<p><strong>ಕಾರವಾರ:</strong> ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕೆ ದುರಸ್ತಿ ಯಾರ್ಡ್, ತನ್ನ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ‘ಗುಣಮಟ್ಟದ ಪರಿಕಲ್ಪನೆಗಳಿಗಾಗಿ ಅಂತರರಾಷ್ಟ್ರೀಯ ಸಮಾವೇಶ 2022’ಕ್ಕೆ ಆಯ್ಕೆಯಾಗಿದೆ. ಸಮಾವೇಶವು ಇಂಡೋನೇಷ್ಯದಲ್ಲಿ ಈ ವರ್ಷ ಆಯೋಜನೆಯಾಗಲಿದೆ.</p>.<p>ನೌಕೆ ದುರಸ್ತಿ ಯಾರ್ಡ್ನ ಗುಣಮಟ್ಟ ನಿಯಂತ್ರಣದ ತಂಡ ‘ಸಾಹಸ್’, ಕಳೆದ ವರ್ಷ ಡಿ.27ರಿಂದ ಡಿ.30ರ ತನಕ ಕೊಯಮತ್ತೂರಿನಲ್ಲಿ ನಡೆದ 35ನೇ ಸಮಾವೇಶದಲ್ಲಿ ಭಾಗವಹಿಸಿ ಬಹುಮಾನ ಪಡೆದಿತ್ತು. ಇದಕ್ಕೂ ಮೊದಲು ಮೈಸೂರಿನಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ಬಂಗಾರದ ಪದಕ ಪಡೆದುಕೊಂಡಿತ್ತು. ಈ ಸಮಾವೇಶಗಳನ್ನು ‘ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ’ ಆಯೋಜಿಸಿತ್ತು.</p>.<p>ಸಾಹಸ್ ತಂಡದಲ್ಲಿ ಕಮಾಂಡರ್ ಗಿರೀಶ ಜಾಧವ್, ಸಿಬ್ಬಂದಿ ಸುರೇಂದ್ರ ಸಿಂಗ್, ದಿನಕರ್ ಹಾಗೂ ಇತರ ಐವರಿದ್ದಾರೆ. ಈ ತಂಡವು, ‘ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ನಲ್ಲಿ (ಡಬ್ಲ್ಯು.ಜೆ.ಎಫ್.ಎ.ಸಿ) ಇಂಜೆಕ್ಷನ್ ಪಂಪ್ ಅಳವಡಿಕೆ’ ಎಂಬ ವಿಷಯದಲ್ಲಿ ಅಧ್ಯಯನ ವರದಿಯನ್ನು ಮಂಡಿಸಿತ್ತು.</p>.<p>ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾವು, ಕೈಗಾರಿಕೆಗಳಲ್ಲಿ ತಯಾರಿಕೆ, ಸೇವೆ ಮತ್ತು ಆಡಳಿತ ವಿಭಾಗದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರದ ಬಗ್ಗೆ ಅವಲೋಕನ ಮಾಡುವ ಸಮಾನ ಮನಸ್ಕ ಉದ್ಯೋಗಿಗಳ ಸಂಘಟನೆಯಾಗಿದೆ. ಟಿ.ವಿ.ಎಸ್, ಐ.ಟಿ.ಸಿ, ಬಿ.ಇ.ಎಂ.ಎಲ್, ಬಿ.ಎಚ್.ಇ.