ತಾಲ್ಲೂಕಿನ ಕೊಲ್ಲಕ್ಕಿಪಾಲ್ ಮತ್ತು ಬೋರಿಹೊಂಡಗಳಲ್ಲಿ ಟಿ.ಸಿ ಅಳವಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಹಲವು ಕೆ.ಡಿ.ಪಿ. ಸಭೆಗಳಲ್ಲಿ ಆಗ್ರಹಿಸಿದ್ದರೂ, ಈ ವರೆಗೂ ಟೆಂಡರ್ ಸಹ ಆಗದಿರುವ ಕುರಿತಂತೆ ಸದಸ್ಯರಾದ ನಟರಾಜ ಗೌಡರ್ ಹಾಗೂ ನಾಗರಾಜ ಕವಡಿಕೇರಿ ಹೆಸ್ಕಾಂ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2017ರಲ್ಲೇ ಕಾಮಗಾರಿ ಮಂಜೂರಿಯಾಗಿತ್ತು, ಆದರೆ ಇನ್ನೂ ಕಾರ್ಯಗತ ಆಗದಿರುವುದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿಯ
ಕೊರತೆಯೇ ಕಾರಣ ಎಂದರು. ಇದಕ್ಕೆ ಪಟ್ಟಣದ ಎಸ್.ಒ ರಮಾಕಾಂತ ಪ್ರತಿಕ್ರಿಯಿಸಿ, ತಾವು ಇದನ್ನು ಪರಿಶೀಲಿಸಿದ್ದು, ಆನ್ಲೈನ್ ಟೆಂಡರ್ ಇತ್ಯಾದಿ ಕಾರಣಗಳಿಂದ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು.