ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಸುಮಾರು 18,000 ಹೆಕ್ಟೇರ್ನಲ್ಲಿ ಅಡಕೆ ಕೃಷಿ ಮಾಡಲಾಗುತ್ತಿದೆ. ಶೇ 25ರಷ್ಟು ಅಡಿಕೆ ಬೆಳೆಗಾರರು ಮಳೆಗಾಲದ ಎದುರಿನಲ್ಲಿ ಬಯೋಫೈಟ್ ಸಿಂಪಡಿಸಿದರೆ, ಇನ್ನುಳಿದ ಬೆಳೆಗಾರರು ಮೈಲುತುತ್ತ, ಸುಣ್ಣದ ಮಿಶ್ರಣದ ಬೋರ್ಡೊ ದ್ರಾವಣ ಸಿಂಪರಣೆ ಮಾಡುತ್ತಾರೆ. ಒಂದೆರಡು ಮಳೆಯಾದ ನಂತರ ಮದ್ದು ಸಿಂಪರಣೆ ಕಾರ್ಯ ಜೋರಾಗಿ ನಡೆಯುತ್ತದೆ. ಹೀಗಾಗಿ, ಒಮ್ಮೆಲೇ ಎಲ್ಲರ ತೋಟದಲ್ಲೂ ಈ ಕಾರ್ಯ ನಡೆಯುವುದರಿಂದ, ಪರಿಣಿತಿ ಹೊಂದಿರುವ ಕೊನೆಗೌಡರ ಅಭಾವ ಸೃಷ್ಟಿಯಾಗುತ್ತದೆ.