ಮೃತದೇಹದಗಂಟಲು ದ್ರವದ ಮಾದರಿಯನ್ನುಭಾನುವಾರ ಬೆಳಿಗ್ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯು ಮಧ್ಯಾಹ್ನ ಬಂದಿದ್ದು, ಕೋವಿಡ್ 19 ದೃಡಪಟ್ಟಿದೆ. ಮೃತದೇಹವನ್ನು ಪಿ.ಪಿ.ಇ ಬ್ಯಾಗ್ನಲ್ಲಿ ಭದ್ರಪಡಿಸಿ ನಾಲ್ವರು ಪೌರ ಕಾರ್ಮಿಕರು ತೆಗೆದುಕೊಂಡು ಹೋದರು.ಕುಟುಂಬದ ನಾಲ್ವರು ಸದಸ್ಯರ ಸಮ್ಮುಖದಲ್ಲಿ, ಪೌರ ಸಮಾಧಿ ಮಾಡುವ ಸ್ಥಳದಲ್ಲಿ ಸೋಂಕು ನಿವಾರಕ ಸಿಂಪಡಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳೂ ಹಾಜರಿದ್ದರು.