ತೂಫಾನ್ ಎದ್ದ ಪರಿಣಾಮವಾಗಿ ಕಡಲಿನ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಈ ಕಾರಣಕ್ಕೆ ಅಳಿವೆ ಮುಖಾಂತರ ಕಡಲಿಗೆ ಮೀನುಗಾರಿಕೆಯ ತೆರಳಲು ಭಯವಾಗುತ್ತಿದೆ’ ಎಂದೂ ಅವರು ಹೇಳಿದರು.</p>.<p> <strong>‘ದುಬಾರಿಯಾಗಿದೆ ಸೀಮೆಎಣ್ಣೆ’</strong> </p><p>‘ಹೆಚ್ಚಿನ ನಾಡ ದೋಣಿಗಳಲ್ಲಿ ಸೀಮೆಎಣ್ಣೆ ಬಳಸುತ್ತಿದ್ದು ಕಳೆದ ವರ್ಷ ಲೀಟರ್ಗೆ ₹35 ಇದ್ದ ಸೀಮೆಎಣ್ಣೆಗೆ ಈ ಬಾರಿ ಲೀಟರ್ಗೆ ₹ 65 ಆಗಿದೆ. ಸೀಮೆಎಣ್ಣೆ ದರ ಲೀಟರ್ ₹100 ಇದ್ದು ಸಹಾಯಧನ ಕಳೆದು ಲೀಟರ್ಗೆ ₹65 ಪಾವತಿಸಬೇಕಾಗುತ್ತದೆ’ ಎಂದು ಮಲ್ಪೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್ ಸಾಲ್ಯಾನ್ ತಿಳಿಸಿದರು. ‘ಮೀನುಗಾರಿಕೆಗೆ ತೆರಳಿ ಮೀನು ಸಿಗದಿದ್ದರೆ ಸೀಮೆ ಎಣ್ಣೆಗೆ ಖರ್ಚು ಮಾಡಿದ ಹಣ ನಷ್ಟವಾಗುತ್ತದೆ. ಈ ಬಾರಿ ಮಲ್ಪೆ ನಾಡ ದೋಣಿ ಮೀನುಗಾರರಿಗೆ ಕೇವಲ 10 ದಿವಸ ಮಾತ್ರ ಮೀನುಗಾರಿಗೆ ನಡೆಸಲು ಸಾಧ್ಯವಾಗಿತ್ತು. ನಂತರ ಕಡಲಿನಲ್ಲಿ ತೂಫಾನ್ ಎದ್ದ ಕಾರಣ ಕಡಲಿಗಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಹಲವು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನಾಡ ದೋಣಿ ಮೀನುಗಾರರ ದುಡಿಮೆಗೆ ಹೊಡೆತ ಬಿದ್ದಿದೆ.</p>.<p>ಜುಲೈ ತಿಂಗಳ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಇದ್ದ ಕಾರಣ ಕೆಲ ದಿನಗಳ ಕಾಲ ಮಲ್ಪೆಯ ನಾಡ ದೋಣಿ ಮೀನುಗಾರರು ಮೀನುಗಾರಿಕೆ ನಡೆಸಿದ್ದರು. ಆದರೆ ಅನಂತರ ಹವಾಮಾನ ವೈಪರೀತ್ಯದಿಂದಾಗಿ ನಾಡ ದೋಣಿಗಳು ದಡ ಸೇರಿವೆ.</p>.<p>ಆರಂಭದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಡಿ ಸಿಕ್ಕಿತು. ಈಗಲೂ ಸಮುದ್ರಕ್ಕೆ ತೆರಳಿದರೆ ಸಿಗಡಿ ಸಿಗುತ್ತದೆ ಆದರೆ ತೆರಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರರು.</p>.