ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರವಾರ: ಅಧ್ವಾನದ ಸ್ಥಿತಿಯಲ್ಲಿ ಮಕ್ಕಳ ಉದ್ಯಾನ

ಅನುದಾನ ಕೊರತೆಯ ನೆಪ: ನಿರ್ವಹಣೆಗೆ ಹಿಂದೇಟು ಹಾಕುತ್ತಿರುವ ಆರೋಪ
Published : 7 ಏಪ್ರಿಲ್ 2025, 6:39 IST
Last Updated : 7 ಏಪ್ರಿಲ್ 2025, 6:39 IST
ಫಾಲೋ ಮಾಡಿ
Comments
ಹಳಿಯಾಳದ ಮರಡಿ ಗುಡ್ಡದ ಇಕೋ ಪಾರ್ಕ್‌‍ನಲ್ಲಿ ನಿರ್ಮಿಸಿದ ನವಗ್ರಹ ವನ ಒಣಗಿರುವುದು
ಹಳಿಯಾಳದ ಮರಡಿ ಗುಡ್ಡದ ಇಕೋ ಪಾರ್ಕ್‌‍ನಲ್ಲಿ ನಿರ್ಮಿಸಿದ ನವಗ್ರಹ ವನ ಒಣಗಿರುವುದು
ಶಿರಸಿಯ ಮಕ್ಕಳ ಉದ್ಯಾನದಲ್ಲಿ ಜಾರುಬಂಡಿಗಳು ಹಾಳಾಗಿರುವುದು
ಶಿರಸಿಯ ಮಕ್ಕಳ ಉದ್ಯಾನದಲ್ಲಿ ಜಾರುಬಂಡಿಗಳು ಹಾಳಾಗಿರುವುದು
ಶಿರಸಿಯ ಜೂ ವೃತ್ತದಲ್ಲಿರುವ ಮಕ್ಕಳ ಉದ್ಯಾನದ ಪರಿಕರಗಳು ನಿರ್ವಹಣೆ ಇಲ್ಲದಾಗಿ ಜನರು ಭೇಟಿ ನೀಡಲು ಹಿಂದೇಟು ಹಾಕುವ ಸ್ಥಿತಿ ಇದೆ
ಶ್ರೀನಾಥ ಹೆಗಡೆ ಶಿರಸಿ ನಿವಾಸಿ
ವಿಹಾರಕ್ಕೆ ಬರುವವರು ಉದ್ಯಾನ ನಮ್ಮದು ಎನ್ನುವ ಭಾವನೆಯಿಂದ ಶುಚಿತ್ವ ಕಾಪಾಡಬೇಕು. ಸಾಧ್ಯವಾದರೆ ಸಾರ್ವಜನಿಕರು ಅಲ್ಲಿ ವನಮಹೋತ್ಸವ ಆಚರಿಸುವ ಸಂಪ್ರದಾಯ ಆರಂಭಿಸಬೇಕು
ಡಾ.ಜಯದೇವ ಬಳಗಂಡಿ ಕುಮಟಾ ವೈದ್ಯ
ಯಲ್ಲಾಪುರದ ಜೋಡುಕೆರೆ ಸಮೀಪದ ಉದ್ಯಾನ ಉತ್ತಮ ನಿರ್ವಹಣೆ ಮಾಡಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ನಿರ್ವಹಣೆಗೆ ಸ್ವಯಂಸೇವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡಬೇಕು
ನಾಗರಾಜ ನಾಯ್ಕ ಯಲ್ಲಾಪುರ ನೂತನ ನಗರ ನಿವಾಸಿ
ಕಾರವಾರದ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನಕ್ಕೆ ಪ್ರವಾಸಿಗರು ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದರೂ ವರ್ಷಗಳಿಂದ ಅದು ನಿರ್ವಹಣೆ ಇಲ್ಲದೆ ಹಾಳುಬಿದ್ದಿದೆ
ದೀಪಕ ತಾಂಡೇಲ ಕಾರವಾರ ಸ್ಥಳೀಯ ನಿವಾಸಿ
ಮಕ್ಕಳ ಆಟಿಕೆ ಪಾಲಕರ ಮೋಜು
