ಅರ್ಜಿದಾರರ ಕೋರಿಕೆ: ‘ಉದ್ದೇಶಿತ ಯೋಜನೆಯ ಸ್ಥಳದಲ್ಲಿ ಆಮೆ ವಲಯವಿದೆ. ಬಂದರು ಅಭಿವೃದ್ಧಿ ಕಾಮಗಾರಿಯಿಂದ ಅವುಗಳಿಗೆ ತೊಂದರೆ ಆಗುತ್ತದೆ. ಅಂತೆಯೇ, ಸ್ಥಳೀಯ ಮೀನುಗಾರರ ಜೀವನಾಧಾರಕ್ಕೂ ಧಕ್ಕೆ ಉಂಟಾಗುತ್ತದೆ. ಆದ್ದರಿಂದ, ಯೋಜನೆಯನ್ನು ತಡೆಹಿಡಿಯಬೇಕು ಮತ್ತು ಯೋಜನೆಗೆ ನೀಡಲಾಗಿರುವ ಪರಿಸರ ನಿರಾಕ್ಷೇಪಣಾ ಪತ್ರ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.