<p><strong>ಕಾರವಾರ: </strong>ಎಂಜಿನ್ ಕೆಟ್ಟುಹೋದ ಪರಿಣಾಮಆಳಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದಮೀನುಗಾರಿಕಾ ದೋಣಿಹಾಗೂ ಅದರಲ್ಲಿದ್ದ ಐವರು ಮೀನುಗಾರರನ್ನು, ಸಮೀಪದಲ್ಲೇ ಇದ್ದ ಮತ್ತೊಂದು ದೋಣಿಯಮೀನುಗಾರರು ಗುರುವಾರ ರಕ್ಷಿಸಿದ್ದಾರೆ.</p>.<p>ಕಾರವಾರ ತಾಲ್ಲೂಕಿನ ಮುದಗಾದ ‘ಶ್ರೀ ಗುಡಿದೇವ’ಹೆಸರಿನ ದೋಣಿಯು ಆಳಸಮುದ್ರ ಮೀನುಗಾರಿಕೆಗೆ ಬುಧವಾರ ಹೊರಟಿತ್ತು. ಅದರಲ್ಲಿದ್ದ ಮೀನುಗಾರರು ತಮ್ಮ ಪರಿಚಯಸ್ಥರೊಂದಿಗೆ ರಾತ್ರಿ 10.30ರವರೆಗೂ ಮೊಬೈಲ್ ಫೋನ್ ಮೂಲಕ ಮಾತನಾಡಿದ್ದರು. ಆದರೆ, ಗುರುವಾರ ಬೆಳಿಗ್ಗೆಯಿಂದ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಮನೆ ಮಾಡಿತ್ತು.</p>.<p>ಈ ಬಗ್ಗೆ ಮೀನುಗಾರಿಕಾ ಇಲಾಖೆ ಹಾಗೂಕರಾವಳಿ ಕಾವಲು ಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅವರು ಹುಡುಕಾಟ ಶುರು ಮಾಡುವಷ್ಟರಲ್ಲಿ ಬೈತಖೋಲ್ ಬಂದರಿಗೆ ದೋಣಿಯು ಮರಳಿತ್ತು.ದೋಣಿಯು ಅಮದಳ್ಳಿಯ ಗಣೇಶ ಛಾಯಾ ಕೊಡಾರಕರಅವರಿಗೆ ಸೇರಿದ್ದು, ಬೈತಖೋಲ್ ಹಾಗೂ ಕೊಪ್ಪಳದ ಮೀನುಗಾರರಿದ್ದರು.</p>.<p class="Subhead"><strong>ವ್ಯಾಪ್ತಿದಾಟಿತ್ತು:</strong> ಮೀನುಗಾರಿಕಾ ದೋಣಿಗಳಿಗೆ ಸಮುದ್ರದ ದಡದಿಂದ 12 ನಾಟಿಕಲ್ ಮೈಲುಗಳಷ್ಟು ದೂರ ಸಾಗಲು ಅವಕಾಶವಿದೆ. ಆದರೆ,‘ಶ್ರೀ ಗುಡಿದೇವ’ ದೋಣಿಯ ಎಂಜಿನ್ ಸ್ಥಗಿತಗೊಂಡ ಕಾರಣ ನಿಯಂತ್ರಣಕ್ಕೆ ಸಿಗದೇ ಈ ವ್ಯಾಪ್ತಿಯನ್ನು ಮೀರಿ ಕೆಲವು ಮೀಟರ್ಗಳಷ್ಟು ಮುಂದೆ ಸಾಗಿತ್ತು. ಅದು ದೊಡ್ಡ ಹಡಗುಗಳು ಸಂಚರಿಸುವ ಮಾರ್ಗವಾದ್ದರಿಂದ ಮತ್ತಷ್ಟು ಆತಂಕಮೂಡಿತ್ತುಎಂದು ಮೀನುಗಾರ ವಿನಾಯಕ ಹರಿಕಂತ್ರ ಮಾಹಿತಿ ನೀಡಿದರು.</p>.<p>ಇದನ್ನು ಗಮನಿಸಿದ, ಸಮೀಪದಲ್ಲೇ ಇದ್ದ ಗೋವಾದ ‘ಲಿಬಿಯಾ’ ಎಂಬ ಪರ್ಸೀನ್ ದೋಣಿಯ ಮೀನುಗಾರರು ರಕ್ಷಣೆಗೆ ಧಾವಿಸಿದರು. ‘ಗುಡಿದೇವ’ ದೋಣಿಯ ಎಂಜಿನ್ ಅನ್ನು ದುರಸ್ತಿಗೊಳಿಸಿ ಚಾಲೂ ಮಾಡಿದರು. ಈ ಮೂಲಕ ಮೀನುಗಾರರು ಸುರಕ್ಷಿತವಾಗಿ ದಡ ಸೇರಲು ಸಹಕರಿಸಿದರು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಎಂಜಿನ್ ಕೆಟ್ಟುಹೋದ ಪರಿಣಾಮಆಳಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದಮೀನುಗಾರಿಕಾ ದೋಣಿಹಾಗೂ ಅದರಲ್ಲಿದ್ದ ಐವರು ಮೀನುಗಾರರನ್ನು, ಸಮೀಪದಲ್ಲೇ ಇದ್ದ ಮತ್ತೊಂದು ದೋಣಿಯಮೀನುಗಾರರು ಗುರುವಾರ ರಕ್ಷಿಸಿದ್ದಾರೆ.