ಮುಂಡಗೋಡ ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಂದು ಆಟವಾಡಿ ಖುಷಿಪಡುತ್ತಾರೆ. ಆದರೆ ಮಕ್ಕಳ ಜೊತೆ ಕೆಲವೊಮ್ಮೆ ವಯಸ್ಕರು ಜೋಕಾಲಿ ಇನ್ನಿತರ ಪರಿಕರಗಳನ್ನು ಬಳಸುವುದರಿಂದ ಪದೇ ಪದೇ ಪರಿಕರಗಳು ದುರಸ್ತಿಗೆ ಒಳಗಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಅರಣ್ಯ ಇಲಾಖೆಯ ಸಾಲುಮರದ ಸಸ್ಯೋದ್ಯಾನದಲ್ಲಿ ಉತ್ತಮವಾದ ಉದ್ಯಾನ ಮಕ್ಕಳ ಪರಿಕರಗಳು ಇದ್ದರೂ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಬಣ್ಣ ಮಾಸಿದ ತುಂಡರಿಸಿದ ಮಕ್ಕಳ ಆಟದ ಪರಿಕರಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ‘ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ದೊಡ್ಡವರಿಗೆ ವಾಕ್‌ ಮಾಡಲು ಅನುಕೂಲವಾಗಿದೆ. ಗಿಡಗಂಟಿಗಳ ಸ್ವಚ್ಛತೆಗೆ ತುಸು ಆದ್ಯತೆ ನೀಡಬೇಕಾಗಿದೆ. ಆದರೆ ಮಕ್ಕಳಿಗೆ ಆಟವಾಡಲು ಸಾಕಷ್ಟು ಸಂಖ್ಯೆಯಲ್ಲಿ ಪರಿಕರಗಳಿದ್ದರೂ ದುರಸ್ತಿಗೆ ಕಾದಿರುವುದು ಕಂಡುಬರುತ್ತವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ.
ಬಿಡುಗಡೆಯಾಗದ ಅನುದಾನ
ಹೊನ್ನಾವರ ಪಟ್ಟಣದಲ್ಲಿ ಕೆಲ ಉದ್ಯಾನಗಳು ಜನರಿಗೆ ನೆಮ್ಮದಿ ನೀಡುವ ತಾಣಗಳಾಗಿಲ್ಲ ಎಂಬ ದೂರುಗಳು ಹೆಚ್ಚಿವೆ. ರಾಯಲ್‌ಕೇರಿಯ ಸಮೀಪ ಹಾಗೂ ಗಾಂಧಿನಗರದಲ್ಲಿ ಪಟ್ಟಣ ಪಂಚಾಯಿತಿ ಸುಪರ್ದಿಯಲ್ಲಿರುವ ಉದ್ಯಾನಗಳು ದುಸ್ಥಿತಿಯಲ್ಲಿವೆ. ‘ಗಾಂಧಿನಗರದ ಉದ್ಯಾನ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ’ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ. ಕರ್ನಲ್ ಹಿಲ್ ಸಮೀಪದ ರೋಟರಿ ಉದ್ಯಾನ ಕೇವಲ ಹೆಸರಿಗಷ್ಟೇ ಉದ್ಯಾನವಾಗಿ ಈಗ ಉಳಿದಿದೆ. ಪ್ರಭಾತನಗರದಲ್ಲಿರುವ ಅರಣ್ಯ ಇಲಾಖೆಯ ವನ ಕಿರಿದಾಗಿದ್ದು ಸೌಂದರ್ಯವಿಲ್ಲ. ‘ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳು ಕಳೆದಿವೆ. ಅನುದಾನ ಬಿಡುಗಡೆಯಾಗಿಲ್ಲ’ ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT