‘ಪೌರ ಕಾರ್ಮಿಕರ ಮೊಕದ್ದಂ ನಮ್ಮಿಂದ ಒತ್ತಾಯದಿಂದ ಡಿ.11ರಂದು ಈ ಕೆಲಸ ಮಾಡಿಸಿದ್ದಾರೆ. ನಾವು ಒಪ್ಪದಿದ್ದಾಗ ಪೌರಾಯುಕ್ತರೇ ಈ ಕೆಲಸ ಮಾಡಲು ಹೇಳಿದ್ದಾರೆ ಎಂದು ಹೆದರಿಸಿದ್ದಾರೆ. ಆ ಕಾರಣಕ್ಕಾಗಿ ನಾವು ಮಲ ಸಾಗಿಸುವ ಕೆಲಸ ಮಾಡಿದ್ದೇವೆ. ನಮಗೆ ಅನ್ಯಾಯವಾಗಿದೆ. ಹಾಗಾಗಿ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಪೌರ ಕಾರ್ಮಿಕರಾದ ರಂಗನಾಯಕಲು, ಅಭಿಷೇಕದೊಗಿಪೊಳು, ಮಂಜುನಾಥ ಮೊಹಿಕ್ಕರ, ನರಸಿಂಹ ದಾಸರಿ ದೂರಿನಲ್ಲಿ ಮನವಿ ಮಾಡಿದ್ದಾರೆ.