<p><strong>ಶಿರಸಿ:</strong> ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದೆ. ಮರುಡಾಂಬರೀಕರಣ ಮಾಡುವಂತೆ ಒತ್ತಾಯಿಸಿದ್ದ ಗ್ರಾಮಸ್ಥರ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳಿವೆ.</p>.<p>ಸುಮಾರು 4 ಕಿ.ಮೀ. ಉದ್ದದ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿವೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಶಿರಸಿಗೆ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳನ್ನು ಜೋಡಿಸುವ ಮುಖ್ಯ ರಸ್ತೆಯಲ್ಲಿ ಈಗ ಸಂಚಾರಕ್ಕೆ ಸ್ಥಳೀಯರೇ ಹಿಂದೇಟು ಹಾಕುವ ಸ್ಥಿತಿ ಇದೆ.</p>.<p>ಕಳೆದ ವರ್ಷ ಸುರಿದ ಅತಿವೃಷ್ಟಿಯ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಹೊಂಡಗಳೇ ತುಂಬಿರುವ ಮಾರ್ಗದಲ್ಲಿ ರಸ್ತೆ ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂಬುದು ವಾಹನ ಸವಾರರ ಮಾತು.</p>.<p>ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ನಿರಂತರವಾಗಿ ಮಳೆ ಸುರಿದರೆ ಹೊಂಡಗಳಲ್ಲಿ ನೀರು ನಿಂತು ವಾಹನಗಳು ಸಾಗಲು ಸಮಸ್ಯೆ ಆಗುತ್ತಿದೆ ಎಂಬುದು ಸ್ಥಳೀಯರ ದೂರು.</p>.<p>‘ಮೂರ್ನಾಲ್ಕು ವರ್ಷದಿಂದ ರಸ್ತೆ ಹಾಳಾದ ಸ್ಥಿತಿಯಲ್ಲೇ ಇದೆ. ಬೆಡಸಗಾಂವದಿಂದ ಉಲ್ಲಾಳದವರೆಗೆ ರಸ್ತೆ ದುರಸ್ಥಿಯಾಗಿದೆ. ಆದರೆ ಅದರ ನಂತರದ ಶಿರಸಿ ತಾಲ್ಲೂಕಿಗೆ ಸೇರಿದ ಭಾಗದಲ್ಲಿ ಮಾತ್ರ ದುರಸ್ಥಿ ಕಾರ್ಯವೇ ನಡೆದಿಲ್ಲ’ ಎನ್ನುತ್ತಾರೆ ಸ್ಥಳೀಯ ಮನೋಜ್ ನಾಯ್ಕ.</p>.<p>‘ಬಿಸಲಕೊಪ್ಪ, ಉಲ್ಲಾಳ ಭಾಗದ ಜನರು ಇದೇ ರಸ್ತೆ ಅವಲಂಭಿಸಿದ್ದು ಕೃಷಿ ಬೆಳೆಗಳನ್ನು ಸಾಗಿಸಲು ತೊಂದರೆಪಟ್ಟಿದ್ದಾರೆ. ವಿದ್ಯಾರ್ಥಿಗಳಿಗೂ ತೊಂದರೆಗಳಾಗಿವೆ. ಬಾಡಿಗೆ ವಾಹನಗಳು ಇಲ್ಲಿ ಓಡಾಟ ನಡೆಸಲು ಹಿಂದೇಟು ಹಾಕುತ್ತಿವೆ’ ಎನ್ನುತ್ತಾರೆ ಸ್ಥಳೀಯರಾದ ಶೇಷಗಿರಿ ಹೆಗಡೆ.</p>.<p>‘ಅತಿವೃಷ್ಟಿ ಪರಿಹಾರ ಅನುದಾನದಲ್ಲಿ ರಸ್ತೆ ದುರಸ್ಥಿ ಮಾಡುತ್ತೇವೆ. ಇದಕ್ಕಾಗಿ ₹60 ಲಕ್ಷ ಮೀಸಲಿಟ್ಟಿದ್ದೇವೆ ಎಂದು ಹಲವು ತಿಂಗಳ ಹಿಂದೆಯೇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಈವರೆಗೂ ರಸ್ತೆ ದುರಸ್ಥಿಯನ್ನೂ ಮಾಡಿಲ್ಲ’ ಎಂದು ಸ್ಥಳೀಯ ಕೆಲವರು ಆರೋಪಿಸಿದರು.</p>.