<p>ಬೈಂದೂರು ವ್ಯಾಪ್ತಿಯ ನಾಡದೋಣಿ ಮೀನುಗಾರರು ಜುಲೈ ಮಧ್ಯ ಭಾಗದಿಂದ ಮೀನುಗಾರಿಕೆ ಶುರು ಮಾಡಿದ್ದು, ಅವರಿಗೆ ಆರಂಭದಿಂದಲೇ ಹೊಡೆತ ಬಿದ್ದಿದೆ.</p>.<p>ಕಳೆದ ವರ್ಷ ಕೂಡ ಜುಲೈ ತಿಂಗಳಲ್ಲಿ ಪದೇ ಪದೇ ಚಂಡಮಾರುತ ರೂಪಗೊಂಡ ಪರಿಣಾಮವಾಗಿ ನಾಡ ದೋಣಿಗಳು ಕಡಲಿಗಿಳಿಯದೆ ಮೀನುಗಾರರಿಗೆ ನಷ್ಟ ಉಂಟಾಗಿತ್ತು.</p>.<p>‘ಈ ಬಾರಿ ಉತ್ತಮ ಮೀನುಗಾರಿಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ದುಡಿಮೆ ಇಲ್ಲದಂತಾಗಿದೆ. ಟ್ರಾಲಿಂಗ್ ನಿಷೇಧ ತೆರವಾಗಲು ಇನ್ನು ಕೆಲವೇ ದಿನಗಳಿದ್ದು, ನಿರಂತರ ಮಳೆಯಿಂದಾಗಿ ಸಮುದ್ರಕ್ಕಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮಲ್ಪೆಯ ನಾಡದೋಣಿ ಮೀನುಗಾರ ರತನ್ ತಿಳಿಸಿದರು.</p>.<p>‘ಸಮುದ್ರದಲ್ಲಿ ಆಗಾಗ ತೂಫಾನ್ ಎದ್ದ ಪರಿಣಾಮವಾಗಿ ಕಡಲಿನ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಈ ಕಾರಣಕ್ಕೆ ಅಳಿವೆ ಮುಖಾಂತರ ಕಡಲಿಗೆ ಮೀನುಗಾರಿಕೆಯ ತೆರಳಲು ಭಯವಾಗುತ್ತಿದೆ’ ಎಂದೂ ಅವರು ಹೇಳಿದರು.</p>.<p> <strong>‘ದುಬಾರಿಯಾಗಿದೆ ಸೀಮೆಎಣ್ಣೆ’</strong> </p><p>‘ಹೆಚ್ಚಿನ ನಾಡ ದೋಣಿಗಳಲ್ಲಿ ಸೀಮೆಎಣ್ಣೆ ಬಳಸುತ್ತಿದ್ದು ಕಳೆದ ವರ್ಷ ಲೀಟರ್ಗೆ ₹35 ಇದ್ದ ಸೀಮೆಎಣ್ಣೆಗೆ ಈ ಬಾರಿ ಲೀಟರ್ಗೆ ₹ 65 ಆಗಿದೆ. ಸೀಮೆಎಣ್ಣೆ ದರ ಲೀಟರ್ ₹100 ಇದ್ದು ಸಹಾಯಧನ ಕಳೆದು ಲೀಟರ್ಗೆ ₹65 ಪಾವತಿಸಬೇಕಾಗುತ್ತದೆ’ ಎಂದು ಮಲ್ಪೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್ ಸಾಲ್ಯಾನ್ ತಿಳಿಸಿದರು. ‘ಮೀನುಗಾರಿಕೆಗೆ ತೆರಳಿ ಮೀನು ಸಿಗದಿದ್ದರೆ ಸೀಮೆ ಎಣ್ಣೆಗೆ ಖರ್ಚು ಮಾಡಿದ ಹಣ ನಷ್ಟವಾಗುತ್ತದೆ. ಈ ಬಾರಿ ಮಲ್ಪೆ ನಾಡ ದೋಣಿ ಮೀನುಗಾರರಿಗೆ ಕೇವಲ 10 ದಿವಸ ಮಾತ್ರ ಮೀನುಗಾರಿಗೆ ನಡೆಸಲು ಸಾಧ್ಯವಾಗಿತ್ತು. ನಂತರ ಕಡಲಿನಲ್ಲಿ ತೂಫಾನ್ ಎದ್ದ ಕಾರಣ ಕಡಲಿಗಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>