<p><strong>ಶಿರಸಿ</strong>: ಇಲ್ಲಿನ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ (ಟಿಆರ್ಸಿ)ಯು 2024-25ನೇ ಸಾಲಿನಲ್ಲಿ ₹1.27 ಕೋಟಿ ಲಾಭಗಳಿಸುವುದರೊಂದಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ.</p>.<p>‘ಸರ್ಕಾರದಿಂದ ರೈತರಿಗೆ ಸಿಗುವ ಬಡ್ಡಿ ರಿಯಾಯಿತಿ ಸಾಲಗಳನ್ನು ಸಂಘವು ಸಕಾಲಿಕವಾಗಿ ಒದಗಿಸುತ್ತಾ ಬಂದಿದ್ದು ಕೃಷಿಕರಿಗೆ ₹37 ಕೋಟಿಗೂ ಮೀರಿ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡಿದೆ. ವರದಿ ಸಾಲಿನಲ್ಲಿ ಸಂಘದ ಸದಸ್ಯರಿಗೆ ₹5.85 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮಾ ಪರಿಹಾರ ದೊರಕಿಸಲಾಗಿದೆ. ಅಲ್ಲದೆ ಟಿಆರ್ಸಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಸಾಧನಾ ಪ್ರಶಸ್ತಿ ಸಂಘಕ್ಕೆ ಲಭಿಸಿದೆ’ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ.</p>.<p>‘ಕಳೆದ ಮಾರ್ಚ್ ಅಂತ್ಯಕ್ಕೆ ಇದ್ದಂತೆ ಸಂಘದ ದುಡಿಯುವ ಬಂಡವಾಳ ₹152 ಕೋಟಿ ಇದೆ. ಸದಸ್ಯರಿಗೆ ವಿತರಿಸಿದ ಸಾಲ ₹122 ಕೋಟಿ ಆಗಿದೆ. ಸಾಲ ವಸೂಲಿ ಪ್ರಮಾಣ ಶೇ.99.83ರಷ್ಟಿದ್ದು, 2024-25ನೇ ಸಾಲಿನಲ್ಲಿ 21,400 ಕ್ವಿಂಟಲ್ ಮಹಸೂಲು ಸಂಘದ ಮೂಲಕ ಮಾರಲಾಗಿದೆ. ಇದರ ಮೊತ್ತ ₹59 ಕೋಟಿಗೂ ಅಧಿಕವಾಗಿದೆ. ಮಾರ್ಚ್ ಅಂತ್ಯಕ್ಕೆ ಸದಸ್ಯರ ಶೇರು ₹11ಕೋಟಿ ಇದ್ದು, ಇದು ಕಳೆದ ಸಾಲಿಗಿಂತ ಶೇ.10.31ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಸದಸ್ಯರ ಠೇವು ₹76 ಕೋಟಿ, ನಿಧಿಗಳು ₹15 ಕೋಟಿ, ಸಂಘದ ಸಾಲ ₹27 ಕೋಟಿ ಇದ್ದು, ಎಲ್ಲ ವಿಭಾಗಳಲ್ಲಿ ಪ್ರಗತಿ ದಾಖಲಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಸಂಘದ ಸದಸ್ಯರಿಗೆ ಬೆಳೆಸಾಲದ ಜತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆಗೆ ಕೆಸಿಸಿ ಸಾಲ ನೀಡುತ್ತಿದ್ದು ಪ್ರಸಕ್ತ ವರ್ಷದಿಂದ ಶೂನ್ಯ ಬಡ್ಡಿದರದಲ್ಲಿ ಜೇನು ಸಾಕಾಣಿಕೆಗೆ ಸಾಲ ನೀಡಲು ಪ್ರಾರಂಭಿಸಲಾಗಿದೆ. </strong></p><p><strong>-ರಾಮಕೃಷ್ಣ ಹೆಗಡೆ ಕಡವೆ ಟಿಆರ್ಸಿ ಅಧ್ಯಕ್ಷ</strong> </p>.