<p class="Subhead">ರಾಜಕೀಯ ಹಗೆತನ!</p>.<p>ಬಿಸಲಕೊಪ್ಪ–ಉಲ್ಲಾಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಅದನ್ನು ದುರಸ್ಥಿಪಡಿಸದಿಲ್ಲರುವುದರ ಹಿಂದೆ ರಾಜಕೀಯ ಹಗೆತನದ ಕಾರಣವಿದೆ. ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಉದ್ದೇಶಪೂರ್ವಕವಾಗಿ ಅನುದಾನ ತಡೆಹಿಡಿದಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಮುಖಂಡರು.</p>.<p>‘ಕಳೆದ ಸಾಲಿನ ಅತಿವೃಷ್ಟಿ ಅನುದಾನದಲ್ಲಿ ರಸ್ತೆಗೆ ಮೊದಲು ಅನುದಾನ ಬಿಡುಗಡೆ ಮಾಡಿದ್ದರು. ಕೊನೆ ಕ್ಷಣದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಜಕೀಯ ವೈಷಮ್ಯದ ಕಾರಣಕ್ಕೆ ಜನರಿಗೆ ತೊಂದರೆ ಉಂಟು ಮಾಡಿದ್ದನ್ನು ಮರೆಯಲಾರೆವು’ ಎಂದು ಎಚ್ಚರಿಸಿದ್ದಾರೆ.</p>.<p>-------------</p>.<p>ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ದುರಸ್ಥಿಗೆ ಅನುದಾನ ಲಭ್ಯತೆಯ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.</p>.<p class="Subhead">ಅನಿಲಕುಮಾರ್ ಎಸ್.</p>.<p>ಎಇಇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದೆ. ಮರುಡಾಂಬರೀಕರಣ ಮಾಡುವಂತೆ ಒತ್ತಾಯಿಸಿದ್ದ ಗ್ರಾಮಸ್ಥರ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳಿವೆ.</p>.<p>ಸುಮಾರು 4 ಕಿ.ಮೀ. ಉದ್ದದ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿವೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಶಿರಸಿಗೆ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳನ್ನು ಜೋಡಿಸುವ ಮುಖ್ಯ ರಸ್ತೆಯಲ್ಲಿ ಈಗ ಸಂಚಾರಕ್ಕೆ ಸ್ಥಳೀಯರೇ ಹಿಂದೇಟು ಹಾಕುವ ಸ್ಥಿತಿ ಇದೆ.</p>.<p>ಕಳೆದ ವರ್ಷ ಸುರಿದ ಅತಿವೃಷ್ಟಿಯ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಹೊಂಡಗಳೇ ತುಂಬಿರುವ ಮಾರ್ಗದಲ್ಲಿ ರಸ್ತೆ ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂಬುದು ವಾಹನ ಸವಾರರ ಮಾತು.</p>.<p>ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ನಿರಂತರವಾಗಿ ಮಳೆ ಸುರಿದರೆ ಹೊಂಡಗಳಲ್ಲಿ ನೀರು ನಿಂತು ವಾಹನಗಳು ಸಾಗಲು ಸಮಸ್ಯೆ ಆಗುತ್ತಿದೆ ಎಂಬುದು ಸ್ಥಳೀಯರ ದೂರು.