ತಾಲ್ಲೂಕಿನ ಗೋಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರಿಗೆ ಬಿಜೆಪಿಗೆ ಅಧಿಕಾರ ಕೊಡುವ ಮನಸ್ಸಿತ್ತು. ಕಳೆದ ವಿಧಾನಸಭೆ ವೇಳೆಗೆ ಇದ್ದ ಜನರ ಅಪೇಕ್ಷೆ, ಉಪಚುನಾವಣೆ ಮೂಲಕ ಈಡೇರಿದಂತಾಗಿದೆ. ಬಿಜೆಪಿ ಸುಭದ್ರ ಸರ್ಕಾರ ನಡೆಸಲಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು, ಸ್ಥಿರ ಸರ್ಕಾರದ ಜನರ ಅಪೇಕ್ಷೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ, ಪಕ್ಷಕ್ಕೆ ಬಂದು ಸ್ಪರ್ಧಿಸಿದ ಅಭ್ಯರ್ಥಿಗಳ ಪ್ರಭಾವ ಈ ನಾಲ್ಕು ಅಂಶಗಳು ಗೆಲುವಿಗೆ ಸಹಕಾರಿಯಾದವು’ ಎಂದರು.