<p><strong>ಶಿರಸಿ:</strong> ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಶಿರಸಿಯ 17 ವಿದ್ಯಾರ್ಥಿಗಳು ಬುಧವಾರ ಬನವಾಸಿಯಿಂದ ಶಿರಸಿವರೆಗೆ ಸ್ಕೇಟಿಂಗ್ ಮಾಡಿದರು.</p>.<p>ಬನವಾಸಿಯ ಕದಂಬ ವೃತ್ತದಿಂದ ಸ್ಕೇಟಿಂಗ್ ಆರಂಭಿಸಿದ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಸಾಗಿದರು. ಗುಡ್ನಾಪುರ, ಉಂಚಳ್ಳಿ, ಅರೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ಕೊರೊನಾ ಲಸಿಕೆ ಕುರಿತು ಅರಿವು ಮೂಡಿಸುವ ಕರಪತ್ರ ಹಂಚಿದರು.</p>.<p>ರಸ್ತೆಯ ಒಂದು ಬದಿಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲಿ ಪೊಲೀಸರು, ಪಾಲಕರು ಸುರಕ್ಷತೆ ಸಲುವಾಗಿ ಸಾಲಾಗಿ ವಾಹನ ಚಲಾಯಿಸುತ್ತ ಸಾಗಿದರು.</p>.<p>ಎರಡೂವರೆ ಗಂಟೆ ಬಳಿಕ ಶಿರಸಿ ನಗರಕ್ಕೆ ತಲುಪಿದ ವಿದ್ಯಾರ್ಥಿಗಳು ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.</p>.<p>'ಏ.11 ರಿಂದ 14ರವರೆಗೆ ದೇಶವ್ಯಾಪಿ ಕೊರೊನಾ ಲಸಿಕೋತ್ಸವಕ್ಕೆ ಪ್ರಧಾನಿ ನೀಡಿದ ಕರೆಯಂತೆ ವಿಶಿಷ್ಟ ರೀತಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು' ಎಂದು ಕಾರ್ಯಕ್ರಮ ಆಯೋಜಕ ಅದ್ವೈತ ಸ್ಕೇಟಿಂಗ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನ ಕಿರಣಕುಮಾರ್ ತಿಳಿಸಿದರು.</p>.<p>'ಮೊದಲ ಬಾರಿಗೆ ಇಷ್ಟು ದೂರ ಸ್ಕೇಟಿಂಗ್ ಮಾಡುತ್ತ ಸಂಚರಿಸಿದ್ದು ಅವಿಸ್ಮರಣೀಯ ಅನುಭವ. ನಾವು ಮಾಡಿದ ಜಾಗೃತಿ ಜನರನ್ನು ತಲುಪಿದರೆ ಸಾರ್ಥಕ ಎನಿಸುತ್ತದೆ' ಎಂದು ವಿದ್ಯಾರ್ಥಿನಿ ಅನಘ ಪ್ರತಿಕ್ರಿಯಿಸಿದರು.</p>.<p>ಸ್ಕೇಟಿಂಗ್ ಮೂಲಕ ನಡೆಸಿದ ಜಾಗೃತಿ ಅಭಿಯಾನಕ್ಕೆ ಬನವಾಸಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಚಾಲನೆ ನೀಡಿದ್ದರು. ಸಿಪಿಐ ಬಿ.ಯು.ಪ್ರದೀಪ ನೇತೃತ್ವದಲ್ಲಿ ಸುರಕ್ಷತೆ ವಹಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಕೊರೊನಾ ನಿಯಂತ್ರಣ ಮತ್ತು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಶಿರಸಿಯ 17 ವಿದ್ಯಾರ್ಥಿಗಳು ಬುಧವಾರ ಬನವಾಸಿಯಿಂದ ಶಿರಸಿವರೆಗೆ ಸ್ಕೇಟಿಂಗ್ ಮಾಡಿದರು.</p>.<p>ಬನವಾಸಿಯ ಕದಂಬ ವೃತ್ತದಿಂದ ಸ್ಕೇಟಿಂಗ್ ಆರಂಭಿಸಿದ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಸಾಗಿದರು. ಗುಡ್ನಾಪುರ, ಉಂಚಳ್ಳಿ, ಅರೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ಕೊರೊನಾ ಲಸಿಕೆ ಕುರಿತು ಅರಿವು ಮೂಡಿಸುವ ಕರಪತ್ರ ಹಂಚಿದರು.</p>.<p>ರಸ್ತೆಯ ಒಂದು ಬದಿಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲಿ ಪೊಲೀಸರು, ಪಾಲಕರು ಸುರಕ್ಷತೆ ಸಲುವಾಗಿ ಸಾಲಾಗಿ ವಾಹನ ಚಲಾಯಿಸುತ್ತ ಸಾಗಿದರು.</p>.<p>ಎರಡೂವರೆ ಗಂಟೆ ಬಳಿಕ ಶಿರಸಿ ನಗರಕ್ಕೆ ತಲುಪಿದ ವಿದ್ಯಾರ್ಥಿಗಳು ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.</p>.<p>'ಏ.11 ರಿಂದ 14ರವರೆಗೆ ದೇಶವ್ಯಾಪಿ ಕೊರೊನಾ ಲಸಿಕೋತ್ಸವಕ್ಕೆ ಪ್ರಧಾನಿ ನೀಡಿದ ಕರೆಯಂತೆ ವಿಶಿಷ್ಟ ರೀತಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು' ಎಂದು ಕಾರ್ಯಕ್ರಮ ಆಯೋಜಕ ಅದ್ವೈತ ಸ್ಕೇಟಿಂಗ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನ ಕಿರಣಕುಮಾರ್ ತಿಳಿಸಿದರು.</p>.<p>'ಮೊದಲ ಬಾರಿಗೆ ಇಷ್ಟು ದೂರ ಸ್ಕೇಟಿಂಗ್ ಮಾಡುತ್ತ ಸಂಚರಿಸಿದ್ದು ಅವಿಸ್ಮರಣೀಯ ಅನುಭವ. ನಾವು ಮಾಡಿದ ಜಾಗೃತಿ ಜನರನ್ನು ತಲುಪಿದರೆ ಸಾರ್ಥಕ ಎನಿಸುತ್ತದೆ' ಎಂದು ವಿದ್ಯಾರ್ಥಿನಿ ಅನಘ ಪ್ರತಿಕ್ರಿಯಿಸಿದರು.</p>.<p>ಸ್ಕೇಟಿಂಗ್ ಮೂಲಕ ನಡೆಸಿದ ಜಾಗೃತಿ ಅಭಿಯಾನಕ್ಕೆ ಬನವಾಸಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಚಾಲನೆ ನೀಡಿದ್ದರು. ಸಿಪಿಐ ಬಿ.ಯು.ಪ್ರದೀಪ ನೇತೃತ್ವದಲ್ಲಿ ಸುರಕ್ಷತೆ ವಹಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>