<p> ಸೆ.18 ರಂದು ವಾರ್ಷಿಕ ಸಭೆ: ಟಿಆರ್ಸಿಯ 112ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ.18 ರಂದು ಬೆಳಿಗ್ಗೆ 10 ಗಂಟೆಗೆ ಟಿಆರ್ಸಿ ಸಭಾಭವನದಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಇಲ್ಲಿನ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ (ಟಿಆರ್ಸಿ)ಯು 2024-25ನೇ ಸಾಲಿನಲ್ಲಿ ₹1.27 ಕೋಟಿ ಲಾಭಗಳಿಸುವುದರೊಂದಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ.</p>.<p>‘ಸರ್ಕಾರದಿಂದ ರೈತರಿಗೆ ಸಿಗುವ ಬಡ್ಡಿ ರಿಯಾಯಿತಿ ಸಾಲಗಳನ್ನು ಸಂಘವು ಸಕಾಲಿಕವಾಗಿ ಒದಗಿಸುತ್ತಾ ಬಂದಿದ್ದು ಕೃಷಿಕರಿಗೆ ₹37 ಕೋಟಿಗೂ ಮೀರಿ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡಿದೆ. ವರದಿ ಸಾಲಿನಲ್ಲಿ ಸಂಘದ ಸದಸ್ಯರಿಗೆ ₹5.85 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮಾ ಪರಿಹಾರ ದೊರಕಿಸಲಾಗಿದೆ. ಅಲ್ಲದೆ ಟಿಆರ್ಸಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಸಾಧನಾ ಪ್ರಶಸ್ತಿ ಸಂಘಕ್ಕೆ ಲಭಿಸಿದೆ’ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ.</p>.<p>‘ಕಳೆದ ಮಾರ್ಚ್ ಅಂತ್ಯಕ್ಕೆ ಇದ್ದಂತೆ ಸಂಘದ ದುಡಿಯುವ ಬಂಡವಾಳ ₹152 ಕೋಟಿ ಇದೆ. ಸದಸ್ಯರಿಗೆ ವಿತರಿಸಿದ ಸಾಲ ₹122 ಕೋಟಿ ಆಗಿದೆ. ಸಾಲ ವಸೂಲಿ ಪ್ರಮಾಣ ಶೇ.99.83ರಷ್ಟಿದ್ದು, 2024-25ನೇ ಸಾಲಿನಲ್ಲಿ 21,400 ಕ್ವಿಂಟಲ್ ಮಹಸೂಲು ಸಂಘದ ಮೂಲಕ ಮಾರಲಾಗಿದೆ. ಇದರ ಮೊತ್ತ ₹59 ಕೋಟಿಗೂ ಅಧಿಕವಾಗಿದೆ. ಮಾರ್ಚ್ ಅಂತ್ಯಕ್ಕೆ ಸದಸ್ಯರ ಶೇರು ₹11ಕೋಟಿ ಇದ್ದು, ಇದು ಕಳೆದ ಸಾಲಿಗಿಂತ ಶೇ.10.31ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಸದಸ್ಯರ ಠೇವು ₹76 ಕೋಟಿ, ನಿಧಿಗಳು ₹15 ಕೋಟಿ, ಸಂಘದ ಸಾಲ ₹27 ಕೋಟಿ ಇದ್ದು, ಎಲ್ಲ ವಿಭಾಗಳಲ್ಲಿ ಪ್ರಗತಿ ದಾಖಲಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಸಂಘದ ಸದಸ್ಯರಿಗೆ ಬೆಳೆಸಾಲದ ಜತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆಗೆ ಕೆಸಿಸಿ ಸಾಲ ನೀಡುತ್ತಿದ್ದು ಪ್ರಸಕ್ತ ವರ್ಷದಿಂದ ಶೂನ್ಯ ಬಡ್ಡಿದರದಲ್ಲಿ ಜೇನು ಸಾಕಾಣಿಕೆಗೆ ಸಾಲ ನೀಡಲು ಪ್ರಾರಂಭಿಸಲಾಗಿದೆ. </strong></p><p><strong>-ರಾಮಕೃಷ್ಣ ಹೆಗಡೆ ಕಡವೆ ಟಿಆರ್ಸಿ ಅಧ್ಯಕ್ಷ</strong> </p>.<p> ಸೆ.18 ರಂದು ವಾರ್ಷಿಕ ಸಭೆ: ಟಿಆರ್ಸಿಯ 112ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ.18 ರಂದು ಬೆಳಿಗ್ಗೆ 10 ಗಂಟೆಗೆ ಟಿಆರ್ಸಿ ಸಭಾಭವನದಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>