</p>.<p>‘ಮೂರ್ನಾಲ್ಕು ವರ್ಷದಿಂದ ರಸ್ತೆ ಹಾಳಾದ ಸ್ಥಿತಿಯಲ್ಲೇ ಇದೆ. ಬೆಡಸಗಾಂವದಿಂದ ಉಲ್ಲಾಳದವರೆಗೆ ರಸ್ತೆ ದುರಸ್ಥಿಯಾಗಿದೆ. ಆದರೆ ಅದರ ನಂತರದ ಶಿರಸಿ ತಾಲ್ಲೂಕಿಗೆ ಸೇರಿದ ಭಾಗದಲ್ಲಿ ಮಾತ್ರ ದುರಸ್ಥಿ ಕಾರ್ಯವೇ ನಡೆದಿಲ್ಲ’ ಎನ್ನುತ್ತಾರೆ ಸ್ಥಳೀಯ ಮನೋಜ್ ನಾಯ್ಕ.</p>.<p>‘ಬಿಸಲಕೊಪ್ಪ, ಉಲ್ಲಾಳ ಭಾಗದ ಜನರು ಇದೇ ರಸ್ತೆ ಅವಲಂಭಿಸಿದ್ದು ಕೃಷಿ ಬೆಳೆಗಳನ್ನು ಸಾಗಿಸಲು ತೊಂದರೆಪಟ್ಟಿದ್ದಾರೆ. ವಿದ್ಯಾರ್ಥಿಗಳಿಗೂ ತೊಂದರೆಗಳಾಗಿವೆ. ಬಾಡಿಗೆ ವಾಹನಗಳು ಇಲ್ಲಿ ಓಡಾಟ ನಡೆಸಲು ಹಿಂದೇಟು ಹಾಕುತ್ತಿವೆ’ ಎನ್ನುತ್ತಾರೆ ಸ್ಥಳೀಯರಾದ ಶೇಷಗಿರಿ ಹೆಗಡೆ.</p>.<p>‘ಅತಿವೃಷ್ಟಿ ಪರಿಹಾರ ಅನುದಾನದಲ್ಲಿ ರಸ್ತೆ ದುರಸ್ಥಿ ಮಾಡುತ್ತೇವೆ. ಇದಕ್ಕಾಗಿ ₹60 ಲಕ್ಷ ಮೀಸಲಿಟ್ಟಿದ್ದೇವೆ ಎಂದು ಹಲವು ತಿಂಗಳ ಹಿಂದೆಯೇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಈವರೆಗೂ ರಸ್ತೆ ದುರಸ್ಥಿಯನ್ನೂ ಮಾಡಿಲ್ಲ’ ಎಂದು ಸ್ಥಳೀಯ ಕೆಲವರು ಆರೋಪಿಸಿದರು.</p>.<p class="Subhead">ರಾಜಕೀಯ ಹಗೆತನ!</p>.<p>ಬಿಸಲಕೊಪ್ಪ–ಉಲ್ಲಾಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಅದನ್ನು ದುರಸ್ಥಿಪಡಿಸದಿಲ್ಲರುವುದರ ಹಿಂದೆ ರಾಜಕೀಯ ಹಗೆತನದ ಕಾರಣವಿದೆ. ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಉದ್ದೇಶಪೂರ್ವಕವಾಗಿ ಅನುದಾನ ತಡೆಹಿಡಿದಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಮುಖಂಡರು.</p>.<p>‘ಕಳೆದ ಸಾಲಿನ ಅತಿವೃಷ್ಟಿ ಅನುದಾನದಲ್ಲಿ ರಸ್ತೆಗೆ ಮೊದಲು ಅನುದಾನ ಬಿಡುಗಡೆ ಮಾಡಿದ್ದರು. ಕೊನೆ ಕ್ಷಣದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಜಕೀಯ ವೈಷಮ್ಯದ ಕಾರಣಕ್ಕೆ ಜನರಿಗೆ ತೊಂದರೆ ಉಂಟು ಮಾಡಿದ್ದನ್ನು ಮರೆಯಲಾರೆವು’ ಎಂದು ಎಚ್ಚರಿಸಿದ್ದಾರೆ.</p>.<p>-------------</p>.<p>ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ದುರಸ್ಥಿಗೆ ಅನುದಾನ ಲಭ್ಯತೆಯ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.</p>.<p class="Subhead">ಅನಿಲಕುಮಾರ್ ಎಸ್.</p>.<p>ಎಇಇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>