</p>.<p>ಕಾರವಾರ ತಾಲ್ಲೂಕಿನ ಮುದಗಾದ ‘ಶ್ರೀ ಗುಡಿದೇವ’ಹೆಸರಿನ ದೋಣಿಯು ಆಳಸಮುದ್ರ ಮೀನುಗಾರಿಕೆಗೆ ಬುಧವಾರ ಹೊರಟಿತ್ತು. ಅದರಲ್ಲಿದ್ದ ಮೀನುಗಾರರು ತಮ್ಮ ಪರಿಚಯಸ್ಥರೊಂದಿಗೆ ರಾತ್ರಿ 10.30ರವರೆಗೂ ಮೊಬೈಲ್ ಫೋನ್ ಮೂಲಕ ಮಾತನಾಡಿದ್ದರು. ಆದರೆ, ಗುರುವಾರ ಬೆಳಿಗ್ಗೆಯಿಂದ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಮನೆ ಮಾಡಿತ್ತು.</p>.<p>ಈ ಬಗ್ಗೆ ಮೀನುಗಾರಿಕಾ ಇಲಾಖೆ ಹಾಗೂಕರಾವಳಿ ಕಾವಲು ಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅವರು ಹುಡುಕಾಟ ಶುರು ಮಾಡುವಷ್ಟರಲ್ಲಿ ಬೈತಖೋಲ್ ಬಂದರಿಗೆ ದೋಣಿಯು ಮರಳಿತ್ತು.ದೋಣಿಯು ಅಮದಳ್ಳಿಯ ಗಣೇಶ ಛಾಯಾ ಕೊಡಾರಕರಅವರಿಗೆ ಸೇರಿದ್ದು, ಬೈತಖೋಲ್ ಹಾಗೂ ಕೊಪ್ಪಳದ ಮೀನುಗಾರರಿದ್ದರು.</p>.<p class="Subhead"><strong>ವ್ಯಾಪ್ತಿದಾಟಿತ್ತು:</strong> ಮೀನುಗಾರಿಕಾ ದೋಣಿಗಳಿಗೆ ಸಮುದ್ರದ ದಡದಿಂದ 12 ನಾಟಿಕಲ್ ಮೈಲುಗಳಷ್ಟು ದೂರ ಸಾಗಲು ಅವಕಾಶವಿದೆ. ಆದರೆ,‘ಶ್ರೀ ಗುಡಿದೇವ’ ದೋಣಿಯ ಎಂಜಿನ್ ಸ್ಥಗಿತಗೊಂಡ ಕಾರಣ ನಿಯಂತ್ರಣಕ್ಕೆ ಸಿಗದೇ ಈ ವ್ಯಾಪ್ತಿಯನ್ನು ಮೀರಿ ಕೆಲವು ಮೀಟರ್ಗಳಷ್ಟು ಮುಂದೆ ಸಾಗಿತ್ತು. ಅದು ದೊಡ್ಡ ಹಡಗುಗಳು ಸಂಚರಿಸುವ ಮಾರ್ಗವಾದ್ದರಿಂದ ಮತ್ತಷ್ಟು ಆತಂಕಮೂಡಿತ್ತುಎಂದು ಮೀನುಗಾರ ವಿನಾಯಕ ಹರಿಕಂತ್ರ ಮಾಹಿತಿ ನೀಡಿದರು.</p>.<p>ಇದನ್ನು ಗಮನಿಸಿದ, ಸಮೀಪದಲ್ಲೇ ಇದ್ದ ಗೋವಾದ ‘ಲಿಬಿಯಾ’ ಎಂಬ ಪರ್ಸೀನ್ ದೋಣಿಯ ಮೀನುಗಾರರು ರಕ್ಷಣೆಗೆ ಧಾವಿಸಿದರು. ‘ಗುಡಿದೇವ’ ದೋಣಿಯ ಎಂಜಿನ್ ಅನ್ನು ದುರಸ್ತಿಗೊಳಿಸಿ ಚಾಲೂ ಮಾಡಿದರು. ಈ ಮೂಲಕ ಮೀನುಗಾರರು ಸುರಕ್ಷಿತವಾಗಿ ದಡ ಸೇರಲು ಸಹಕರಿಸಿದರು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>