ಎಲ್ ಮುಂತಾದ ಪ್ರಮುಖ ಸಂಸ್ಥೆಗಳೂ ಈ ಸಮಾವೇಶದಲ್ಲಿ ಭಾಗವಹಿಸುತ್ತವೆ. ಇದರಲ್ಲಿ ಈ ಬಾರಿ ದೇಶದ 497 ಬೃಹತ್ ಕೈಗಾರಿಕೆಗಳಿಂದ 2021 ತಂಡಗಳು ಸ್ಪರ್ಧಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕೆ ದುರಸ್ತಿ ಯಾರ್ಡ್, ತನ್ನ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ‘ಗುಣಮಟ್ಟದ ಪರಿಕಲ್ಪನೆಗಳಿಗಾಗಿ ಅಂತರರಾಷ್ಟ್ರೀಯ ಸಮಾವೇಶ 2022’ಕ್ಕೆ ಆಯ್ಕೆಯಾಗಿದೆ. ಸಮಾವೇಶವು ಇಂಡೋನೇಷ್ಯದಲ್ಲಿ ಈ ವರ್ಷ ಆಯೋಜನೆಯಾಗಲಿದೆ.</p>.<p>ನೌಕೆ ದುರಸ್ತಿ ಯಾರ್ಡ್ನ ಗುಣಮಟ್ಟ ನಿಯಂತ್ರಣದ ತಂಡ ‘ಸಾಹಸ್’, ಕಳೆದ ವರ್ಷ ಡಿ.27ರಿಂದ ಡಿ.30ರ ತನಕ ಕೊಯಮತ್ತೂರಿನಲ್ಲಿ ನಡೆದ 35ನೇ ಸಮಾವೇಶದಲ್ಲಿ ಭಾಗವಹಿಸಿ ಬಹುಮಾನ ಪಡೆದಿತ್ತು. ಇದಕ್ಕೂ ಮೊದಲು ಮೈಸೂರಿನಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ಬಂಗಾರದ ಪದಕ ಪಡೆದುಕೊಂಡಿತ್ತು. ಈ ಸಮಾವೇಶಗಳನ್ನು ‘ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ’ ಆಯೋಜಿಸಿತ್ತು.</p>.<p>ಸಾಹಸ್ ತಂಡದಲ್ಲಿ ಕಮಾಂಡರ್ ಗಿರೀಶ ಜಾಧವ್, ಸಿಬ್ಬಂದಿ ಸುರೇಂದ್ರ ಸಿಂಗ್, ದಿನಕರ್ ಹಾಗೂ ಇತರ ಐವರಿದ್ದಾರೆ. ಈ ತಂಡವು, ‘ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ನಲ್ಲಿ (ಡಬ್ಲ್ಯು.ಜೆ.ಎಫ್.ಎ.ಸಿ) ಇಂಜೆಕ್ಷನ್ ಪಂಪ್ ಅಳವಡಿಕೆ’ ಎಂಬ ವಿಷಯದಲ್ಲಿ ಅಧ್ಯಯನ ವರದಿಯನ್ನು ಮಂಡಿಸಿತ್ತು.</p>.<p>ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾವು, ಕೈಗಾರಿಕೆಗಳಲ್ಲಿ ತಯಾರಿಕೆ, ಸೇವೆ ಮತ್ತು ಆಡಳಿತ ವಿಭಾಗದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರದ ಬಗ್ಗೆ ಅವಲೋಕನ ಮಾಡುವ ಸಮಾನ ಮನಸ್ಕ ಉದ್ಯೋಗಿಗಳ ಸಂಘಟನೆಯಾಗಿದೆ. ಟಿ.ವಿ.ಎಸ್, ಐ.ಟಿ.ಸಿ, ಬಿ.ಇ.ಎಂ.ಎಲ್, ಬಿ.ಎಚ್.ಇ.ಎಲ್ ಮುಂತಾದ ಪ್ರಮುಖ ಸಂಸ್ಥೆಗಳೂ ಈ ಸಮಾವೇಶದಲ್ಲಿ ಭಾಗವಹಿಸುತ್ತವೆ. ಇದರಲ್ಲಿ ಈ ಬಾರಿ ದೇಶದ 497 ಬೃಹತ್ ಕೈಗಾರಿಕೆಗಳಿಂದ 2021 ತಂಡಗಳು ಸ್ಪರ್ಧಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>