ಬಲಿತ ಮಾವಿನ ಕಾಯಿ ಕೊಯ್ದ ನಂತರ, ನೈಸರ್ಗಿಕವಾಗಿ ಹಣ್ಣಾಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ತೂಕ ಕಡಿಮೆಯಾಗುವ ಜತೆಗೆ ಹಣ್ಣು ಕೊಳೆಯುವ ಪ್ರಮಾಣವೂ ಹೆಚ್ಚಿರುತ್ತದೆ. ವ್ಯಾಪಾರಿಗಳು ಕ್ಯಾಲ್ಸಿಯಮ್ ಕಾರ್ಬೈಡ್ನಂತಹ ನಿಷೇಧಿತ ರಾಸಾಯನಿಕಗಳನ್ನು ಇದಕ್ಕೆ ಬಳಸುವುದು ಕಂಡುಬಂದಿದೆ. ಇದನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಬದಲಿಗೆ, ಇಥೆಲಿನ್ ಗ್ಯಾಸ್ ಬಳಸಿ, ಹವಾನಿಯಂತ್ರಿತ ಕೊಠಡಿಗಳಲ್ಲಿ ಹಣ್ಣು ಮಾಗಿಸುವ ವಿಧಾನವೂ ಪ್ರಚಲಿತದಲ್ಲಿದೆ. ಆದರೆ, ಇದು ವೆಚ್ಚದಾಯಕ. ಈ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿನ ಭಾರತೀಐ ತೋಟಗಾರಿಕಾ ಸಂಶೋಧನಾ ಕೇಂದ್ರವು ಸುರಕ್ಷಿತ ವಿಧಾನವನ್ನು ಪರಿಚಯಿಸಿದೆ ಎಂದು ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ.ಹೆಗಡೆ ತಿಳಿಸಿದ್ದಾರೆ.