ಕಾಡಿನ ನಾಶಕ್ಕೆ ಅಲ್ಲಿನ ಮೂಲವಾಸಿಗಳು ಕಾರಣರಲ್ಲ. ಗಣಿಗಾರಿಕೆ, ಅರಣ್ಯ ಅವಲಂಬಿತ ಉದ್ದಿಮೆ, ಕಾಡುಗಳ್ಳರ ಹಾವಳಿ, ರಸ್ತೆ, ಅಣೆಕಟ್ಟು ನಿರ್ಮಾಣಕ್ಕೆ ಕಾಡು ನಾಶವಾಗಿದೆ. ಅರಣ್ಯಕ್ಕೆ ವ್ಯಾಪಕ ಬೆಂಕಿ ಬಿದ್ದರೂ, ಅದರ ತಡೆಗೆ ಯೋಚನೆಗಳು ನಡೆಯುತ್ತಿಲ್ಲ. ಎಲ್ಲ ರೀತಿಯ ಅರಣ್ಯನಾಶಕ್ಕೆ ಅರಣ್ಯವಾಸಿಗಳೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇವುಗಳ ಬಗ್ಗೆ ಗಮನ ಹರಿಸದೇ ಬಡ ವನವಾಸಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ ಎಂದು ನಾಗಮೋಹನದಾಸ್ ಹೇಳಿದರು.