ಮಾಣಿಕಟ್ಟಾದದಿಂದ ಸಾಗುವಕಾಮಗಾರಿಯು ಹೊರೆಉಳಿ, ಕಲ್ಕಟ್ಟ, ತುಂಬ್ರಿಕಟ್ಟ ಹಾಗೂ ಕಾಗಾಲ್ ಗ್ರಾಮದ ಕೆಲವು ಭಾಗಗಳಲ್ಲಿ ಕೂಡ ನಡೆಯಲಿದೆ. ಈ ಯೋಜನೆಯಿಂದ ಕಗ್ಗ ಭತ್ತ ಬೆಳೆಯುವ ರೈತರಿಗೆ, ಮೀನುಗಾರರಿಗೆ ಅನುಕೂಲವಾಗಲಿದೆ. ಏಡಿ, ಸೀಗಡಿ ಕೃಷಿಗೂ ಸಹಕಾರಿಯಾಗಲಿದೆ. ಸಮುದ್ರದ ಉಪ್ಪು ನೀರು ಮತ್ತು ನದಿಯ ಸಿಹಿ ನೀರನ್ನು ನಿಯಮಿತ ಪ್ರಮಾಣದಲ್ಲಿ ಗದ್ದೆಗೆ ಹರಿಸಲು ಅನುಕೂಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.